ETV Bharat / state

ಜನರ ಮನವಿಗೆ ಕಿವುಡಾದ ಸರ್ಕಾರ: ತಮ್ಮೂರಿನ ರಸ್ತೆ ತಾವೇ ದುರಸ್ತಿ ಮಾಡಿಕೊಂಡ ಗ್ರಾಮಸ್ಥರು

ಗ್ರಾಮ ಪಂಚಾಯತ್​ ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರದ ಕಾರಣದಿಂದ ಗ್ರಾಮಸ್ಥರು ತಾವೇ ರಸ್ತೆ ದುರಸ್ತಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.

author img

By

Published : Jul 20, 2021, 4:06 PM IST

road-repaired-by-villagers-in-raichir
ಸ್ಪಂದಿಸದ ಸರ್ಕಾರ: ತಾವೇ ರಸ್ತೆ ದುರಸ್ತಿ ಮಾಡಿಕೊಂಡ ಗ್ರಾಮಸ್ಥರು

ರಾಯಚೂರು: ರಸ್ತೆ ರಿಪೇರಿಗೆ ಸರ್ಕಾರ ಸ್ಪಂದಿಸದಿದ್ದಾಗ ಗ್ರಾಮಸ್ಥರೇ ಪರಸ್ಪರ ಸಹಕಾರದೊಂದಿಗೆ ರಸ್ತೆ ರಿಪೇರಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಬಳಿ ಹೂನೂರು ಗ್ರಾಮ ಪಂಚಾಯತ್​ನಲ್ಲಿ ನಡೆದಿದೆ.

ಮರಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲಗಳಿಗೆ ಹೋಗುವ ದಾರಿ ಹಾಳಾಗಿತ್ತು. ರಸ್ತೆ ಅಕ್ಕಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ಓಡಾಡುವುದು ಕಷ್ಟವಾಗಿತ್ತು. ರಸ್ತೆಯನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಪ್ರಯೋಜನವಾಗಿರಲಿಲ್ಲ.

ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿರುವ ಗ್ರಾಮಸ್ಥರು

ಗ್ರಾಮ ಪಂಚಾಯತ್​ ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಹಣವನ್ನ ಗ್ರಾಮಸ್ಥರಿಂದಲೇ ಸಂಗ್ರಹಿಸಿಕೊಂಡು ರಸ್ತೆ ದುರಸ್ತಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: 500 ರೂ ಕಳ್ಳತನದ ಆರೋಪ: ಮರ್ಯಾದೆಗಂಜಿ ಒಂದೇ ಕುಟುಂಬದ 6 ಮಂದಿಯಿಂದ ವಿಷಸೇವನೆ

ಹದಗೆಟ್ಟ ರಸ್ತೆಯಲ್ಲಿ ಕಲ್ಲುಗಳನ್ನು, ಮರಂ ಹಾಕಿಸಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಬೆಳೆದ ಜಾಲಿಗಿಡಗಳನ್ನ ಜೆಸಿಬಿ ಮೂಲಕ ತೆಗೆಸುತ್ತಿದ್ದಾರೆ. ಕೆಲವರು ತಮ್ಮದೇ ಟ್ರ್ಯಾಕ್ಟರ್​ ಅನ್ನ ಬಳಸಿಕೊಂಡು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂಬುದು ವಿಪರ್ಯಾಸ.

ರಾಯಚೂರು: ರಸ್ತೆ ರಿಪೇರಿಗೆ ಸರ್ಕಾರ ಸ್ಪಂದಿಸದಿದ್ದಾಗ ಗ್ರಾಮಸ್ಥರೇ ಪರಸ್ಪರ ಸಹಕಾರದೊಂದಿಗೆ ರಸ್ತೆ ರಿಪೇರಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣ ಬಳಿ ಹೂನೂರು ಗ್ರಾಮ ಪಂಚಾಯತ್​ನಲ್ಲಿ ನಡೆದಿದೆ.

ಮರಳಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲಗಳಿಗೆ ಹೋಗುವ ದಾರಿ ಹಾಳಾಗಿತ್ತು. ರಸ್ತೆ ಅಕ್ಕಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ಓಡಾಡುವುದು ಕಷ್ಟವಾಗಿತ್ತು. ರಸ್ತೆಯನ್ನು ದುರಸ್ತಿ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಪ್ರಯೋಜನವಾಗಿರಲಿಲ್ಲ.

ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿರುವ ಗ್ರಾಮಸ್ಥರು

ಗ್ರಾಮ ಪಂಚಾಯತ್​ ಹಾಗೂ ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಹಣವನ್ನ ಗ್ರಾಮಸ್ಥರಿಂದಲೇ ಸಂಗ್ರಹಿಸಿಕೊಂಡು ರಸ್ತೆ ದುರಸ್ತಿ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: 500 ರೂ ಕಳ್ಳತನದ ಆರೋಪ: ಮರ್ಯಾದೆಗಂಜಿ ಒಂದೇ ಕುಟುಂಬದ 6 ಮಂದಿಯಿಂದ ವಿಷಸೇವನೆ

ಹದಗೆಟ್ಟ ರಸ್ತೆಯಲ್ಲಿ ಕಲ್ಲುಗಳನ್ನು, ಮರಂ ಹಾಕಿಸಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಬೆಳೆದ ಜಾಲಿಗಿಡಗಳನ್ನ ಜೆಸಿಬಿ ಮೂಲಕ ತೆಗೆಸುತ್ತಿದ್ದಾರೆ. ಕೆಲವರು ತಮ್ಮದೇ ಟ್ರ್ಯಾಕ್ಟರ್​ ಅನ್ನ ಬಳಸಿಕೊಂಡು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಜನರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಎಂಬುದು ವಿಪರ್ಯಾಸ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.