ETV Bharat / state

ಗುಜರಾತ್​ ಆಶ್ರಮ ಖಾಲಿ ಮಾಡಿ ಬಿಡದಿಗೆ ಬಂದ ನಿತ್ಯಾನಂದನ ಅನುಯಾಯಿಗಳು

author img

By

Published : Dec 6, 2019, 2:43 AM IST

ರಾಮನಗರ ಜಿಲ್ಲೆ ಬಿಡದಿ ಬಳಿಯ ನಿತ್ಯಾನಂದನ‌ ಧ್ಯಾನಪೀಠ ಆಶ್ರಮಕ್ಕೆ ಬಾಲಕರು, ಮಹಿಳೆಯರು ಸೇರಿ 35 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಆಶ್ರಮಕ್ಕೆ ಯಾವುದೇ ಸುಳಿವು ನೀಡದೆ ಯಾರಿಗೂ ಗೊತ್ತಾಗದಂತೆ ತಡರಾತ್ರಿ ಆಶ್ರಮಕ್ಕೆ ಬಂದಿಳಿದಿದ್ದಾರೆ.

Nithyananda followers
Nithyananda followers

ರಾಮನಗರ : ಗುಜರಾತ್‌ ಆಶ್ರಮ ಖಾಲಿ ಮಾಡಿರುವ ನಿತ್ಯಾನಂದನ ಅನುಯಾಯಿಗಳು ಮತ್ತು ಶಿಷ್ಯರು ಬುಧವಾರ ತಡರಾತ್ರಿ ಬಿಡದಿ ಆಶ್ರಮಕ್ಕೆ ಆಗಮಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಬಳಿಯ ನಿತ್ಯಾನಂದನ‌ ಧ್ಯಾನಪೀಠ ಆಶ್ರಮಕ್ಕೆ ಬಾಲಕರು, ಮಹಿಳೆಯರು ಸೇರಿ 35 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಆಶ್ರಮಕ್ಕೆ ಯಾವುದೇ ಸುಳಿವು ನೀಡದೆ ಯಾರಿಗೂ ಗೊತ್ತಾಗದಂತೆ ತಡರಾತ್ರಿ ಆಶ್ರಮಕ್ಕೆ ಬಂದಿಳಿದ ನಿತ್ಯನ ಭಕ್ತರು ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ನಿತ್ಯಾನಂದ ಆಶ್ರಮದ ಮುಖ್ಯದ್ವಾರವನ್ನೇ ಬಂದ್ ಮಾಡಲಾಗಿದ್ದು, ನಿತ್ಯಾನಂದನ ಅನುಯಾಯಿಗಳು, ಆಶ್ರಮ ವಾಸಿಗಳು ಹಾಗೂ ಆಶ್ರಮಕ್ಕೆ ಸಂಬಂಧಪಟ್ಟವರಿಗೆ ಬಿಟ್ಟು ಬೇರೆ ಯಾರಿಗೂ ಒಳಗೆ ಪ್ರವೇಶ ನಿರಾಕರಿಸಲಾಗಿದೆ.

ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಕೊಠಡಿಗಳಲ್ಲಿ ನಿತ್ಯನ ಭಕ್ತರು ವಾಸ ಮಾಡುತ್ತಿದ್ದು ಈಗಾಗಲೇ ಪೂರ್ವ ಸಿದ್ದತೆ ಎನ್ನುವಂತೆ ಕಾ‌ಂಪೌಂಡ್‌ ಕೂಡ‌ ಎತ್ತರಿಸಲಾಗಿದೆ. ಇನ್ನು ನಿತ್ಯಶಿಷ್ಯರ ಕಾರ್ಯಕ್ರಮಗಳು‌ ಏನೆಲ್ಲಾ ನಡೆಯುತ್ತವೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ರಾಮನಗರ : ಗುಜರಾತ್‌ ಆಶ್ರಮ ಖಾಲಿ ಮಾಡಿರುವ ನಿತ್ಯಾನಂದನ ಅನುಯಾಯಿಗಳು ಮತ್ತು ಶಿಷ್ಯರು ಬುಧವಾರ ತಡರಾತ್ರಿ ಬಿಡದಿ ಆಶ್ರಮಕ್ಕೆ ಆಗಮಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಬಳಿಯ ನಿತ್ಯಾನಂದನ‌ ಧ್ಯಾನಪೀಠ ಆಶ್ರಮಕ್ಕೆ ಬಾಲಕರು, ಮಹಿಳೆಯರು ಸೇರಿ 35 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಆಶ್ರಮಕ್ಕೆ ಯಾವುದೇ ಸುಳಿವು ನೀಡದೆ ಯಾರಿಗೂ ಗೊತ್ತಾಗದಂತೆ ತಡರಾತ್ರಿ ಆಶ್ರಮಕ್ಕೆ ಬಂದಿಳಿದ ನಿತ್ಯನ ಭಕ್ತರು ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ನಿತ್ಯಾನಂದ ಆಶ್ರಮದ ಮುಖ್ಯದ್ವಾರವನ್ನೇ ಬಂದ್ ಮಾಡಲಾಗಿದ್ದು, ನಿತ್ಯಾನಂದನ ಅನುಯಾಯಿಗಳು, ಆಶ್ರಮ ವಾಸಿಗಳು ಹಾಗೂ ಆಶ್ರಮಕ್ಕೆ ಸಂಬಂಧಪಟ್ಟವರಿಗೆ ಬಿಟ್ಟು ಬೇರೆ ಯಾರಿಗೂ ಒಳಗೆ ಪ್ರವೇಶ ನಿರಾಕರಿಸಲಾಗಿದೆ.

ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಕೊಠಡಿಗಳಲ್ಲಿ ನಿತ್ಯನ ಭಕ್ತರು ವಾಸ ಮಾಡುತ್ತಿದ್ದು ಈಗಾಗಲೇ ಪೂರ್ವ ಸಿದ್ದತೆ ಎನ್ನುವಂತೆ ಕಾ‌ಂಪೌಂಡ್‌ ಕೂಡ‌ ಎತ್ತರಿಸಲಾಗಿದೆ. ಇನ್ನು ನಿತ್ಯಶಿಷ್ಯರ ಕಾರ್ಯಕ್ರಮಗಳು‌ ಏನೆಲ್ಲಾ ನಡೆಯುತ್ತವೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

Intro:Body:ರಾಮನಗರ : ಗುಜರಾತ್‌ ಆಶ್ರಮನಖಾಲಿ ಮಾಡಿದ ನಿತ್ಯಾನಂದನ ಅನುಯಾಯಿಗಳು ಮತ್ತು ಶಿಷ್ಯರು ತಡರಾತ್ರಿ ಬಿಡದಿ ಆಶ್ರಮಕ್ಕೆ ನಿತ್ಯನ ಶಿಷ್ಯರು ಆಗಮಿಸಿದ್ದಾರೆ.
ಬಿಡದಿ ಬಳಿಯ ನಿತ್ಯಾನಂದನ‌ ಧ್ಯಾನಪೀಠ ಆಶ್ರಮಕ್ಕೆ ಬಾಲಕರು, ಮಹಿಳೆಯರು ಸೇರಿ 35 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ.
ರಾಮನಗರ ಜಿಲ್ಲೆ ಬಿಡದಿಯಲ್ಲಿರುವ ನಿತ್ಯಾನಂದ ನ ಆಶ್ರಮಕ್ಕೆ
ಸುಳಿವು ನೀಡದೆ ಯಾರಿಗೂ ಗೊತ್ತಾಗದಂತೆ ತಡರಾತ್ರಿ ಆಶ್ರಮಕ್ಕೆ ಬಂದಿಳಿದ ನಿತ್ಯನ ಭಕ್ತರು ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ನಿತ್ಯಾನಂದ ಆಶ್ರಮದ ಮುಖ್ಯಧ್ವಾರವನ್ನೇ ಬಂದ್ ಮಾಡಲಾಗಿದ್ದು ನಿತ್ಯಾನುಯಾಯಿಗಳು ಮತ್ತು ಆಶ್ರಮ ವಾಸಿಗಳು,ಸಂಬಂಧಪಟ್ಟವರಿಗೆ ಬಿಟ್ಟು ಬೇರೆಯಾರಿಗೂ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಕೊಠಡಿಗಳಲ್ಲಿ ನಿತ್ಯನ ಭಕ್ತರು ವಾಸ ಮಾಡುತ್ತಿದ್ದು ಈಗಾಗಲೇ ಪೂರ್ವ ಸಿದ್ದತೆ ಎನ್ನುವಂತೆ ಕಾ‌ಂಪೌಂಡ್‌ ಕೂಡ‌ ಎತ್ತರಿಸಲಾಗಿದೆ. ಇನ್ನು ನಿತ್ಯಶಿಷ್ಯರ ಕಾರ್ಯಕ್ರಮಗಳು‌ ಏನೆಲ್ಲಾ ನಡೆಯುತ್ತವೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.