ETV Bharat / state

ರಾಮನಗರದಲ್ಲಿ ಘಟಾನುಘಟಿಗಳ ಸ್ಪರ್ಧೆ: ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು!

author img

By

Published : Apr 26, 2023, 12:39 PM IST

ರಾಮನಗರ ಜಿಲ್ಲೆಯಲ್ಲಿ ಘಟಾನುಘಟಿ ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಪರವಾಗಿ ಪತ್ನಿಯರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಗಂಡನ ಪರವಾಗಿ ಮಡದಿಯೇ ಸ್ಟಾರ್‌ ಪ್ರಚಾರಕರಾಗಿ ಮತಯಾಚನೆ ನಡೆಸುತ್ತಿದ್ದಾರೆ.

ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು
ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು

ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟನಾನುಘಟಿಗಳ ಸ್ಪರ್ಧೆಯಿಂದ ಅಖಾಡದ ಕುತೂಹಲದ ಕಣಜವಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರ ಓಡಾಟವೇ ಹೆಚ್ಚು ಕಂಡು ಬಂದಿದ್ದು, ಪತಿರಾಯರ ಪರವಾಗಿ ಕಣಕ್ಕೆ ಇಳಿದಿರುವ ಮಡದಿಯರು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರ ನಡೆಸಿದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪತ್ನಿ ಶೀಲಾ ಯೋಗೇಶ್ವರ್ ಪ್ರಚಾರ ನಡೆಸಿದರು. ಅತ್ತ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರವಾಗಿ ಪತ್ನಿ ಉಷಾ ಮತಯಾಚನೆ ಮಾಡಿದರು. ಮಾಗಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ. ಬಾಲಕೃಷ್ಣ ಪರವಾಗಿ ಅವರ ಮಡದಿ ರಾಧಾ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್‌ ಪರವಾಗಿ ಲಕ್ಷ್ಮಿ ಅವರು ಮನೆಮನೆಗೆ ತೆರಳಿ ಮತದಾರರನ್ನು ಭೇಟಿ ತಮ್ಮ ಪತಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.

ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ವಾರವಷ್ಟೇ ಬಾಕಿ ಉಳಿದಿದೆ. ಹೀಗಾಗಿ ಮತದಾರರ ಮನೆ – ಮನ ತಲುಪಲು ಅಭ್ಯರ್ಥಿಗಳ ಜೊತೆಗೆ ಅವರ ಪತ್ನಿಯರೂ ಮತಯಾಚನೆಯಲ್ಲಿ ತೊಡಗಿದ್ದಾರೆ. ಗಂಡನ ಪಾಲಿಗೆ ಮಡದಿಯೇ ಸ್ಟಾರ್‌ ಪ್ರಚಾರಕರಾಗಿ ಮತಯಾಚನೆ ನಡೆಸುತ್ತಿದ್ದಾರೆ.

ಅನಿತಾ ಕುಮಾರಸ್ವಾಮಿ ಮತಯಾಚನೆ
ಅನಿತಾ ಕುಮಾರಸ್ವಾಮಿ ಮತಯಾಚನೆ

ಚನ್ನಪಟ್ಟಣದಲ್ಲಿ ಅನಿತಾ ಝಲಕ್​: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದ ಕಣದಲ್ಲಿದ್ದಾರೆ. ಹೆಚ್‌ಡಿಕೆ ರಾಜ್ಯ ಪ್ರವಾಸದಲ್ಲಿ ತೊಡಗಿಸಿಕೊಂಡಿರುವ ಕಾರಣ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ ಸ್ಪರ್ಧಿಸಿರುವ ರಾಮನಗರದ ಜೊತೆಗೆ ಪತಿಯ ಚನ್ನಪಟ್ಟಣ ಕ್ಷೇತ್ರದ ಪ್ರಚಾರದ ಉಸ್ತುವಾರಿಯನ್ನು ತೆಗೆದುಕೊಂಡಿದ್ದಾರೆ.

