ETV Bharat / state

ಲಾಕ್​ಡೌನ್​ಗೆ ಡೋಂಟ್​ ಕೇರ್​: ಕೊಳಗೊಂಡನಹಳ್ಳಿಯಲ್ಲಿ ಅದ್ಧೂರಿ ಗ್ರಾಮ ಹಬ್ಬ

author img

By

Published : May 15, 2020, 9:31 AM IST

Updated : May 15, 2020, 10:50 AM IST

ಇಡೀ ದೇಶದಲ್ಲಿ ಲಾಕ್​ಡೌನ್ ನಿಯಮ ಜಾರಿಯಲ್ಲಿದ್ದು, ಎಲ್ಲಿಯೂ ಜನರು ಗುಂಪು ಸೇರಬಾರದೆಂಬ ಆದೇಶವಿದೆ. ಆದರೆ, ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಆದೇಶ ಪಾಲನೆಯಾಗಿಲ್ಲ. ಇಲ್ಲಿನ ಜನರು ಅದ್ಧೂರಿಯಾಗಿ ಗ್ರಾಮ ಹಬ್ಬ ಮಾಡಿದ್ದಾರೆ.

Kolagondanahalli people has violation of lockdown rules
ಗ್ರಾಮ ಹಬ್ಬ ಮಾಡಿದ ಕೊಳಗೊಂಡನಹಳ್ಳಿ ಜನ

ರಾಮನಗರ: ಜಿಲ್ಲೆಯ ಕೊಳಗೊಂಡನಹಳ್ಳಿಯಲ್ಲಿ ಲಾಕ್​ಡೌನ್​ ಆದೇಶ ಉಲ್ಲಂಘನೆಯಾಗಿದೆ. ನೂರಾರು ಜನರು ಒಂದೇ ಕಡೆ ಸೇರಿ ಅದ್ಧೂರಿ ಗ್ರಾಮ ಹಬ್ಬ ಮಾಡಿ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಇಡೀ ದೇಶದಲ್ಲಿ ಲಾಕ್​ಡೌನ್ ನಿಯಮ ಜಾರಿಯಲ್ಲಿದ್ದು, ಎಲ್ಲಿಯೂ ಜನರು ಗುಂಪು ಸೇರಬಾರದು ಎಂಬ ಆದೇಶ ಇದೆ. ಆದರೆ, ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಆದೇಶ ಪಾಲನೆಯಾಗಿಲ್ಲ. ಒಂದು ಮೂಲದ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯತ್​ ಪಿಡಿಒ ಅನುಮತಿ ಪಡೆದು ಜಾತ್ರೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೇಳಿ ಕೇಳಿ ಕೊಳಗೊಂಡನಹಳ್ಳಿ ಗ್ರಾಮ ತಮಿಳುನಾಡಿನ ಗಡಿಗೆ ಕೂಗಳತೆ ದೂರದಲ್ಲಿ ಇದೆ. ಈಗಾಗಲೇ ತಮಿಳುನಾಡಿನಲ್ಲಿ ಕೊರೊನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗಿದೆ.‌ ಈ ಹಿನ್ನೆಲೆಯಲ್ಲಿಯೇ ಕೊರೊನಾ ನಮ್ಮ ಗ್ರಾಮಕ್ಕೆ ಬರೋದು ಬೇಡವೆಂದು ಗ್ರಾಮಸ್ಥರು ಪಂಜು ಹಿಡಿದು ಗ್ರಾಮದ ಸುತ್ತ ಮೆರವಣಿಗೆ ಮಾಡಿದ್ದಾರೆ.

