ETV Bharat / state

ಚಾಲೆಂಜಿಂಗ್ ಸ್ಟಾರ್ ಅಪ್ಪಟ ಅಭಿಮಾನಿ ’ಸುದೀಪ್’​ಗೆ ಸಿಗಲಿದೆಯಾ 'ದರ್ಶನ' ಭಾಗ್ಯ!

author img

By

Published : Jun 15, 2023, 11:51 AM IST

Updated : Jun 15, 2023, 12:48 PM IST

ನಟ ದರ್ಶನ್ ಅವರನ್ನು ನೋಡಬೇಕು ಎಂದು ಅಭಿಮಾನಿಯೊಬ್ಬ ಕಾದು ಕುಳಿತ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಮತ್ತಿಕೊಪ್ಪದಲ್ಲಿ ಬೆಳಕಿಗೆ ಬಂದಿದೆ.

darshan
ನಟ ದರ್ಶನ್
ನಟ ದರ್ಶನ್ ನೋಡಬೇಕೆಂದು ಪಟ್ಟು ಹಿಡಿದ ಅಭಿಮಾನಿ

ಶಿವಮೊಗ್ಗ : ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ ಎಂದು ಫ್ಯಾನ್ಸ್​‌ ಕಾತರದಿಂದ ಕಾಯುತ್ತಾ ಇರುತ್ತಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ನಟನ ಸ್ಟೈಲ್ ಫಾಲೋ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಅಭಿಮಾನಿ ನಟ ದರ್ಶನ್​ ಅವರನ್ನು ನೋಡುವ ಭಾಗ್ಯ ಸಿಕ್ಕರೆ ಸಾಕು ಎಂದು ಕಾದು ಕುಳಿತಿದ್ದಾರೆ.

ಅಂದಹಾಗೆ, ಈ ಅಭಿಮಾನಿಯ ಹೆಸರು ಸುದೀಪ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಮತ್ತಿಕೊಪ್ಪದ ನಿವಾಸಿ ಆಗಿದ್ದಾರೆ. ಮತ್ತಿಕೊಪ್ಪ ಗ್ರಾಮದ ಹಿರಿಯಣ್ಣ ಹಾಗೂ ತಾರಾ ದಂಪತಿಯ ಎರಡನೇ ಪುತ್ರನೇ ಈ ಸುದೀಪ್​. ಅಂದ ಹಾಗೆ ಸುದೀಪ್​ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಪಂಚಪ್ರಾಣ. ಡಿ ಬಾಸ್​ ಎಂದರೆ ಸಾಕು ಇವರು ಒಮ್ಮಿಂದೊಮ್ಮಲೇ ಪುಳಕಿತರಾಗಿ ಬಿಡುತ್ತಾರೆ.

ದಚ್ಚು ಸಿನಿಮಾಗಳನ್ನು ನೋಡಿಯೇ ಇವರು ಬೆಳೆದಿದ್ದಾರೆ. ಹೀಗಾಗಿ ಅಪ್ಪಟ ಅಭಿಮಾನಿ ಸುದೀಪ್​ಗೆ ನಟ ದರ್ಶನ್ ಅವರೇ ಎಲ್ಲವೂ ಆಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರು ಅವರನ್ನು ನೋಡಬೇಕು ಎಂಬುದು ಅವರ ಹೆಬ್ಬಯಕೆ ಆಗಿದೆ. ಅಷ್ಟೇ ಅಲ್ಲ ನೆಚ್ಚಿನ ನಟನ ಕೈ ಕುಲುಕಬೇಕು, ಅವರ ಹತ್ತಿರ ಮಾತನಾಡಬೇಕು ಎಂಬುದು ಈತನ ಹಂಬಲ. ಇದಕ್ಕಾಗಿ ಈತ ಮನೆ ಬಿಟ್ಟು ಅನೇಕ ಬಾರಿ ಬೆಂಗಳೂರಿಗೆ ಸಹ ಹೋಗಿದ್ದ. ಆದರೆ, ಈವರೆಗೂ ದರ್ಶನ್ ಅವರ ದರ್ಶನ ಭಾಗ್ಯ ಸಿಕ್ಕಿಲ್ಲ.

