ETV Bharat / state

ಟಿಕೆಟ್ ಕೈ ತಪ್ಪಲು ಶಿವನಗೌಡ ನಾಯಕ ಕಾರಣ: ತಿಪ್ಪರಾಜ್ ಹವಾಲ್ದಾರ್ ಆರೋಪ - undefined

ತಪ್ಪಿದ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್. ಟಿಕೆಟ್ ತಪ್ಪಲು ಶಾಸಕ ಕೆ. ಶಿವನಗೌಡ ನಾಯಕ ಕಾರಣವೆಂದ ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್. ಆದರೂ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ತಿಪ್ಪರಾಜ್ ಭರವಸೆ.

ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್
author img

By

Published : Mar 31, 2019, 8:49 PM IST

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಲು ಶಾಸಕ ಕೆ. ಶಿವನಗೌಡ ನಾಯಕ ಕಾರಣವೆಂದು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ದೂರಿದರು.

ನಗರದ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಯಚೂರು ಲೋಕಸಭಾ ಕ್ಷೇತ್ರ ಎಸ್‌ಟಿ ಮೀಸಲು ಇರುವುದರಿಂದ ಮಾನಸಿಕವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆ. ಈ ನಿಟ್ಟಿನಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರನ್ನ, ಕಾರ್ಯಕರ್ತರನ್ನ ಭೇಟಿಯಾಗಿ ಸಿದ್ಧತೆ ಮಾಡಿಕೊಂಡು, ಹೈಕಮಾಂಡ್​ ಬಳಿ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೆ. ಬಹುತೇಕ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ರು. ಆದ್ರೆ ಶಿವನಗೌಡ ನಾಯಕ ಮಾತ್ರ ಟಿಕೆಟ್ ನೀಡುವುದಕ್ಕೆ ಬೆಂಬಲಿಸಿಲ್ಲ. ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಅವರೇ, ಆದರೆ ಇಂದು ಅವರ ಮನಸ್ಸಿನಲ್ಲಿ ಏನಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್

ಲೋಕಸಭಾ ಚುನಾವಣಾ ಸ್ಪರ್ಧೆಗೆ ಟಿಕೆಟ್ ತಪ್ಪಿಸಿದವರು ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ತಪ್ಪಿಸಿದರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತಿಪ್ಪರಾಜ್​, ನನಗೂ ರಾಜಕೀಯ ಬರುತ್ತೆ. ಇಂದು ಟಿಕೆಟ್ ತಪ್ಪಿಸಬಹುದು. ಆದ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಂದಲೂ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ನನಗೆ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶವಿರುವುದು ನಿಜ. ಆದರೆ ನಮಗೆ ದೇಶ ಮೊದಲು, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಲು ಶಾಸಕ ಕೆ. ಶಿವನಗೌಡ ನಾಯಕ ಕಾರಣವೆಂದು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ದೂರಿದರು.

ನಗರದ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಯಚೂರು ಲೋಕಸಭಾ ಕ್ಷೇತ್ರ ಎಸ್‌ಟಿ ಮೀಸಲು ಇರುವುದರಿಂದ ಮಾನಸಿಕವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೆ. ಈ ನಿಟ್ಟಿನಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಮುಖಂಡರನ್ನ, ಕಾರ್ಯಕರ್ತರನ್ನ ಭೇಟಿಯಾಗಿ ಸಿದ್ಧತೆ ಮಾಡಿಕೊಂಡು, ಹೈಕಮಾಂಡ್​ ಬಳಿ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೆ. ಬಹುತೇಕ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ರು. ಆದ್ರೆ ಶಿವನಗೌಡ ನಾಯಕ ಮಾತ್ರ ಟಿಕೆಟ್ ನೀಡುವುದಕ್ಕೆ ಬೆಂಬಲಿಸಿಲ್ಲ. ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಅವರೇ, ಆದರೆ ಇಂದು ಅವರ ಮನಸ್ಸಿನಲ್ಲಿ ಏನಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್

