ETV Bharat / state

ಚುನಾವಣೆ ಬಂದ್ರೇ ನಮ್ಮ ಕ್ಷೇತ್ರದಲ್ಲೇ ಎಲ್ಲರ ಠಿಕಾಣಿ- ಸಂಸದ ರಾಘವೇಂದ್ರ

ಚುನಾವಣೆಯಲ್ಲಿ ಎಲ್ಲರೂ ಬಂದು ನಮ್ಮ ಕ್ಷೇತ್ರದಲ್ಲಿ ಠಿಕಾಣಿ ಹಾಕುವುದು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಹೊಸತೇನೂ ಅಲ್ಲ. 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭೆಗೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲೂ ಸಹ ಸಿಎಂ ಆದಿಯಾಗಿ ಇಡೀ ಮಂತ್ರಿ ಮಂಡಲವೇ ಕ್ಷೇತ್ರದಲ್ಲಿ ಠಿಕಾಣಿ ಹಾಕಿತ್ತು ಎಂದು ಬಿ.ವೈ.ರಾಘವೇಂದ್ರ ಹೇಳಿದರು.

author img

By

Published : Mar 23, 2019, 5:01 PM IST

ಬಿ ವೈ ರಾಘವೇಂದ್ರ

ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಮತದಾರರು ಸಾಕಷ್ಟು ಪ್ರಜ್ಞಾವಂತರಿದ್ದಾರೆ. ಪ್ರಧಾನಮಂತ್ರಿಗಳು ರೈತರು, ಶೋಷಿತರು, ದಮನಿತರಿಗೆ ನೀಡಿದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ.‌ ದೇಶವೇ ಕುಟುಂಬ ಅಂತಾ ನೋಡುವ ಮೋದಿ ಒಂದು ಕಡೆಯಾದ್ರೇ, ದೇಶ, ಜನ ಇರುವುದೇ ನಮ್ಮ ಕುಟುಂಬಕ್ಕಾಗಿ ಎಂದು ಹೇಳುವ ಪಕ್ಷಗಳ ವಿರುದ್ಧ ಮತದಾರ ಸರಿಯಾದ ಪಾಠ ಕಲಿಸುತ್ತಾರೆ ಎಂದು ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಶಿವಮೊಗ್ಗ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಸಂಸದ ಬಿ.ವೈ ರಾಘವೇಂದ್ರ ಮನಬಿಚ್ಚಿ ಮಾತನಾಡಿದ್ದಾರೆ.ಬಿ ವೈ ರಾಘವೇಂದ್ರ

ಚುನಾವಣೆಯಲ್ಲಿ ಎಲ್ಲರು ಬಂದು ಶಿವಮೊಗ್ಗ ಕ್ಷೇತ್ರದಲ್ಲೇ ಠಿಕಾಣಿ ಹಾಕುವುದು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಹೊಸತೇನೂ ಅಲ್ಲ. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭೆಗೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲೂ ಸಹ ಸಿಎಂ ಆದಿಯಾಗಿ ಮಂತ್ರಿ ಮಂಡಲವೇ ಕ್ಷೇತ್ರದಲ್ಲಿ ಠಿಕಾಣಿ ಹಾಕಿತ್ತು. ಇದು ಸಹಜವಾಗಿ ಚುನಾವಣಾ ತಂತ್ರವಾಗಿದೆ. ಈ ಸವಾಲನ್ನು ನಮ್ಮ ಕಾರ್ಯಕರ್ತರು ಸವಾಲಾಗಿ ಸ್ವೀಕಾರ ಮಾಡುತ್ತಾರೆ.

ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಬೂತ್ ಕಾರ್ಯಕರ್ತರು ಅಭ್ಯರ್ಥಿ ಯಾರು ಅಂತಾ ನೋಡದೆ ಕೆಲಸ ಮಾಡುತ್ತಿದ್ದಾರೆ.‌ ಈ ಬಾರಿಯ ಕಾರ್ಯಕರ್ತರ ಪರಿಶ್ರಮಕ್ಕೆ ಹಾಗೂ ಅವರ ಬೆವರಿಗೆ ಮತದಾರ ಸರಿಯಾದ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ 2004ಕ್ಕೂ ಹೆಚ್ಚು ಬೂತ್​ನಲ್ಲೂ ಲೀಡ್ ತೆಗೆದುಕೊಳ್ಳುತ್ತೇನೆ. ಗೆಲುವಿನ ಅಂತರವನ್ನು ಈಗಲೇ ಹೇಳಲಾರೆ. ನಾಮಪತ್ರವನ್ನು ಮಾರ್ಚ್ 28 ರಂದು ಸಲ್ಲಿಸಲಾಗುವುದು. ಅಂದು ರಾಮಣ್ಣ ಪಾರ್ಕ್​​ನಿಂದ ಮೆರವಣಿಗೆ ಹೊರಟು ಡಿಸಿ ಕಚೇರಿಗೆ ತೆರಳಲಾಗುವುದು. ನಂತರ ಎನ್ಇಎನ್ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈಗಾಗಲೇ ಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.‌ ಬಿಜೆಪಿ ಕಾರ್ಯಕರ್ತರು ಸಹ‌ ಇನ್ನೂ‌ ಸ್ಪೀಡ್ ಅಪ್ ಮಾಡಬೇಕಿದೆ ಎಂದರು.

ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಮತದಾರರು ಸಾಕಷ್ಟು ಪ್ರಜ್ಞಾವಂತರಿದ್ದಾರೆ. ಪ್ರಧಾನಮಂತ್ರಿಗಳು ರೈತರು, ಶೋಷಿತರು, ದಮನಿತರಿಗೆ ನೀಡಿದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ.‌ ದೇಶವೇ ಕುಟುಂಬ ಅಂತಾ ನೋಡುವ ಮೋದಿ ಒಂದು ಕಡೆಯಾದ್ರೇ, ದೇಶ, ಜನ ಇರುವುದೇ ನಮ್ಮ ಕುಟುಂಬಕ್ಕಾಗಿ ಎಂದು ಹೇಳುವ ಪಕ್ಷಗಳ ವಿರುದ್ಧ ಮತದಾರ ಸರಿಯಾದ ಪಾಠ ಕಲಿಸುತ್ತಾರೆ ಎಂದು ಬಿ.ವೈ.ರಾಘವೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಶಿವಮೊಗ್ಗ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಸಂಸದ ಬಿ.ವೈ ರಾಘವೇಂದ್ರ ಮನಬಿಚ್ಚಿ ಮಾತನಾಡಿದ್ದಾರೆ.ಬಿ ವೈ ರಾಘವೇಂದ್ರ

ಚುನಾವಣೆಯಲ್ಲಿ ಎಲ್ಲರು ಬಂದು ಶಿವಮೊಗ್ಗ ಕ್ಷೇತ್ರದಲ್ಲೇ ಠಿಕಾಣಿ ಹಾಕುವುದು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಹೊಸತೇನೂ ಅಲ್ಲ. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭೆಗೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲೂ ಸಹ ಸಿಎಂ ಆದಿಯಾಗಿ ಮಂತ್ರಿ ಮಂಡಲವೇ ಕ್ಷೇತ್ರದಲ್ಲಿ ಠಿಕಾಣಿ ಹಾಕಿತ್ತು. ಇದು ಸಹಜವಾಗಿ ಚುನಾವಣಾ ತಂತ್ರವಾಗಿದೆ. ಈ ಸವಾಲನ್ನು ನಮ್ಮ ಕಾರ್ಯಕರ್ತರು ಸವಾಲಾಗಿ ಸ್ವೀಕಾರ ಮಾಡುತ್ತಾರೆ.

ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಬೂತ್ ಕಾರ್ಯಕರ್ತರು ಅಭ್ಯರ್ಥಿ ಯಾರು ಅಂತಾ ನೋಡದೆ ಕೆಲಸ ಮಾಡುತ್ತಿದ್ದಾರೆ.‌ ಈ ಬಾರಿಯ ಕಾರ್ಯಕರ್ತರ ಪರಿಶ್ರಮಕ್ಕೆ ಹಾಗೂ ಅವರ ಬೆವರಿಗೆ ಮತದಾರ ಸರಿಯಾದ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೂತ್ ಮಟ್ಟದ ಕಾರ್ಯಕರ್ತರ ಶ್ರಮದಿಂದ 2004ಕ್ಕೂ ಹೆಚ್ಚು ಬೂತ್​ನಲ್ಲೂ ಲೀಡ್ ತೆಗೆದುಕೊಳ್ಳುತ್ತೇನೆ. ಗೆಲುವಿನ ಅಂತರವನ್ನು ಈಗಲೇ ಹೇಳಲಾರೆ. ನಾಮಪತ್ರವನ್ನು ಮಾರ್ಚ್ 28 ರಂದು ಸಲ್ಲಿಸಲಾಗುವುದು. ಅಂದು ರಾಮಣ್ಣ ಪಾರ್ಕ್​​ನಿಂದ ಮೆರವಣಿಗೆ ಹೊರಟು ಡಿಸಿ ಕಚೇರಿಗೆ ತೆರಳಲಾಗುವುದು. ನಂತರ ಎನ್ಇಎನ್ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಈಗಾಗಲೇ ಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.‌ ಬಿಜೆಪಿ ಕಾರ್ಯಕರ್ತರು ಸಹ‌ ಇನ್ನೂ‌ ಸ್ಪೀಡ್ ಅಪ್ ಮಾಡಬೇಕಿದೆ ಎಂದರು.

Intro:ಜಿಲ್ಲೆಯ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ರವರೊಂದಿಗೆ ಜಿಲ್ಲಾ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ...

ಈ ಟಿವಿ ಭಾರತ -ಮುಂಬರುವ ಲೋಕಸಭ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳನ್ನು ಹೇಗೆ ಎದುರಿಸುತ್ತೀರಿ?
ಬಿವೈಆರ್- ಲೋಕಸಭ ಕ್ಷೇತ್ರದ ಮತದಾರರು ಸಾಕಷ್ಟು ಪ್ರಜ್ಞಾವಂತರಿದ್ದಾರೆ.ಪ್ರದಾನ ಮಂತ್ರಿಗಳು ರೈತರು, ಶೋಷಿತ ಪಿಡಿತ, ದಮನಿತರಿಗೆ ನೀಡಿದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ.‌ದೇಶವೇ ಕುಟುಂಬ ಅಂತ ನೋಡುವ ಮೋದಿ ಒಂದು ಕಡೆಯಾದ್ರೆ, ದೇಶ, ಜನ ಇರುವುದೇ ನಮ್ಮ ಕುಟುಂಬಕ್ಕಾಗಿ ಎಂದು ಹೇಳುವ ಪಕ್ಷಗಳ ವಿರುದ್ದ ಮತದಾರ ಸರಿಯಾದ ಪಾಠ ಕಲಿಸುತ್ತಾರೆ ಎಂದರು.