ಇದನ್ನು ಓದಿ:ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಜನ್ಮದಿನ : ಸರ್ಕಾರಿ ಶಾಲೆಗೆ ಡೆಸ್ಕ್​​ ವಿತರಿಸಿದ ಕೊಪ್ಪಳ ಅಭಿಮಾನಿಗಳು

ಇನ್ನು ಸುದೀಪ್, 6 ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ಚಿತ್ರನಟ ದರ್ಶನ್​ ಅವರ ಅಪ್ಪಟ ಅಭಿಮಾನಿಯಾಗಿದ್ದ. ದರ್ಶನ ಅಭಿನಯದ ಸಾರಥಿ, ಅರ್ಜುನ ಐಪಿಎಸ್,ನವಗ್ರಹ, ಸ್ವಾಮಿ ಹೀಗೆ ಹಲವು ಚಿತ್ರಗಳನ್ನು ನೋಡಿ ಆಕರ್ಷಿತನಾಗಿದ್ದಾನಂತೆ. ಚಿಕ್ಕಂದಿನಿಂದಲೇ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹೋತ್ಸವ : 201 ಜೋಡಿ ಗೃಹಸ್ಥಾಶ್ರಮಕ್ಕೆ, ನಟ ದರ್ಶನ್ ಭಾಗಿ

"ನಟ ದರ್ಶನ್ ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ, ಅವರ ಫಿಟ್​ನೆಸ್​ ಚೆನ್ನಾಗಿದೆ, ಎತ್ತರವಾಗಿದ್ದು, ಖಾಕಿ ಬಟ್ಟೆಯಲ್ಲಿ ನೋಡಲು ಸಖತ್​ ಕಟ್ಟುಮಸ್ತಾಗಿ ಕಾಣುತ್ತಾರೆ. ಅವರು ಚಾಲೆಂಜಿಂಗ್​ ಆಗಿಯೇ ಬೆಳೆದಿದ್ದು, ಅದಕ್ಕಾಗಿ ನನಗೆ ಅವರೆಂದರೆ ಭಾರಿ ಇಷ್ಟ. ಅವರನ್ನು ನೋಡಲು ಹಲವಾರು ಬಾರಿ ಮನೆಯವರಿಗೂ ತಿಳಿಸದೇ ಬೆಂಗಳೂರಿಗೆ ರೈಲು ಹತ್ತಿಕೊಂಡು ಹೋಗಿದ್ದೆ, ಆದರೆ ದರ್ಶನ ಅವರ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಾರೆ ಅಭಿಮಾನಿ ಸುದೀಪ್​

ಇದನ್ನೂ ಓದಿ : ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್​

ನಟ ದರ್ಶನ್ ನೋಡಬೇಕೆಂದು ಪಟ್ಟು ಹಿಡಿದ ಅಭಿಮಾನಿ

ಶಿವಮೊಗ್ಗ : ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ತವೆ ಎಂದು ಫ್ಯಾನ್ಸ್​‌ ಕಾತರದಿಂದ ಕಾಯುತ್ತಾ ಇರುತ್ತಾರೆ. ಇನ್ನೂ ಕೆಲವರು ತಮ್ಮ ನೆಚ್ಚಿನ ನಟನ ಸ್ಟೈಲ್ ಫಾಲೋ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ಅಭಿಮಾನಿ ನಟ ದರ್ಶನ್​ ಅವರನ್ನು ನೋಡುವ ಭಾಗ್ಯ ಸಿಕ್ಕರೆ ಸಾಕು ಎಂದು ಕಾದು ಕುಳಿತಿದ್ದಾರೆ.

ಅಂದಹಾಗೆ, ಈ ಅಭಿಮಾನಿಯ ಹೆಸರು ಸುದೀಪ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆ ಸಮೀಪದ ಮತ್ತಿಕೊಪ್ಪದ ನಿವಾಸಿ ಆಗಿದ್ದಾರೆ. ಮತ್ತಿಕೊಪ್ಪ ಗ್ರಾಮದ ಹಿರಿಯಣ್ಣ ಹಾಗೂ ತಾರಾ ದಂಪತಿಯ ಎರಡನೇ ಪುತ್ರನೇ ಈ ಸುದೀಪ್​. ಅಂದ ಹಾಗೆ ಸುದೀಪ್​ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಪಂಚಪ್ರಾಣ. ಡಿ ಬಾಸ್​ ಎಂದರೆ ಸಾಕು ಇವರು ಒಮ್ಮಿಂದೊಮ್ಮಲೇ ಪುಳಕಿತರಾಗಿ ಬಿಡುತ್ತಾರೆ.

