ETV Bharat / state

ಆಶಾ ಕಾರ್ಯಕರ್ತೆಯನ್ನು ನಾಯಿ ಎಂದು ನಿಂದಿಸಿದ ಸೋಂಕಿತ: ಕೇಸ್​ ದಾಖಲು

author img

By

Published : May 20, 2021, 7:19 PM IST

ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತನ ಮಾಹಿತಿ ಪಡೆಯಲು ಹೋದಾಗ ಆಶಾ ಕಾರ್ಯಕರ್ತೆಯನ್ನು ನಿಂದಿಸಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Abuse of Asha activist by corona patient
ಆಶಾ ಕಾರ್ಯಕರ್ತೆಯನ್ನು ನಾಯಿ ಎಂದು ನಿಂದಿಸಿದ ಸೋಂಕಿತ

ಶಿವಮೊಗ್ಗ: ಕೊರೊನಾ ವಾರಿಯರ್ಸ್​ಗೆ ಆವಾಜ್ ಹಾಕಿ ನಿಂದಿಸಿದ್ದವರ ವಿರುದ್ದ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Abuse of Asha activist by corona patient
ಆಶಾ ಕಾರ್ಯಕರ್ತೆಯನ್ನು ನಾಯಿ ಎಂದು ನಿಂದಿಸಿದ ಸೋಂಕಿತ

ಸಾಗರ ಆಶಾ ಕಾರ್ಯಕರ್ತೆ ಶರಾವತಿ ಕೋವಿಡ್ ಸೋಂಕಿತರಿಗೆ ಮಾಹಿತಿ ತಿಳಿಸಲು ಹಾಗೂ ಆರೋಗ್ಯ ವಿಚಾರಣೆಗೆ ಹೋಗಿದ್ದಾರೆ. ಲೋಹಿಯಾ ನಗರದ ಗಣೇಶ್ ಎಂಬುವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆರೋಗ್ಯ ವಿಚಾರಣೆಗೆ ಹೋದಾಗ ನೀವು ಪದೇ ಪದೆ ನಮ್ಮ ಮನೆಗೆ ಬರಬೇಡಿ. ನೀವು ಬಂದರೆ ಎಲ್ಲರಿಗೂ ನಾನು ಪಾಸಿಟಿವ್ ಎಂದು ತಿಳಿಯುತ್ತದೆ.

ನನಗೆ ವಾಕರಿಕೆ ಬರುತ್ತದೆ. ನೀವುಗಳು ನಾಯಿಗಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಶಾಸಕ ಹರತಾಳು ಹಾಲಪ್ಪಗೆ ಬಳಿ ತಮ್ಮ ಅಳಲು ತೋಡಿ‌ಕೊಂಡಿದ್ದರು. ಶಾಸಕರ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ದೂರು ದಾಖಲಿಸಿದ್ದಾರೆ.

ಓದಿ:ಕೊರೊನಾದಿಂದ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ಶಿವಮೊಗ್ಗ: ಕೊರೊನಾ ವಾರಿಯರ್ಸ್​ಗೆ ಆವಾಜ್ ಹಾಕಿ ನಿಂದಿಸಿದ್ದವರ ವಿರುದ್ದ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Abuse of Asha activist by corona patient
ಆಶಾ ಕಾರ್ಯಕರ್ತೆಯನ್ನು ನಾಯಿ ಎಂದು ನಿಂದಿಸಿದ ಸೋಂಕಿತ

ಸಾಗರ ಆಶಾ ಕಾರ್ಯಕರ್ತೆ ಶರಾವತಿ ಕೋವಿಡ್ ಸೋಂಕಿತರಿಗೆ ಮಾಹಿತಿ ತಿಳಿಸಲು ಹಾಗೂ ಆರೋಗ್ಯ ವಿಚಾರಣೆಗೆ ಹೋಗಿದ್ದಾರೆ. ಲೋಹಿಯಾ ನಗರದ ಗಣೇಶ್ ಎಂಬುವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಆರೋಗ್ಯ ವಿಚಾರಣೆಗೆ ಹೋದಾಗ ನೀವು ಪದೇ ಪದೆ ನಮ್ಮ ಮನೆಗೆ ಬರಬೇಡಿ. ನೀವು ಬಂದರೆ ಎಲ್ಲರಿಗೂ ನಾನು ಪಾಸಿಟಿವ್ ಎಂದು ತಿಳಿಯುತ್ತದೆ.

ನನಗೆ ವಾಕರಿಕೆ ಬರುತ್ತದೆ. ನೀವುಗಳು ನಾಯಿಗಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಆಶಾ ಕಾರ್ಯಕರ್ತೆಯರು ಶಾಸಕ ಹರತಾಳು ಹಾಲಪ್ಪಗೆ ಬಳಿ ತಮ್ಮ ಅಳಲು ತೋಡಿ‌ಕೊಂಡಿದ್ದರು. ಶಾಸಕರ ಸೂಚನೆ ಮೇರೆಗೆ ಆಶಾ ಕಾರ್ಯಕರ್ತೆ ದೂರು ದಾಖಲಿಸಿದ್ದಾರೆ.

ಓದಿ:ಕೊರೊನಾದಿಂದ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.