ಅನಿತಾ ಅವರಿಗೆ ಚನ್ನಪಟ್ಟಣ ರಾಜಕಾರಣ ಹೊಸತೇನೂ ಅಲ್ಲ. 2013ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಹೋಬಳಿ, ಬೂತ್‌ ಮಟ್ಟದಲ್ಲಿ ಸಭೆಗಳನ್ನು ಸಂಘಟಿಸುತ್ತಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ಕಾಂಗ್ರೆಸ್​ ಪರವಾಗಿ ಚುನಾವಣಾ ಪ್ರಚಾರ
ಕಾಂಗ್ರೆಸ್​ ಪರವಾಗಿ ಚುನಾವಣಾ ಪ್ರಚಾರ

ಇನ್ನೊಂದೆಡೆ, ಶೀಲಾ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಪತಿ ಸಿಪಿ ಯೋಗೇಶ್ವರ್‌ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸೇರಿದಂತೆ ಪ್ರತಿ ಮಹತ್ವದ ಸಂದರ್ಭದಲ್ಲಿಯೂ ಪತಿ ಪಕ್ಕದಲ್ಲಿ ನಿಂತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲೂ ಶೀಲಾ ಹೆಚ್ಚು ಸಕ್ರಿಯವಾಗಿ ಪ್ರಚಾರ ಮಾಡಿದ್ದರು.

ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು
ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು

ಇನ್ನು, ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಅವರ ಪತ್ನಿ ಬಿ.ಎಂ.ಲಕ್ಷ್ಮಿ ಬಿಡದಿ ಹೋಬಳಿ ಬೈರಮಂಗಲ ಗ್ರಾಮದವರು. ಹೀಗಾಗಿ ಅವರಿಗೆ ಕ್ಷೇತ್ರದ ಜನರ ಪರಿಚಯ ಚೆನ್ನಾಗಿದೆ. ತಾಲೂಕು ಪಂಚಾಯಿತಿ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದಾರೆ. ಕಳೆದ ಆರೇಳು ತಿಂಗಳಿಂದಲೂ ಕ್ಷೇತ್ರದಾದ್ಯಂತ ಹೆಚ್ಚು ಸಕ್ರಿಯರಾಗಿರುವ ಲಕ್ಷ್ಮಿ, ಪತಿಯ ಅನುಪಸ್ಥಿತಿ ವೇಳೆ ಅನೇಕ ಸಭೆಗಳನ್ನೂ ನಡೆಸುತ್ತಿದ್ದಾರೆ. ಮನೆ– ಮನೆ ಸುತ್ತುವ ಮೂಲಕ ಪತಿ ಪರ ಮತಯಾಚನೆ ನಡೆಸುತ್ತಿದ್ದಾರೆ.

ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಅವರ ಪತ್ನಿ ರಾಧಾ ಅವರು ಈ ಹಿಂದಿನ ಚುನಾವಣೆಗಳಿಂದಲೂ ಪತಿ ಪರ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಈ ಬಾರಿಯೂ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಮನೆಮನೆಗೆ ತೆರಳಿ ಕಾಂಗ್ರೆಸ್ ಪರ ಮತಯಾಚಿಸುತ್ತಿದ್ದಾರೆ.

ಪತಿ ಪರವಾಗಿ ಮಡದಿಯರ ಪ್ರಚಾರ
ಪತಿ ಪರವಾಗಿ ಮಡದಿಯರ ಪ್ರಚಾರ

ಕನಕಪುರದಲ್ಲಿ‌ ಡಿಕೆಶಿ ಪತ್ನಿ ಪ್ರಚಾರ: ಕೆಪಿಸಿಸಿ ಅಧ್ಯಕ್ಷ ಹಾಗೂ ಕನಕಪುರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಅವರ ಮಡದಿ ಉಷಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಆದರೆ, ಈ ಚುನಾವಣೆಯಲ್ಲಿ ಪತಿ ಪರ ಮತಯಾಚನೆ ಶುರು ಮಾಡಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಓದಿ: ದೆಹಲಿ ಪಾಲಿಕೆ ಮೇಯರ್​ ಚುನಾವಣೆ.. ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಸ್​: ಆಪ್​ನ ಶೆಲ್ಲಿ ಒಬೆರಾಯ್ ಅವಿರೋಧ ಆಯ್ಕೆ

ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಘಟನಾನುಘಟಿಗಳ ಸ್ಪರ್ಧೆಯಿಂದ ಅಖಾಡದ ಕುತೂಹಲದ ಕಣಜವಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರ ಓಡಾಟವೇ ಹೆಚ್ಚು ಕಂಡು ಬಂದಿದ್ದು, ಪತಿರಾಯರ ಪರವಾಗಿ ಕಣಕ್ಕೆ ಇಳಿದಿರುವ ಮಡದಿಯರು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.

ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಅವರ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಅಬ್ಬರದ ಪ್ರಚಾರ ನಡೆಸಿದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪತ್ನಿ ಶೀಲಾ ಯೋಗೇಶ್ವರ್ ಪ್ರಚಾರ ನಡೆಸಿದರು. ಅತ್ತ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರವಾಗಿ ಪತ್ನಿ ಉಷಾ ಮತಯಾಚನೆ ಮಾಡಿದರು. ಮಾಗಡಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ. ಬಾಲಕೃಷ್ಣ ಪರವಾಗಿ ಅವರ ಮಡದಿ ರಾಧಾ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್‌ ಪರವಾಗಿ ಲಕ್ಷ್ಮಿ ಅವರು ಮನೆಮನೆಗೆ ತೆರಳಿ ಮತದಾರರನ್ನು ಭೇಟಿ ತಮ್ಮ ಪತಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.

ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇನ್ನೂ ಎರಡು ವಾರವಷ್ಟೇ ಬಾಕಿ ಉಳಿದಿದೆ. ಹೀಗಾಗಿ ಮತದಾರರ ಮನೆ – ಮನ ತಲುಪಲು ಅಭ್ಯರ್ಥಿಗಳ ಜೊತೆಗೆ ಅವರ ಪತ್ನಿಯರೂ ಮತಯಾಚನೆಯಲ್ಲಿ ತೊಡಗಿದ್ದಾರೆ. ಗಂಡನ ಪಾಲಿಗೆ ಮಡದಿಯೇ ಸ್ಟಾರ್‌ ಪ್ರಚಾರಕರಾಗಿ ಮತಯಾಚನೆ ನಡೆಸುತ್ತಿದ್ದಾರೆ.

ಅನಿತಾ ಕುಮಾರಸ್ವಾಮಿ ಮತಯಾಚನೆ
ಅನಿತಾ ಕುಮಾರಸ್ವಾಮಿ ಮತಯಾಚನೆ

ಚನ್ನಪಟ್ಟಣದಲ್ಲಿ ಅನಿತಾ ಝಲಕ್​: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದ ಕಣದಲ್ಲಿದ್ದಾರೆ. ಹೆಚ್‌ಡಿಕೆ ರಾಜ್ಯ ಪ್ರವಾಸದಲ್ಲಿ ತೊಡಗಿಸಿಕೊಂಡಿರುವ ಕಾರಣ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ಹೀಗಾಗಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ ಸ್ಪರ್ಧಿಸಿರುವ ರಾಮನಗರದ ಜೊತೆಗೆ ಪತಿಯ ಚನ್ನಪಟ್ಟಣ ಕ್ಷೇತ್ರದ ಪ್ರಚಾರದ ಉಸ್ತುವಾರಿಯನ್ನು ತೆಗೆದುಕೊಂಡಿದ್ದಾರೆ.