ಈ ಟಿವಿ ಭಾರತ್- ಚುನಾವಣೆಗೆ ಸಿಎಂ ಸೇರಿದಂತೆ ಪ್ರಮುಖ ಮುಖಂಡರುಗಳು ಕ್ಷೇತ್ರದಲ್ಲೆ ಠಿಕಾಣಿ ಹಾಕಲಿದ್ದು, ಇದಕ್ಕೆ ನಿಮ್ಮ ಪ್ರತಿತಂತ್ರ ಏನೂ?
ಬಿ.ವೈ.ಅರ್- ಚುನಾವಣೆಯಲ್ಲಿ ಎಲ್ಲಾರು ಬಂದು ನಮ್ಮ ಕ್ಷೇತ್ರದಲ್ಲಿ ಠಿಕಾಣಿ ಹಾಕುವುದು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಹೊಸತೇನೂ ಅಲ್ಲ. 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಲೋಕಸಭೆಗೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲೂ ಸಹ ಸಿಎಂ ಆದಿಯಾಗಿ ಮಂತ್ರಿ ಮಂಡಲ ಕ್ಷೇತ್ರದಲ್ಲಿ ಠಿಕಾಣಿ ಹಾಕಿತ್ತು. ಇದು ಸಹಜ ಚುನಾವಣಾ ತಂತ್ರವಾಗಿದೆ. ಈ ಸವಾಲನ್ನು ನಮ್ಮ ಕಾರ್ಯಕರ್ತರು ಸವಲಾಗಿ ಸ್ವೀಕರ ಮಾಡುತ್ತಾರೆ. ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಬೂತ್ ಕಾರ್ಯಕರ್ತರು ಅಭ್ಯರ್ಥಿ ಯಾರು ಅಂತ ನೋಡದೆ ಕೆಲ್ಸ ಮಾಡುತ್ತಿದ್ದಾರೆ.‌ಈ ಬಾರಿಯ ಕಾರ್ಯಕರ್ತರ ಪರಿಶ್ರಮಕ್ಕೆ ಹಾಗೂ ಅವರ ಬೆವರಿಗೆ ಮತದಾರ ಸರಿಯಾದ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.



Body:ಈ ಟಿವಿ ಭಾರತ್- ಕಳೆದ ಬಾರಿ ಮತಗಳ ಅಂತರ ಕಡಿಮೆಯಾಗಿತ್ತು, ಈ ಬಾರಿ ಎಷ್ಟು ಮತಗಳ ಅಂತರವನ್ನು ನಿರೀಕ್ಷೆ ಮಾಡುತ್ತೀರಿ?
ಬಿವೈಅರ್ -ಬೂತ ಮಟ್ಟದ ಕಾರ್ಯಕರ್ತರ ಶ್ರಮದಿಂದ 2004 ಬೂತ್ ನಲ್ಲೂ ಹೆಚ್ಚು ಲೀಡ್ ತೆಗೆದು ಕೊಳ್ಳುತ್ತೆನೆ. ಗೆಲುವಿನ ಅಂತರವನ್ನು ಈಗಲೇ ಹೇಳಲಾರೆ ಎಂದರು.

ನಾಮಪತ್ರ ಯಾವಗ ಸಲ್ಲಿಸುತ್ತೀರಿ ಹಾಗೂ ನಾಮಪತ್ರ ಸಲ್ಲಿಕೆಗೆ ಯಾವ ಯಾವ ಮುಖಂಡರು ಆಗಮಿಸಲಿದ್ದಾರೆ?
ಬಿವೈಅರ್- ನಾಮಪತ್ರವನ್ನು ಮಾರ್ಚ್ 28 ರಂದು ಸಲ್ಲಿಸಲಾಗುವುದು. ಅಂದು ರಾಮಣ್ಣ ಶ್ರೇಷ್ಡಿ ಪಾಕ್ ನಿಂದ ಮೆರವಣಿಗೆ ಹೊರಟು ಡಿಸಿ ಕಚೇರಿಗೆ ತೆರಳಾಗುವುದ. ನಂತ್ರ ಎನ್ ಇ ಎನ್ ಮೈದಾನದಲ್ಲಿ ಸಮಾವೇಶ ನಡೆಸಲಾಗುವುದು ಎಂದರು.


Conclusion:ಲೋಕಸಭ ಕ್ಷೇತ್ರದ ಅಭ್ಯಾರ್ಥಿ ಈಗಾಗಲೇ ಶಕ್ತಿ ಕೇಂದ್ರಗಳ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದಾರೆ.‌ ಬಿಜೆಪಿ ಕಾರ್ಯಕರ್ತರು ಸಹ‌ ಇನ್ನೂ‌ ಸ್ಪೀಡ್ ಆಪ್ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.