ETV Bharat / state

ಹಗಲು ದರೋಡೆ ಬಿಟ್ಟು ನೆಮ್ಮದಿ ಜೀವನ ನಡೆಸಿ: ಯೋಗೇಶ್ವರ್​​ಗೆ ಹೆಚ್​ಡಿಕೆ ಟಾಂಗ್​​ - ರಾಮನಗರ ಅಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕಾರ ಆರೋಪ

ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಕೇಳಿದರೆ, ಕಡೆಗೆ ಅಧಿಕಾರಿಗಳು ಜನರಿಂದಲೇ ಸುಲಿಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಹಗಲು ದರೋಡೆ ಮಾಡುವ ಅವಶ್ಯಕತೆ ಇದೆಯಾ.. ಇಂತಹ ಜೀವನ ಮಾಡುವ ಬದಲು ರಾಜಕೀಯ ಬಿಟ್ಟು ಮನೆಯಲ್ಲಿಯೇ ನೆಮ್ಮದಿ ಜೀವನ ನಡೆಸುವಂತೆ ಎಂಎಲ್​ಸಿ ಸಿ.ಪಿ. ಯೋಗೇಶ್ವರ್​ಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

leave-the-day-robbery-and-live-at-home
ಹೆಚ್​ಡಿಕೆ
author img

By

Published : Jan 7, 2021, 5:04 PM IST

ರಾಮನಗರ : ಚನ್ನಪಟ್ಟಣ ತಾಲೂಕಿನಲ್ಲಿ ಇಲ್ಲಿನ ಬಿಜೆಪಿ ಶಾಸಕರು ಸಬ್​ ಇನ್ಸ್​ಪೆಕ್ಟರ್​ ವರ್ಗಾವಣೆಗೆ 30 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ. ಈ ರೀತಿ ಹಣ ಲೂಟಿ ಮಾಡುವ ಬದಲು ಮನೆಯಲ್ಲಿ ಇದ್ದು ಗೌರವಯುತ ಜೀವನ ನಡೆಸುವುದು ಒಳ್ಳೆಯದು ಎಂದು ಎಂಎಲ್​ಸಿ ಸಿ.ಪಿ. ಯೋಗೇಶ್ವರ್​ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ಹಗಲು ದರೋಡೆ ಬಿಟ್ಟು ಮನೆಯಲ್ಲಿ ನೆಮ್ಮದಿ ಜೀವನ ನಡೆಸಿ

ಚನ್ನಪಟ್ಟಣ ನಗರದಲ್ಲಿ ಮಾತನಾಡಿದ ಅವರು, ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್​ ಆಕ್ಷನ್​ಗೆ ಹಾಕಿಕೊಂಡು ಕೂತಿದ್ದಾರೆ. ಈ ರೀತಿ ಹಣ ಸಂಪಾದನೆ ಮಾಡುವ ಅವಶ್ಯಕತೆ ಇದೆಯಾ‌‌ ಎಂದು ಪ್ರಶ್ನೆ ಮಾಡಿದರು. ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಕೇಳಿದರೆ, ಕಡೆಗೆ ಅಧಿಕಾರಿಗಳು ಜನರಿಂದಲೇ ಸುಲಿಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಹಗಲು ದರೋಡೆ ಮಾಡುವ ಅವಶ್ಯಕತೆ ಇದೆಯಾ... ಇಂತಹ ಜೀವನ ಮಾಡುವ ಬದಲು ರಾಜಕೀಯ ಬಿಟ್ಟು ಮನೆಯಲ್ಲಿಯೇ ನೆಮ್ಮದಿ ಜೀವನ ನಡೆಸುವಂತೆ ಸಲಹೆ ನೀಡಿದರು.

ಓದಿ-ಕಾಂಗ್ರೆಸ್​ನಲ್ಲೂ ಸಿಎಂ ಸ್ಥಾನಕ್ಕೆ ಸಾಕಷ್ಟು ಜನ ಕ್ಯೂನಲ್ಲಿದ್ದಾರೆ: ಸತೀಶ್ ಜಾರಕಿಹೊಳಿ

ಪಂಚಾಯಿತಿ ಚುನಾವಣೆಯಲ್ಲಿ ಏನೋ ಮಾಡುತ್ತೇನೆ ಎಂದು ನನ್ನ ವಿರುದ್ಧ ಸವಾಲ್​ ಹಾಕಿದರು. ಆದರೆ, ಏನೂ ಮಾಡಲಿಕ್ಕೆ ಆಗಲಿಲ್ಲ. ನಾನು ಇಂದಲ್ಲ ನಾಳೆ ಮಂತ್ರಿಯಾಗುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಇದೇ ರೀತಿ ಎಷ್ಟು ದಿನ ಹೇಳಿ ಜನರನ್ನು ಸೆಳೆಯಲು ಸಾಧ್ಯ ಎಂದು ಪರೋಕ್ಷವಾಗಿ ಕುಟುಕಿದರು.