ಲೋಕಸಭಾ ಚುನಾವಣಾ ಸ್ಪರ್ಧೆಗೆ ಟಿಕೆಟ್ ತಪ್ಪಿಸಿದವರು ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ತಪ್ಪಿಸಿದರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತಿಪ್ಪರಾಜ್​, ನನಗೂ ರಾಜಕೀಯ ಬರುತ್ತೆ. ಇಂದು ಟಿಕೆಟ್ ತಪ್ಪಿಸಬಹುದು. ಆದ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಂದಲೂ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ನನಗೆ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶವಿರುವುದು ನಿಜ. ಆದರೆ ನಮಗೆ ದೇಶ ಮೊದಲು, ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Intro:ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಲು ಶಾಸಕ ಕೆ.ಶಿವನಗೌಡ ನಾಯಕ ಕಾರಣ ಎಂದು ಮಾಜಿ ಶಾಸಕ ತಿಪ್ಪರಾಜ್ ಹವಾಲ್ದಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Body:ನಗರದಲ್ಲಿ ಅವರ ನಿವಾಸದಲ್ಲಿ ಕಾರ್ಯಕರ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಯಚೂರು ಲೋಕಸಭೆ ಕ್ಷೇತ್ರ ಎಸ್‌ಟಿ ಮೀಸಲು ಕ್ಷೇತ್ರವಿರುವುದರಿಂದ ಮಾನಸಿಕವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ನಿಟ್ಟಿನಲ್ಲಿ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಮುಖಂಡರನ್ನ, ಕಾರ್ಯಕರ್ತರನ್ನ ಭೇಟಿಯಾಗುವ ಮೂಲಕ ಸಿದ್ದತೆ ಮಾಡಿಕೊಂಡು, ಹೈಕಮಾಂಡ್ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೆ. ಬಹುತೇಕ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ರು. ಅಲ್ಲದೇ ಕ್ಷೇತ್ರದ ನಾಲ್ವರ ಪೈಕಿ ಬೆಂಬಲ ಸೂಚಿಸಿದ್ರು. ಆದ್ರೆ ಕೆ.ಶಿವನಗೌಡ ನಾಯಕ ಟಿಕೆಟ್ ನೀಡುವುದಕ್ಕೆ ಬೆಂಬಲಿಸಿಲ್ಲ. ನನಗೆ ರಾಜಕೀಯ ಕರೆತಂದಿದ್ದು ಅವರೇ ಆದ್ರೂ, ಇಂದು ಅವರ ಮನಸ್ಸಿನಲ್ಲಿ ಏನು ಇದೆ ಎಂಬುವುದು ಗೊತ್ತಾಗುವುದಿಲ್ಲ ಎಂದರು.


Conclusion:ಲೋಕಸಭಾ ಚುನಾವಣೆ ಟಿಕೆಟ್ ಸ್ಪರ್ಧೆಗೆ ಟಿಕೆಟ್ ತಪ್ಪಿಸಿದವರು, ಮುಂದಿನ ವಿಧಾನಸಭೆ ಟಿಕೆಟ್ ತಪ್ಪಿಸಿದ್ದರೆ ಎನ್ನುವ ಪ್ರಶ್ನೆಗೆ, ನಾನು ೧೦ ರಾಜಕೀಯದಲ್ಲಿ ಅನುಭವವಾಗಿದೆ. ನಾನಗೂ ರಾಜಕೀಯ ಬರುತ್ತೆ. ಇಂದಿನಿಂದ ಟಿಕೆಟ್ ತಪ್ಪಿಸಬಹುದು. ಆದ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿದಲ್ಲೂ ಟಿಕೆಟ್ ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಪರೋಕ್ಷವಾಗಿ ತಮ್ಮ ಸಹೋದರ ಸಮಾನವಾಗಿರುವ ಶಾಸಕರಿಗೆ ಸವಾಲು ಹಾಕಿದರು. ಅಲ್ಲದೇ ನನಗೆ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶವಿರುವುದು ನಿಜ. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಬೇಕು ಎನ್ನುವುದು ನನ್ನ ಅಭಿಮಾನಗಳು ಹೇಳಿದ್ರು. ಆದ್ರೆ ದಿ. ಅನಂತಕುಮಾರ ಪತ್ನಿ ಟಿಕೆಟ್ ತಪ್ಪಿದೆ. ಅಂದಾಗಿಯು ಸಹ ನಮ್ಮ ತಪ್ಪಿದೆ. ಆದ್ರೆ ನಮ್ಮಗೆ ದೇಶ ಮೊದಲು ಎನ್ನುವ ನಿಟ್ಟಿನಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುವ ನಿಟ್ಟಿನಲ್ಲಿ ನಾವು ಯಾವ ಅಭ್ಯರ್ಥಿ ಬೆಂಬಲಿಸುತ್ತೇವೆ ಎಂದರು.
ಬೈಟ್.೧: ತಿಪ್ಪರಾಜ್ ಹವಾಲ್ದಾರ್, ಮಾಜಿ ಶಾಸಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.