ETV Bharat / state

ಕರ್ನಾಟಕ ಎಕ್ಸ್​​​​ಪ್ರೆಸ್​​ ರೈಲಿನಲ್ಲಿ ಕಳ್ಳತನ... ಬ್ಯಾಗ್​​​ ಕಳೆದುಕೊಂಡ ಗ್ವಾಲಿಯರ್​​ ನಿವಾಸಿ - undefined

ಕರ್ನಾಟಕ ಎಕ್ಸ್​​​ಪ್ರೆಸ್​​​​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಸಂಜೀವ್ ಕುಮಾರ್ ಠಾಕೂರ್ ಎಂಬ ಯುವಕನ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಬ್ಯಾಗ್​ ಕಳೆದುಕೊಂಡ ಗ್ವಾಲಿಯರ್ ನಿವಾಸಿ
author img

By

Published : Jun 28, 2019, 6:57 PM IST

Updated : Jun 28, 2019, 7:03 PM IST

ರಾಯಚೂರು : ಕರ್ನಾಟಕ ಎಕ್ಸ್​​​​ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬನ ಬ್ಯಾಗ್ ಕದ್ದು ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕ ಎಕ್ಸ್​​​​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶ ಮೂಲದ ಗ್ವಾಲಿಯರ್ ನಿವಾಸಿ ಸಂಜೀವ್ ಕುಮಾರ್ ಠಾಕೂರ್ ಎಂಬ ಯುವಕನ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದಾರೆ. ಈತ ಬೆಂಗಳೂರಿನಿಂದ ಗ್ವಾಲಿಯರ್​ಗೆ ತೆರಳಲು ಕರ್ನಾಟಕ ಎಕ್ಸ್​​​​ಪ್ರೆಸ್ (ನಂ.12627) ಜನರಲ್ ಬೋಗಿಯಲ್ಲಿ ಬ್ಯಾಗ್ ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ನಿದ್ರೆಗೆ ಜಾರಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎದ್ದು ನೋಡಿದಾಗ ಬ್ಯಾಗ್ ಕಳ್ಳತನವಾಗಿದ್ದು ತಿಳಿದಿದೆ.

ಬ್ಯಾಗ್​ ಕಳೆದುಕೊಂಡ ಗ್ವಾಲಿಯರ್ ನಿವಾಸಿ

15,999 ರೂ. ಮೌಲ್ಯದ ಮೊಬೈಲ್, ಸಿಮ್ ಕಾರ್ಡ್, 5 ಸಾವಿರ ರೂ. ನಗದು ಹಣ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳು ಮತ್ತು ಬಟ್ಟೆಗಳು ಬ್ಯಾಗ್​​​ನಲ್ಲಿ ಇತ್ತೆಂದು ಹಣ ಕಳೆದುಕೊಂಡ ಸಂಜೀವ್ ಕುಮಾರ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು : ಕರ್ನಾಟಕ ಎಕ್ಸ್​​​​ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬನ ಬ್ಯಾಗ್ ಕದ್ದು ಪರಾರಿಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕ ಎಕ್ಸ್​​​​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶ ಮೂಲದ ಗ್ವಾಲಿಯರ್ ನಿವಾಸಿ ಸಂಜೀವ್ ಕುಮಾರ್ ಠಾಕೂರ್ ಎಂಬ ಯುವಕನ ಬ್ಯಾಗ್ ಕದ್ದು ಖದೀಮರು ಪರಾರಿಯಾಗಿದ್ದಾರೆ. ಈತ ಬೆಂಗಳೂರಿನಿಂದ ಗ್ವಾಲಿಯರ್​ಗೆ ತೆರಳಲು ಕರ್ನಾಟಕ ಎಕ್ಸ್​​​​ಪ್ರೆಸ್ (ನಂ.12627) ಜನರಲ್ ಬೋಗಿಯಲ್ಲಿ ಬ್ಯಾಗ್ ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ನಿದ್ರೆಗೆ ಜಾರಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಎದ್ದು ನೋಡಿದಾಗ ಬ್ಯಾಗ್ ಕಳ್ಳತನವಾಗಿದ್ದು ತಿಳಿದಿದೆ.

