ETV Bharat / state

ತಹಶೀಲ್ದಾರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ:  ಎಸಿ ಎದುರು ಹೇಳಿಕೆ ದಾಖಲು

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆರೋಪಿ ತಹಶೀಲ್ದಾರ್​ ಮತ್ತು ಸಂತ್ರಸ್ತೆ ಶಿರಸ್ತೇದಾರಳು ಸಹಾಯಕ ಆಯುಕ್ತರ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

author img

By

Published : Sep 24, 2020, 5:16 PM IST

sexual harassment allegation on Manvi Tahsildar, sexual harassment, sexual harassment in Raichur, Raichur crime news, ತಹಶೀಲ್ದಾರ್​ ಮೇಲೆ ಲೈಂಗಿಕ ಕಿರುಕುಳ ಆರೋಪ, ಮಾನವಿ ತಹಶೀಲ್ದಾರ್​ ಮೇಲೆ ಲೈಂಗಿಕ ಕಿರುಕುಳ ಆರೋಪ, ರಾಯಚೂರಿನಲ್ಲಿ ಲೈಂಗಿಕ ಕಿರುಕುಳ, ರಾಯಚೂರು ಅಪರಾಧ ಸುದ್ದಿ,
ತಹಶೀಲ್ದಾರ್​ ಮೇಲೆ ಲೈಂಗಿಕ ಕಿರುಕುಳ ಆರೋಪ

ರಾಯಚೂರು: ಮಾನ್ವಿ ತಹಶೀಲ್ದಾರ್​​​ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ, ಆರೋಪಿತರು ಹಾಗೂ ದೂರುದಾರರು ಸಹಾಯಕ ಆಯುಕ್ತರ ಮುಂದೆ ಘಟನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿಂದು ದೂರಿಗೆ ಸಂಬಂಧಿಸಿದಂತೆ ಆರೋಪಿತರು ಹಾಗೂ ದೂರುದಾರರು ತಮ್ಮ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಮುಂದಿನ ವಿಚಾರಣೆಯನ್ನು ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ನಡೆಸಲಿದೆ.

ತಹಶೀಲ್ದಾರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ದೂರುದಾರರಾದ ಶಿರಸ್ತೇದಾರರು ಮಾಧ್ಯಮಗಳೊಂದಿಗೆ ಮಾತನಾಡಿ, 2013ರ ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ಮುಖಾಂತರ ದೂರಿನ ವಿಚಾರಣೆ ನಡೆಯಲಿದೆ. ಸಮಿತಿಯ ನಿರ್ಣಯಕ್ಕೆ ನಾನು ಬದ್ಧವಾಗಿದ್ದೇನೆ. ಆರೋಪಿತರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಸಮಿತಿಯಿಂದಲೇ ದೂರು ದಾಖಲಾಗಲಿದೆ ಎಂದು ಹೇಳಿದರು.

ಈಗಾಗಲೇ ನಾನು ಮಾನಸಿಕವಾಗಿ ನೊಂದಿದ್ದು, ಒಂದು ಹೆಜ್ಜೆ ಮುಂದೆ ಬಂದು ದೂರು ನೀಡಿದ್ದೇನೆ. ಮಹಿಳೆಯರು ಯಾರಾದರೂ ಕಚೇರಿಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಹಿರಿಯ ಅಧಿಕಾಗಳ ಗಮನಕ್ಕೆ ತರುವುದು ಒಳಿತು ಎಂದು ಹೇಳಿದರು.

ಜಿಲ್ಲಾಧಿಕಾರಿ ಆದೇಶದಂತೆ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಮುಂದಿನ ವಿಚಾರಣೆ ನಡೆಸಲಿದೆ ಎಂದು ನೊಂದ ಮಹಿಳೆ ಹೇಳಿದರು.

ರಾಯಚೂರು: ಮಾನ್ವಿ ತಹಶೀಲ್ದಾರ್​​​ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ, ಆರೋಪಿತರು ಹಾಗೂ ದೂರುದಾರರು ಸಹಾಯಕ ಆಯುಕ್ತರ ಮುಂದೆ ಘಟನೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿಂದು ದೂರಿಗೆ ಸಂಬಂಧಿಸಿದಂತೆ ಆರೋಪಿತರು ಹಾಗೂ ದೂರುದಾರರು ತಮ್ಮ ತಮ್ಮ ಹೇಳಿಕೆಯನ್ನು ದಾಖಲಿಸಿದ್ದು, ಮುಂದಿನ ವಿಚಾರಣೆಯನ್ನು ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ನಡೆಸಲಿದೆ.

ತಹಶೀಲ್ದಾರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ದೂರುದಾರರಾದ ಶಿರಸ್ತೇದಾರರು ಮಾಧ್ಯಮಗಳೊಂದಿಗೆ ಮಾತನಾಡಿ, 2013ರ ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿ ಮುಖಾಂತರ ದೂರಿನ ವಿಚಾರಣೆ ನಡೆಯಲಿದೆ. ಸಮಿತಿಯ ನಿರ್ಣಯಕ್ಕೆ ನಾನು ಬದ್ಧವಾಗಿದ್ದೇನೆ. ಆರೋಪಿತರ ವಿರುದ್ಧ ನೇರವಾಗಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ. ಸಮಿತಿಯಿಂದಲೇ ದೂರು ದಾಖಲಾಗಲಿದೆ ಎಂದು ಹೇಳಿದರು.

ಈಗಾಗಲೇ ನಾನು ಮಾನಸಿಕವಾಗಿ ನೊಂದಿದ್ದು, ಒಂದು ಹೆಜ್ಜೆ ಮುಂದೆ ಬಂದು ದೂರು ನೀಡಿದ್ದೇನೆ. ಮಹಿಳೆಯರು ಯಾರಾದರೂ ಕಚೇರಿಗಳಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಹಿರಿಯ ಅಧಿಕಾಗಳ ಗಮನಕ್ಕೆ ತರುವುದು ಒಳಿತು ಎಂದು ಹೇಳಿದರು.

ಜಿಲ್ಲಾಧಿಕಾರಿ ಆದೇಶದಂತೆ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ಮುಂದಿನ ವಿಚಾರಣೆ ನಡೆಸಲಿದೆ ಎಂದು ನೊಂದ ಮಹಿಳೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.