ETV Bharat / state

ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ್, ರೆವಿನ್ಯೂ ಇನ್ಸ್​​​ಪೆಕ್ಟರ್​: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​​ ಖಂಡನೆ - ಶಿವಮೊಗ್ಗ ಲೆಟೆಸ್ಟ್ ನ್ಯೂಸ್

ಹಶೀಲ್ದಾರ್ ನಾಗರಾಜ್ ಕಳೆದ ಶುಕ್ರವಾರ ಶಿವಮೊಗ್ಗ ತಹಶೀಲ್ದಾರ್ ಅಗಿ ಅಧಿಕಾರ ಸ್ವೀಕರಿಸಿದ್ದು, ಅದರ ಮರು ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಅವರ ಜೊತೆ ರೆವಿನ್ಯೂ ಇನ್ಸ್​​​ಪೆಕ್ಟರ್ ವಿಜಯ್ ಕುಮಾರ್ ಕೂಡಾ ಸಚಿವರ ಕಾಲಿಗೆ ಬಿದ್ದಿದ್ದು, ಸದ್ಯ ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

Congress outrage against Tahsildar, Minister of Revenue Inspector who fell to the Minister's feet
ಸಚಿವರ ಕಾಲಿಗೆ ಬಿದ್ದ ತಹಶೀಲ್ದಾರ್, ರೆವಿನ್ಯೂ ಇನ್ಸ್​​​ಪೆಕ್ಟರ್....ಕಾಂಗ್ರೆಸ್ ಖಂಡನೆ
author img

By

Published : May 2, 2020, 3:51 PM IST

ಶಿವಮೊಗ್ಗ: ತಹಶೀಲ್ದಾರ್ ನಾಗರಾಜ್​​​ ಮತ್ತು ರೆವಿನ್ಯೂ ಇನ್ಸ್​​​ಪೆಕ್ಟರ್ ವಿಜಯ್ ಕುಮಾರ್ ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಸಾರ್ವಜನಿಕವಾಗಿ ಸಚಿವರೋರ್ವರ ಕಾಲಿಗೆ ಬೀಳುವ ಅಧಿಕಾರಿಗಳ ವರ್ತನೆ ನಿಜಕ್ಕೂ ಖಂಡನೀಯ. ತಾಲೂಕು ದಂಡಾಧಿಕಾರಿಯಾಗಿ ಒಂದು ಪಕ್ಷದ ಕಾರ್ಯಕರ್ತರ ರೀತಿ ವರ್ತನೆ ಮಾಡಿದ್ದಾರೆ. ಅಧಿಕಾರಿಗಳು ಹೀಗಿದ್ದರೆ ಜನಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಓರ್ವ ತಹಶೀಲ್ದಾರ್ ಅಗಿ ಸರ್ಕಾರಿ ಅಧಿಕಾರಿಗಳ ಸಮೂಹಕ್ಕೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ. ಹಾಗಾಗಿ ಈ ಕೂಡಲೇ ಆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ತಹಶೀಲ್ದಾರ್ ನಾಗರಾಜ್ ಕಳೆದ ಶುಕ್ರವಾರ ಶಿವಮೊಗ್ಗ ತಹಶೀಲ್ದಾರ್ ಅಗಿ ಅಧಿಕಾರ ಸ್ವೀಕರಿಸಿದ್ದು, ಅದರ ಮರು ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಅವರ ಜೊತೆ ರೆವಿನ್ಯೂ ಇನ್ಸ್​​​ಪೆಕ್ಟರ್ ವಿಜಯ್ ಕುಮಾರ್ ಕೂಡಾ ಸಚಿವರ ಕಾಲಿಗೆ ಬಿದ್ದಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಶಿವಮೊಗ್ಗ: ತಹಶೀಲ್ದಾರ್ ನಾಗರಾಜ್​​​ ಮತ್ತು ರೆವಿನ್ಯೂ ಇನ್ಸ್​​​ಪೆಕ್ಟರ್ ವಿಜಯ್ ಕುಮಾರ್ ಸಾರ್ವಜನಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಸಾರ್ವಜನಿಕವಾಗಿ ಸಚಿವರೋರ್ವರ ಕಾಲಿಗೆ ಬೀಳುವ ಅಧಿಕಾರಿಗಳ ವರ್ತನೆ ನಿಜಕ್ಕೂ ಖಂಡನೀಯ. ತಾಲೂಕು ದಂಡಾಧಿಕಾರಿಯಾಗಿ ಒಂದು ಪಕ್ಷದ ಕಾರ್ಯಕರ್ತರ ರೀತಿ ವರ್ತನೆ ಮಾಡಿದ್ದಾರೆ. ಅಧಿಕಾರಿಗಳು ಹೀಗಿದ್ದರೆ ಜನಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಓರ್ವ ತಹಶೀಲ್ದಾರ್ ಅಗಿ ಸರ್ಕಾರಿ ಅಧಿಕಾರಿಗಳ ಸಮೂಹಕ್ಕೆ ಅವಮಾನ ಮಾಡುವಂತೆ ನಡೆದುಕೊಂಡಿದ್ದಾರೆ. ಹಾಗಾಗಿ ಈ ಕೂಡಲೇ ಆ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ತಹಶೀಲ್ದಾರ್ ನಾಗರಾಜ್ ಕಳೆದ ಶುಕ್ರವಾರ ಶಿವಮೊಗ್ಗ ತಹಶೀಲ್ದಾರ್ ಅಗಿ ಅಧಿಕಾರ ಸ್ವೀಕರಿಸಿದ್ದು, ಅದರ ಮರು ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಅವರ ಜೊತೆ ರೆವಿನ್ಯೂ ಇನ್ಸ್​​​ಪೆಕ್ಟರ್ ವಿಜಯ್ ಕುಮಾರ್ ಕೂಡಾ ಸಚಿವರ ಕಾಲಿಗೆ ಬಿದ್ದಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.