ಬ್ಯಾಗ್​ ಕಳೆದುಕೊಂಡ ಗ್ವಾಲಿಯರ್ ನಿವಾಸಿ

15,999 ರೂ. ಮೌಲ್ಯದ ಮೊಬೈಲ್, ಸಿಮ್ ಕಾರ್ಡ್, 5 ಸಾವಿರ ರೂ. ನಗದು ಹಣ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳು ಮತ್ತು ಬಟ್ಟೆಗಳು ಬ್ಯಾಗ್​​​ನಲ್ಲಿ ಇತ್ತೆಂದು ಹಣ ಕಳೆದುಕೊಂಡ ಸಂಜೀವ್ ಕುಮಾರ್ ಠಾಕೂರ್ ತಿಳಿಸಿದ್ದಾರೆ. ಈ ಕುರಿತು ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ರೈಲ್ವೆ ಪ್ರಯಾಣಿಕ ಬ್ಯಾಗ್ ಕದ್ದ ಖದೀಮರು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 28-೦6-2019
ಸ್ಥಳ: ರಾಯಚೂರು
ಆಂಕರ್: ಕರ್ನಾಟಕ ಎಕ್ಸೆಪ್ರೇಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬ್ಯಾಗ್ ನ್ನು ಖದೀಮರು ಕದ್ದು ಪರಾರಿಯಾಗಿರುವ ಪ್ರಕರಣವೊಂದು ರಾಯಚೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.Body:ನಗರದ ರೈಲ್ವೆ ನಿಲ್ದಾಣ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮದ್ಯಪ್ರದೇಶದ ಮೂಲದ ಗ್ವಾಲಿಯರ್ ನಿವಾಸಿ ಸಂಜೀವ್ ಕುಮಾರ್ ಟಾಕೋರ್ ಎಂಬ ಯುವಕನ ಬ್ಯಾಗ್ ನ್ನು ಕದ್ದು ಪರಾರಿಯಾಗಿದ್ದಾರೆ. ಬೆಂಗಳೂರಿನಿಂದ ಗ್ವಾಲಿಯರ್ ಗೆ ತೆರಳಲು ಕರ್ನಾಟಕ ಎಕ್ಸೆಪ್ರೆಸ್(ಟ್ರೈನ್ ನಂ.12627) ಜನರಲ್ ಬೋಗಿಯಲ್ಲಿ ಬ್ಯಾಗ್ ಪಕ್ಕದಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ. ರಾತ್ರಿ ವೇಳೆ ರೈಲುಗಾಡಿ ನಿದ್ರೆಗೆ ಜಾರಿ, ರಾಯಚೂರು ನಗರದ ರೈಲ್ವೆ ನಿಲ್ದಾಣದಲ್ಲಿ ಸುಮಾರು 3ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ಬ್ಯಾಗ್ ನ್ನು ಖದೀಮರು ಕಳ್ಳತನ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. 15999 ಮೌಲ್ಯದ ಮೊಬೈಲ್ ಮತ್ತು ಸೀಮ್ ಕಾರ್ಡ್, 5 ಸಾವಿರ ರೂಪಾಯಿ ನಗದು ಹಣ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ದಾಖಲೆಗಳು ಮತ್ತು ಬಟ್ಟೆಗಳು ಇದ್ದ ಬ್ಯಾಗ್ ನ್ನು ಕಳ್ಳರು ಕದ್ದು ಹೋಗಿದ್ದಾರೆ ಎಂದು ಪ್ರಯಾಣಿಕ ಹೇಳುತ್ತಿದ್ದಾರೆ. Conclusion:ಈ ಪ್ರಕರಣ ಸಂಬಂಧಿಸಿದ್ದಂತೆ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Last Updated : Jun 28, 2019, 7:03 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.