ETV Bharat / state

ರಾಮನಗರದಲ್ಲಿ ಮತ್ತೆ 146 ಕೊರೊನಾ ಕೇಸ್​​ ಪತ್ತೆ: ಸೋಂಕಿತರ ಸಂಖ್ಯೆ 4,622ಕ್ಕೆ ಏರಿಕೆ

author img

By

Published : Sep 15, 2020, 7:35 AM IST

ಜಿಲ್ಲೆಯಲ್ಲಿ ನಿನ್ನೆ 146 ಕೋವಿಡ್​​​ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4,622ಕ್ಕೆ ತಲುಪಿದೆ.

ramanagara corona cases
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ

ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ 34, ಕನಕಪುರ-17, ಮಾಗಡಿ-32 ಮತ್ತು ರಾಮನಗರದಲ್ಲಿ 63 ಪ್ರಕರಣಗಳು ಸೇರಿದಂತೆ ಒಟ್ಟು 146 ಕೋವಿಡ್​​​ ಪಾಸಿಟಿವ್ ಪ್ರಕರಣಗಳು ನಿನ್ನೆ ವರದಿಯಾಗಿದೆ. ಸೋಂಕು ದೃಢಪಟ್ಟವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.

ಒಟ್ಟು ಸೋಂಕು ಪ್ರಕರಣ: ಈವರೆಗೆ ಜಿಲ್ಲೆಯಲ್ಲಿ 4,622 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1094, ಕನಕಪುರ 942, ಮಾಗಡಿ 720 ಮತ್ತು ರಾಮನಗರದಲ್ಲಿ 1866 ಪ್ರಕರಣಗಳು ವರದಿಯಾಗಿದೆ.

ಮೃತಪಟ್ಟವರ ಪ್ರಕರಣ: ಚನ್ನಪಟ್ಟಣ ತಾಲೂಕು- 12, ಕನಕಪುರ ತಾಲೂಕು- 11, ಮಾಗಡಿ ತಾಲೂಕು- 14 ಹಾಗೂ ರಾಮನಗರ ತಾಲೂಕಿನಲ್ಲಿ 15 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 52 ಮಂದಿ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಗುಣಮುಖ: ಚನ್ನಪಟ್ಟಣ ತಾಲೂಕು-16, ಕನಕಪುರ-19, ಮಾಗಡಿ- 23 ಹಾಗೂ ರಾಮನಗರ ತಾಲೂಕಿನಲ್ಲಿ 38 ಮಂದಿ ಸೇರಿದಂತೆ ಒಟ್ಟಾರೆ 96 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 3,706 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 886, ಕನಕಪುರ 753, ಮಾಗಡಿ 490 ಮತ್ತು ರಾಮನಗರ 1577 ಜನರು ಸೇರಿದ್ದಾರೆ.

ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 4,622 ಪ್ರಕರಣಗಳ ಪೈಕಿ 3,706 ಜನರು ಗುಣಮುಖರಾಗಿದ್ದು, ಸದ್ಯ 864 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 196, ಕನಕಪುರ 178, ಮಾಗಡಿ 216 ಮತ್ತು ರಾಮನಗರ 274 ಪ್ರಕರಣಗಳು ಸೇರಿವೆ.

ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ 34, ಕನಕಪುರ-17, ಮಾಗಡಿ-32 ಮತ್ತು ರಾಮನಗರದಲ್ಲಿ 63 ಪ್ರಕರಣಗಳು ಸೇರಿದಂತೆ ಒಟ್ಟು 146 ಕೋವಿಡ್​​​ ಪಾಸಿಟಿವ್ ಪ್ರಕರಣಗಳು ನಿನ್ನೆ ವರದಿಯಾಗಿದೆ. ಸೋಂಕು ದೃಢಪಟ್ಟವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.

ಒಟ್ಟು ಸೋಂಕು ಪ್ರಕರಣ: ಈವರೆಗೆ ಜಿಲ್ಲೆಯಲ್ಲಿ 4,622 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1094, ಕನಕಪುರ 942, ಮಾಗಡಿ 720 ಮತ್ತು ರಾಮನಗರದಲ್ಲಿ 1866 ಪ್ರಕರಣಗಳು ವರದಿಯಾಗಿದೆ.

ಮೃತಪಟ್ಟವರ ಪ್ರಕರಣ: ಚನ್ನಪಟ್ಟಣ ತಾಲೂಕು- 12, ಕನಕಪುರ ತಾಲೂಕು- 11, ಮಾಗಡಿ ತಾಲೂಕು- 14 ಹಾಗೂ ರಾಮನಗರ ತಾಲೂಕಿನಲ್ಲಿ 15 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 52 ಮಂದಿ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಗುಣಮುಖ: ಚನ್ನಪಟ್ಟಣ ತಾಲೂಕು-16, ಕನಕಪುರ-19, ಮಾಗಡಿ- 23 ಹಾಗೂ ರಾಮನಗರ ತಾಲೂಕಿನಲ್ಲಿ 38 ಮಂದಿ ಸೇರಿದಂತೆ ಒಟ್ಟಾರೆ 96 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 3,706 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 886, ಕನಕಪುರ 753, ಮಾಗಡಿ 490 ಮತ್ತು ರಾಮನಗರ 1577 ಜನರು ಸೇರಿದ್ದಾರೆ.

ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ದಾಖಲಾಗಿರುವ 4,622 ಪ್ರಕರಣಗಳ ಪೈಕಿ 3,706 ಜನರು ಗುಣಮುಖರಾಗಿದ್ದು, ಸದ್ಯ 864 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 196, ಕನಕಪುರ 178, ಮಾಗಡಿ 216 ಮತ್ತು ರಾಮನಗರ 274 ಪ್ರಕರಣಗಳು ಸೇರಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.