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್​ ನಾಯಕರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಈ ಚುನಾವಣಾ ಫಲಿತಾಂಶಕ್ಕೂ, ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನಾವು ಗೆದ್ದೆವು ಎಂದು ಬೀಗಲು ಸಾಧ್ಯವಿಲ್ಲ. ಕೆಲವೆಡೆ ಕಾಂಗ್ರೆಸ್​ ಹಣಬಲದಿಂದ ಗೆದ್ದಿದೆ. ಆದರೆ, ಜಿಲ್ಲೆಯ ಜನ ಹಣ ಬಲಕ್ಕಿಂತ ವ್ಯಕ್ತಿಗೆ ಬೆಂಬಲ ನೀಡುವವರು. ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 25 ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದರು.

ರಾಮನಗರ : ಚನ್ನಪಟ್ಟಣ ತಾಲೂಕಿನಲ್ಲಿ ಇಲ್ಲಿನ ಬಿಜೆಪಿ ಶಾಸಕರು ಸಬ್​ ಇನ್ಸ್​ಪೆಕ್ಟರ್​ ವರ್ಗಾವಣೆಗೆ 30 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ. ಈ ರೀತಿ ಹಣ ಲೂಟಿ ಮಾಡುವ ಬದಲು ಮನೆಯಲ್ಲಿ ಇದ್ದು ಗೌರವಯುತ ಜೀವನ ನಡೆಸುವುದು ಒಳ್ಳೆಯದು ಎಂದು ಎಂಎಲ್​ಸಿ ಸಿ.ಪಿ. ಯೋಗೇಶ್ವರ್​ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ಹಗಲು ದರೋಡೆ ಬಿಟ್ಟು ಮನೆಯಲ್ಲಿ ನೆಮ್ಮದಿ ಜೀವನ ನಡೆಸಿ

ಚನ್ನಪಟ್ಟಣ ನಗರದಲ್ಲಿ ಮಾತನಾಡಿದ ಅವರು, ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್​ ಆಕ್ಷನ್​ಗೆ ಹಾಕಿಕೊಂಡು ಕೂತಿದ್ದಾರೆ. ಈ ರೀತಿ ಹಣ ಸಂಪಾದನೆ ಮಾಡುವ ಅವಶ್ಯಕತೆ ಇದೆಯಾ‌‌ ಎಂದು ಪ್ರಶ್ನೆ ಮಾಡಿದರು. ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಕೇಳಿದರೆ, ಕಡೆಗೆ ಅಧಿಕಾರಿಗಳು ಜನರಿಂದಲೇ ಸುಲಿಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಹಗಲು ದರೋಡೆ ಮಾಡುವ ಅವಶ್ಯಕತೆ ಇದೆಯಾ... ಇಂತಹ ಜೀವನ ಮಾಡುವ ಬದಲು ರಾಜಕೀಯ ಬಿಟ್ಟು ಮನೆಯಲ್ಲಿಯೇ ನೆಮ್ಮದಿ ಜೀವನ ನಡೆಸುವಂತೆ ಸಲಹೆ ನೀಡಿದರು.

ಓದಿ-ಕಾಂಗ್ರೆಸ್​ನಲ್ಲೂ ಸಿಎಂ ಸ್ಥಾನಕ್ಕೆ ಸಾಕಷ್ಟು ಜನ ಕ್ಯೂನಲ್ಲಿದ್ದಾರೆ: ಸತೀಶ್ ಜಾರಕಿಹೊಳಿ

ಪಂಚಾಯಿತಿ ಚುನಾವಣೆಯಲ್ಲಿ ಏನೋ ಮಾಡುತ್ತೇನೆ ಎಂದು ನನ್ನ ವಿರುದ್ಧ ಸವಾಲ್​ ಹಾಕಿದರು. ಆದರೆ, ಏನೂ ಮಾಡಲಿಕ್ಕೆ ಆಗಲಿಲ್ಲ. ನಾನು ಇಂದಲ್ಲ ನಾಳೆ ಮಂತ್ರಿಯಾಗುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಇದೇ ರೀತಿ ಎಷ್ಟು ದಿನ ಹೇಳಿ ಜನರನ್ನು ಸೆಳೆಯಲು ಸಾಧ್ಯ ಎಂದು ಪರೋಕ್ಷವಾಗಿ ಕುಟುಕಿದರು.

ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್​ ನಾಯಕರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಈ ಚುನಾವಣಾ ಫಲಿತಾಂಶಕ್ಕೂ, ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನಾವು ಗೆದ್ದೆವು ಎಂದು ಬೀಗಲು ಸಾಧ್ಯವಿಲ್ಲ. ಕೆಲವೆಡೆ ಕಾಂಗ್ರೆಸ್​ ಹಣಬಲದಿಂದ ಗೆದ್ದಿದೆ. ಆದರೆ, ಜಿಲ್ಲೆಯ ಜನ ಹಣ ಬಲಕ್ಕಿಂತ ವ್ಯಕ್ತಿಗೆ ಬೆಂಬಲ ನೀಡುವವರು. ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 25 ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.