ಅನಿತಾ ಅವರಿಗೆ ಚನ್ನಪಟ್ಟಣ ರಾಜಕಾರಣ ಹೊಸತೇನೂ ಅಲ್ಲ. 2013ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಹೋಬಳಿ, ಬೂತ್‌ ಮಟ್ಟದಲ್ಲಿ ಸಭೆಗಳನ್ನು ಸಂಘಟಿಸುತ್ತಾ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ಕಾಂಗ್ರೆಸ್​ ಪರವಾಗಿ ಚುನಾವಣಾ ಪ್ರಚಾರ
ಕಾಂಗ್ರೆಸ್​ ಪರವಾಗಿ ಚುನಾವಣಾ ಪ್ರಚಾರ

ಇನ್ನೊಂದೆಡೆ, ಶೀಲಾ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಪತಿ ಸಿಪಿ ಯೋಗೇಶ್ವರ್‌ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸೇರಿದಂತೆ ಪ್ರತಿ ಮಹತ್ವದ ಸಂದರ್ಭದಲ್ಲಿಯೂ ಪತಿ ಪಕ್ಕದಲ್ಲಿ ನಿಂತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲೂ ಶೀಲಾ ಹೆಚ್ಚು ಸಕ್ರಿಯವಾಗಿ ಪ್ರಚಾರ ಮಾಡಿದ್ದರು.

ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು
ಪತಿ ಪರವಾಗಿ ಅಖಾಡಕ್ಕಿಳಿದ ಮಡದಿಯರು

ಇನ್ನು, ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಅವರ ಪತ್ನಿ ಬಿ.ಎಂ.ಲಕ್ಷ್ಮಿ ಬಿಡದಿ ಹೋಬಳಿ ಬೈರಮಂಗಲ ಗ್ರಾಮದವರು. ಹೀಗಾಗಿ ಅವರಿಗೆ ಕ್ಷೇತ್ರದ ಜನರ ಪರಿಚಯ ಚೆನ್ನಾಗಿದೆ. ತಾಲೂಕು ಪಂಚಾಯಿತಿ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದಾರೆ. ಕಳೆದ ಆರೇಳು ತಿಂಗಳಿಂದಲೂ ಕ್ಷೇತ್ರದಾದ್ಯಂತ ಹೆಚ್ಚು ಸಕ್ರಿಯರಾಗಿರುವ ಲಕ್ಷ್ಮಿ, ಪತಿಯ ಅನುಪಸ್ಥಿತಿ ವೇಳೆ ಅನೇಕ ಸಭೆಗಳನ್ನೂ ನಡೆಸುತ್ತಿದ್ದಾರೆ. ಮನೆ– ಮನೆ ಸುತ್ತುವ ಮೂಲಕ ಪತಿ ಪರ ಮತಯಾಚನೆ ನಡೆಸುತ್ತಿದ್ದಾರೆ.

ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣ ಅವರ ಪತ್ನಿ ರಾಧಾ ಅವರು ಈ ಹಿಂದಿನ ಚುನಾವಣೆಗಳಿಂದಲೂ ಪತಿ ಪರ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಈ ಬಾರಿಯೂ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಮನೆಮನೆಗೆ ತೆರಳಿ ಕಾಂಗ್ರೆಸ್ ಪರ ಮತಯಾಚಿಸುತ್ತಿದ್ದಾರೆ.

ಪತಿ ಪರವಾಗಿ ಮಡದಿಯರ ಪ್ರಚಾರ
ಪತಿ ಪರವಾಗಿ ಮಡದಿಯರ ಪ್ರಚಾರ

ಕನಕಪುರದಲ್ಲಿ‌ ಡಿಕೆಶಿ ಪತ್ನಿ ಪ್ರಚಾರ: ಕೆಪಿಸಿಸಿ ಅಧ್ಯಕ್ಷ ಹಾಗೂ ಕನಕಪುರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಅವರ ಮಡದಿ ಉಷಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಆದರೆ, ಈ ಚುನಾವಣೆಯಲ್ಲಿ ಪತಿ ಪರ ಮತಯಾಚನೆ ಶುರು ಮಾಡಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

ಓದಿ: ದೆಹಲಿ ಪಾಲಿಕೆ ಮೇಯರ್​ ಚುನಾವಣೆ.. ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಸ್​: ಆಪ್​ನ ಶೆಲ್ಲಿ ಒಬೆರಾಯ್ ಅವಿರೋಧ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.