ETV Bharat / state

ರೆಸೆಪ್​​ ಒಪ್ಪಂದ ರದ್ದು ಮಾಡುವಂತೆ ರಾಜ್ಯ ರೈತ ಸಂಘ ಮನವಿ - ಹಾಲು ಉತ್ಪಾದಕರಿಗೆ ಮಾರಕ

ಅಡಿಕೆ ಬೆಳೆಗಾರರು ಮತ್ತು ಹಾಲು ಉತ್ಪಾದಕರಿಗೆ ಮಾರಕವಾಗಿರುವ ರೆಸೆಪ್ ಒಪ್ಪಂದವನ್ನ ಹಿಂಪಡೆಯಬೇಕು ಎಂದು ರಾಜ್ಯ ರೈತ ಸಂಘಗಳು ಒತ್ತಾಯಿಸಿವೆ.

ರೈತ
author img

By

Published : Oct 22, 2019, 5:22 AM IST

Updated : Oct 22, 2019, 6:54 AM IST

ಶಿವಮೊಗ್ಗ: ರೆಸೆಪ್ ಒಪ್ಪಂದದಿಂದ ಭಾರತದ ರೈತರ ಕೃಷಿ, ಜೀವವೈವಿಧ್ಯತೆ ಹಾಗೂ ಸಾಮಾಜಿಕ ಜ್ಞಾನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೆಟಿ ಗಂಗಾಧರ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ .ಸಿ.ಇ.ಪಿ( ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಮುಕ್ತ ವ್ಯಾಪಾರ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯವಾಗಲಿದೆ. ಇದರಿಂದ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುತ್ತದೆ. ಭಾರತದ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ಅಪಾಯದ ಮಟ್ಟ ತಲುಪಲಿದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಈ ಎಲ್ಲ ಕಾರಣಗಳಿಂದ ಒಪ್ಪಂದವನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದಿದಂದ ಮನವಿ

ನವೆಂಬರ್ ತಿಂಗಳಲ್ಲಿ ಹೈದರಾಬಾದ್​ನಲ್ಲಿ ನಡೆಯುವ ಶೃಂಗಸಭೆಯಲ್ಲಿ ವಿಶ್ವದ 16 ದೇಶಗಳು ಭಾಗವಹಿಸಲಿದ್ದು ಸಂಸತ್ತಿನಲ್ಲಿ ರೆಸೆಪ್ ಬಗ್ಗೆ ಚರ್ಚೆ ಮಾಡದೆ ಈ ಒಪ್ಪಂದವನ್ನು ಒಪ್ಪಬಾರದು. ಏಕೆಂದರೆ ಭಾರತದ ದೇಶಿಯ ಮಾರುಕಟ್ಟೆ ಸಂಪೂರ್ಣ ನಾಶವಾಗುವ ಒಪ್ಪಂದಕ್ಕೆ ರೈತರ ವಿರೋಧವಿದೆ ಎಂದರು.

ಶಿವಮೊಗ್ಗ: ರೆಸೆಪ್ ಒಪ್ಪಂದದಿಂದ ಭಾರತದ ರೈತರ ಕೃಷಿ, ಜೀವವೈವಿಧ್ಯತೆ ಹಾಗೂ ಸಾಮಾಜಿಕ ಜ್ಞಾನದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೆಟಿ ಗಂಗಾಧರ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ .ಸಿ.ಇ.ಪಿ( ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ) ಮುಕ್ತ ವ್ಯಾಪಾರ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯವಾಗಲಿದೆ. ಇದರಿಂದ ಕೃಷಿ ಉತ್ಪನ್ನಗಳ ಆಮದು ಹೆಚ್ಚಾಗುತ್ತದೆ. ಭಾರತದ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ಅಪಾಯದ ಮಟ್ಟ ತಲುಪಲಿದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತವೆ. ಈ ಎಲ್ಲ ಕಾರಣಗಳಿಂದ ಒಪ್ಪಂದವನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದಿದಂದ ಮನವಿ

