ETV Bharat / state

ಪೊಲೀಸ್​​ ಠಾಣೆಯಲ್ಲೇ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ

author img

By

Published : May 18, 2019, 11:28 PM IST

ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪೊಲೀಸರ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆ

ರಾಮನಗರ: ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪೊಲೀಸರ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಶಶಿಕುಮಾರ್ (26) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎನ್ನಲಾಗಿದೆ. ಗಂಡ-ಹೆಂಡತಿ ನಡುವಿನ ಕಲಹ ವಿಚಾರವಾಗಿ ಶಶಿಕುಮಾರ್​​​ನನ್ನು ಠಾಣೆಗೆ ಕರಿಸಿದ್ದ ಪೊಲೀಸರು ವಿನಾ ಕಾರಣ ಆತನಿಗೆ ಕಿರುಕುಳ‌ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪದೇ ಪದೇ ಠಾಣೆಗೆ ಕರಿಸಿದ್ದ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ಶಶಿಕುಮಾರ್ ಇದೆಲ್ಲದರಿಂದ ಬೇಸತ್ತು ಠಾಣೆಯಲ್ಲೇ‌ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಘಟನೆ ವಿವರ:

ಶಶಿಕುಮಾರ್ ಮೂರು ವರ್ಷಗಳ ಹಿಂದೆ ಶೃತಿ ಎಂಬುವರನ್ನ ವಿವಾಹವಾಗಿದ್ದ. ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ನಂತರ ಜಗಳ ತಾರಕಕ್ಕೇರಿದ್ದರಿಂದ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಶಶಿಕುಮಾರ್​​​​​ನನ್ನ ಪದೇ ಪದೇ ಠಾಣೆಗೆ ಕರೆಸಿ ಪೊಲೀಸರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಠಾಣೆಯಲ್ಲಿಯೇ ವಿಷ ಕುಡಿದಿದ್ದಾನೆ ಎನ್ನಲಾಗಿದೆ.

ವಿಷ ಕುಡಿದ ವ್ಯಕ್ತಿಯನ್ನ ಮಹಿಳಾ ಠಾಣೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಮನಗರ: ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪೊಲೀಸರ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಶಶಿಕುಮಾರ್ (26) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎನ್ನಲಾಗಿದೆ. ಗಂಡ-ಹೆಂಡತಿ ನಡುವಿನ ಕಲಹ ವಿಚಾರವಾಗಿ ಶಶಿಕುಮಾರ್​​​ನನ್ನು ಠಾಣೆಗೆ ಕರಿಸಿದ್ದ ಪೊಲೀಸರು ವಿನಾ ಕಾರಣ ಆತನಿಗೆ ಕಿರುಕುಳ‌ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪದೇ ಪದೇ ಠಾಣೆಗೆ ಕರಿಸಿದ್ದ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ಶಶಿಕುಮಾರ್ ಇದೆಲ್ಲದರಿಂದ ಬೇಸತ್ತು ಠಾಣೆಯಲ್ಲೇ‌ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಘಟನೆ ವಿವರ:

ಶಶಿಕುಮಾರ್ ಮೂರು ವರ್ಷಗಳ ಹಿಂದೆ ಶೃತಿ ಎಂಬುವರನ್ನ ವಿವಾಹವಾಗಿದ್ದ. ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ನಂತರ ಜಗಳ ತಾರಕಕ್ಕೇರಿದ್ದರಿಂದ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಶಶಿಕುಮಾರ್​​​​​ನನ್ನ ಪದೇ ಪದೇ ಠಾಣೆಗೆ ಕರೆಸಿ ಪೊಲೀಸರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಠಾಣೆಯಲ್ಲಿಯೇ ವಿಷ ಕುಡಿದಿದ್ದಾನೆ ಎನ್ನಲಾಗಿದೆ.

ವಿಷ ಕುಡಿದ ವ್ಯಕ್ತಿಯನ್ನ ಮಹಿಳಾ ಠಾಣೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಮನಗರ : ಪೊಲೀಸರ ಕಿರುಕುಳ ತಾಳಲಾರದೆ ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಶಶಿಕುಮಾರ್(26) ವಿಷ ಕುಡಿದ ವ್ಯಕ್ತಿ. ಪೋಲೀಸ್ ಠಾಣೆ ಮೆಟ್ಟಿಲೇರಿತ್ತು. ಗಂಡ ಹೆಂಡತಿ ನಡುವಿನ ಕಲಹ ವಿಚಾರವಾಗಿ ಶಶಿಕುಮಾರ್ ನನ್ನು ಠಾಣೆಗೆ ಕರಿಸಿದ್ದ ಪೊಲೀಸರು ವಿನಾ ಕಾರಣ ಆತನಿಗೆ ಕಿರುಕುಳ‌ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಪದೇ ಪದೇ ಠಾಣೆಗೆ ಕರಿಸಿದ್ದ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ಶಶಿಕುಮಾರ್ ಇದೆಲ್ಲದರಿಂದ ಬೇಸತ್ತು ಠಾಣೆಯಲ್ಲೇ‌ ವಿಷ ತಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಘಟನೆ ವಿವರ : ಶಶಿಕುಮಾರ್ ಮೂರು ವರ್ಷಗಳ ಹಿಂದೆ ಶೃತಿ ಎಂಬುವರನ್ನ ವಿವಾಹವಾಗಿದ್ದ ಹಣಕಾಸಿನ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು ನಂತರ ತಾರಕಕ್ಕೇರಿ ಪೋಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣವನ್ನ ಮಹಿಳಾ‌ಠಾಣೆಗೆ ಕಳುಹಿಸಿಕೊಡಲಾಗಿದೆ ಆದರೆ ಶಶಿಕುಮಾರ್ ನನ್ನ ಪದೇ ಪದೇ ಠಾಣೆಗೆ ಕರೆಸಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಠಾಣೆಯಲ್ಲಿಯೇ ವಿಷ ಕುಡಿದಿದ್ದಾರೆ ನಂತರ ವಿಷ ಕುಡಿದ ವ್ಯಕ್ತಿಯನ್ನ ಮಹಿಳಾ ಠಾಣೆ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. (ಫೋಟೋ ವಿಡಿಯೋ ಸಿಕ್ಕಿಲ್ಲ)

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.