ಊರಿನ ಮಹಿಳೆಯರೆಲ್ಲ ತಂಬಿಟ್ಟಿನ ಆರತಿ ಮಾಡಿ ಒಂದೆಡೆ ಬಂದು ಸಾಮೂಹಿಕ ಪೂಜೆ ಸಲ್ಲಿಸಿದ್ದಾರೆ. ಇದೀಗ ಈ ಗ್ರಾಮದಲ್ಲಿ ಸಾಮೂಹಿಕ ಪೂಜೆ ನೆರವೇರಿಸಿದ ಕಾರಣ ಅಕ್ಕ ಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮದಲ್ಲಿ ಹಬ್ಬ ಮಾಡಲು ಅನುಮತಿ ಸಿಕ್ಕಿತ್ತಾ ಅಥವಾ ಪೊಲೀಸರು ಈ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ರಾ ಎಂಬುದು ತಿಳಿದುಬಂದಿಲ್ಲ.

ರಾಮನಗರ: ಜಿಲ್ಲೆಯ ಕೊಳಗೊಂಡನಹಳ್ಳಿಯಲ್ಲಿ ಲಾಕ್​ಡೌನ್​ ಆದೇಶ ಉಲ್ಲಂಘನೆಯಾಗಿದೆ. ನೂರಾರು ಜನರು ಒಂದೇ ಕಡೆ ಸೇರಿ ಅದ್ಧೂರಿ ಗ್ರಾಮ ಹಬ್ಬ ಮಾಡಿ ಲಾಕ್ ಡೌನ್ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಇಡೀ ದೇಶದಲ್ಲಿ ಲಾಕ್​ಡೌನ್ ನಿಯಮ ಜಾರಿಯಲ್ಲಿದ್ದು, ಎಲ್ಲಿಯೂ ಜನರು ಗುಂಪು ಸೇರಬಾರದು ಎಂಬ ಆದೇಶ ಇದೆ. ಆದರೆ, ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಆದೇಶ ಪಾಲನೆಯಾಗಿಲ್ಲ. ಒಂದು ಮೂಲದ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯತ್​ ಪಿಡಿಒ ಅನುಮತಿ ಪಡೆದು ಜಾತ್ರೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೇಳಿ ಕೇಳಿ ಕೊಳಗೊಂಡನಹಳ್ಳಿ ಗ್ರಾಮ ತಮಿಳುನಾಡಿನ ಗಡಿಗೆ ಕೂಗಳತೆ ದೂರದಲ್ಲಿ ಇದೆ. ಈಗಾಗಲೇ ತಮಿಳುನಾಡಿನಲ್ಲಿ ಕೊರೊನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗಿದೆ.‌ ಈ ಹಿನ್ನೆಲೆಯಲ್ಲಿಯೇ ಕೊರೊನಾ ನಮ್ಮ ಗ್ರಾಮಕ್ಕೆ ಬರೋದು ಬೇಡವೆಂದು ಗ್ರಾಮಸ್ಥರು ಪಂಜು ಹಿಡಿದು ಗ್ರಾಮದ ಸುತ್ತ ಮೆರವಣಿಗೆ ಮಾಡಿದ್ದಾರೆ.

ಊರಿನ ಮಹಿಳೆಯರೆಲ್ಲ ತಂಬಿಟ್ಟಿನ ಆರತಿ ಮಾಡಿ ಒಂದೆಡೆ ಬಂದು ಸಾಮೂಹಿಕ ಪೂಜೆ ಸಲ್ಲಿಸಿದ್ದಾರೆ. ಇದೀಗ ಈ ಗ್ರಾಮದಲ್ಲಿ ಸಾಮೂಹಿಕ ಪೂಜೆ ನೆರವೇರಿಸಿದ ಕಾರಣ ಅಕ್ಕ ಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮದಲ್ಲಿ ಹಬ್ಬ ಮಾಡಲು ಅನುಮತಿ ಸಿಕ್ಕಿತ್ತಾ ಅಥವಾ ಪೊಲೀಸರು ಈ ಬಗ್ಗೆ ಗೊತ್ತಿದ್ದರೂ ಸುಮ್ಮನಿದ್ರಾ ಎಂಬುದು ತಿಳಿದುಬಂದಿಲ್ಲ.

Last Updated : May 15, 2020, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.