ದಚ್ಚು ಸಿನಿಮಾಗಳನ್ನು ನೋಡಿಯೇ ಇವರು ಬೆಳೆದಿದ್ದಾರೆ. ಹೀಗಾಗಿ ಅಪ್ಪಟ ಅಭಿಮಾನಿ ಸುದೀಪ್​ಗೆ ನಟ ದರ್ಶನ್ ಅವರೇ ಎಲ್ಲವೂ ಆಗಿದ್ದಾರೆ. ಜೀವನದಲ್ಲಿ ಒಮ್ಮೆಯಾದರು ಅವರನ್ನು ನೋಡಬೇಕು ಎಂಬುದು ಅವರ ಹೆಬ್ಬಯಕೆ ಆಗಿದೆ. ಅಷ್ಟೇ ಅಲ್ಲ ನೆಚ್ಚಿನ ನಟನ ಕೈ ಕುಲುಕಬೇಕು, ಅವರ ಹತ್ತಿರ ಮಾತನಾಡಬೇಕು ಎಂಬುದು ಈತನ ಹಂಬಲ. ಇದಕ್ಕಾಗಿ ಈತ ಮನೆ ಬಿಟ್ಟು ಅನೇಕ ಬಾರಿ ಬೆಂಗಳೂರಿಗೆ ಸಹ ಹೋಗಿದ್ದ. ಆದರೆ, ಈವರೆಗೂ ದರ್ಶನ್ ಅವರ ದರ್ಶನ ಭಾಗ್ಯ ಸಿಕ್ಕಿಲ್ಲ.

ಇದನ್ನು ಓದಿ:ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಜನ್ಮದಿನ : ಸರ್ಕಾರಿ ಶಾಲೆಗೆ ಡೆಸ್ಕ್​​ ವಿತರಿಸಿದ ಕೊಪ್ಪಳ ಅಭಿಮಾನಿಗಳು

ಇನ್ನು ಸುದೀಪ್, 6 ತರಗತಿಯಲ್ಲಿ ವ್ಯಾಸಂಗ ಮಾಡುವಾಗಲೇ ಚಿತ್ರನಟ ದರ್ಶನ್​ ಅವರ ಅಪ್ಪಟ ಅಭಿಮಾನಿಯಾಗಿದ್ದ. ದರ್ಶನ ಅಭಿನಯದ ಸಾರಥಿ, ಅರ್ಜುನ ಐಪಿಎಸ್,ನವಗ್ರಹ, ಸ್ವಾಮಿ ಹೀಗೆ ಹಲವು ಚಿತ್ರಗಳನ್ನು ನೋಡಿ ಆಕರ್ಷಿತನಾಗಿದ್ದಾನಂತೆ. ಚಿಕ್ಕಂದಿನಿಂದಲೇ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹೋತ್ಸವ : 201 ಜೋಡಿ ಗೃಹಸ್ಥಾಶ್ರಮಕ್ಕೆ, ನಟ ದರ್ಶನ್ ಭಾಗಿ

"ನಟ ದರ್ಶನ್ ಅವರು ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ, ಅವರ ಫಿಟ್​ನೆಸ್​ ಚೆನ್ನಾಗಿದೆ, ಎತ್ತರವಾಗಿದ್ದು, ಖಾಕಿ ಬಟ್ಟೆಯಲ್ಲಿ ನೋಡಲು ಸಖತ್​ ಕಟ್ಟುಮಸ್ತಾಗಿ ಕಾಣುತ್ತಾರೆ. ಅವರು ಚಾಲೆಂಜಿಂಗ್​ ಆಗಿಯೇ ಬೆಳೆದಿದ್ದು, ಅದಕ್ಕಾಗಿ ನನಗೆ ಅವರೆಂದರೆ ಭಾರಿ ಇಷ್ಟ. ಅವರನ್ನು ನೋಡಲು ಹಲವಾರು ಬಾರಿ ಮನೆಯವರಿಗೂ ತಿಳಿಸದೇ ಬೆಂಗಳೂರಿಗೆ ರೈಲು ಹತ್ತಿಕೊಂಡು ಹೋಗಿದ್ದೆ, ಆದರೆ ದರ್ಶನ ಅವರ ಭೇಟಿಗೆ ಅವಕಾಶ ಸಿಗುತ್ತಿಲ್ಲ ಎನ್ನುತ್ತಾರೆ ಅಭಿಮಾನಿ ಸುದೀಪ್​

ಇದನ್ನೂ ಓದಿ : ಹೆಣ್ಣು ಮಕ್ಕಳನ್ನು ಮುಟ್ಟುವ ಕಾಮುಕರಿಗೆ ತಕ್ಕ ಪಾಠವಾಗಬೇಕು: ನಟ ದರ್ಶನ್​

Last Updated : Jun 15, 2023, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.