ನವೆಂಬರ್ ತಿಂಗಳಲ್ಲಿ ಹೈದರಾಬಾದ್​ನಲ್ಲಿ ನಡೆಯುವ ಶೃಂಗಸಭೆಯಲ್ಲಿ ವಿಶ್ವದ 16 ದೇಶಗಳು ಭಾಗವಹಿಸಲಿದ್ದು ಸಂಸತ್ತಿನಲ್ಲಿ ರೆಸೆಪ್ ಬಗ್ಗೆ ಚರ್ಚೆ ಮಾಡದೆ ಈ ಒಪ್ಪಂದವನ್ನು ಒಪ್ಪಬಾರದು. ಏಕೆಂದರೆ ಭಾರತದ ದೇಶಿಯ ಮಾರುಕಟ್ಟೆ ಸಂಪೂರ್ಣ ನಾಶವಾಗುವ ಒಪ್ಪಂದಕ್ಕೆ ರೈತರ ವಿರೋಧವಿದೆ ಎಂದರು.

Intro:ಶಿವಮೊಗ್ಗ,
ಅಡಿಕೆ ಬೆಳೆಗಾರರು ಮತ್ತು ಹಾಲು ಉತ್ಪಾದಕರಿಗೆ ಮಾರಕವಾಗಿರುವ ರೆಸೆಪ್ ಒಪ್ಪಂದ ವನ್ನ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸಂಘದ ವರಿಷ್ಠ ಕೆ ಟಿ ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರೆಸೆಪ್ ಒಪ್ಪಂದದಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಭಾರತದ ರೈತರ ಕೃಷಿ ಮತ್ತು ಜೀವವೈವಿಧ್ಯತೆ ಹಾಗೂ ಸಾಮಾಜಿಕ ಜ್ಞಾನದ ಮೇಲೆ ದುಷ್ಟ ಪರಿಣಾಮ ಉಂಟಾಗುತ್ತದೆ ಒಪ್ಪಂದಿಂದ ರೈತರ ಬದುಕಿಗೆ ಮಾರಕವಾಗಿದೆ ಎಂದರು.
ಆರ್ .ಸಿ.ಇ.ಪಿ( ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ)
ಮುಕ್ತ ವ್ಯಾಪಾರ ಒಪ್ಪಂದದಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ.
ಕೃಷಿ ಉತ್ಪನ್ನಗಳು ಆಮದು ಆಗುವುದೇ ಹೆಚ್ಚಾಗುತ್ತದೆ.
ಇದರಿಂದ ಭಾರತದ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರ ತೀವ್ರವಾಯಿತು ಅಪಾಯಕ್ಕೆ ಒಳಗಾಗುತ್ತದೆ.
ಬೀಜ ಕಂಪನಿಗಳು ಹೆಚ್ಚಿನ ಅಧಿಕಾರ ಪಡೆಯುತ್ತಾರೆ. ಎಲ್ಲ ಹಿನ್ನೆಲೆಯಲ್ಲಿ ಈ ಒಪ್ಪಂದ ಕೂಡಲೇ ರದ್ದಾಗಬೇಕು ಎಂದು ಒತ್ತಾಯಿಸಿದರು.
ನವಂಬರ್ ತಿಂಗಳಲ್ಲಿ ಹೈದರಾಬಾದ್ ನಲ್ಲಿ ನಡೆಯುವ ಶೃಂಗಸಭೆಯಲ್ಲಿ ವಿಶ್ವದ 16 ದೇಶಗಳು ಭಾಗವಹಿಸಲಿದ್ದು ಸಂಸತ್ನಲ್ಲಿ ರೆಸೆಪ್ ಬಗ್ಗೆ ಚರ್ಚೆ ಮಾಡದೆ ಈ ಒಪ್ಪಂದವನ್ನು ಒಪ್ಪಬಾರದು ಏಕೆಂದರೆ ಭಾರತದ ದೇಶಿಯ ಮಾರುಕಟ್ಟೆ ಸಂಪೂರ್ಣ ನಾಶವಾಗುವ ಒಪ್ಪಂದಕ್ಕೆ ರೈತರ ವಿರೋಧವಿದೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ


Body:ಭೀಮಾನಾಯ್ಕ ಎಸ್ ಶಿವಮೊಗ್ಗ


Conclusion:
Last Updated : Oct 22, 2019, 6:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.