ETV Bharat / state

ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದ ಖಾದರ್ ವಲಿಗಳ ಉರುಸ್ - undefined

ಮಂಜರ್ಲಾ ಗ್ರಾಮವು ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ. ರಾಯಚೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್​​ ವಲಿ ಅವರ ಉರುಸ್ ನಡೆಯುತ್ತದೆ. ಜಿಲ್ಲೆಯ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಜನರು ಉರುಸ್​ಗೆ ಆಗಮಿಸುತ್ತಾರೆ.

ಉರುಸ್
author img

By

Published : May 19, 2019, 2:42 PM IST

ರಾಯಚೂರು: ಸಾಮಾನ್ಯವಾಗಿ ಉರುಸ್ ಎಂದರೆ ಒಂದೇ ಕೋಮಿನ ಜನರು ಹೆಚ್ಚು ಸೇರುವುದು, ಒಂದೇ ಧಾರ್ಮಿಕ ಪದ್ಧತಿಯಂತೆ ಆಚಾರ ವಿಚಾರ ನಡೆಯುವುದನ್ನು ಕಾಣಬಹುದು. ಆದರೆ ಇಲ್ಲೊಂದು ಉರುಸ್​​ನಲ್ಲಿ ಮುಸ್ಲಿಂರಷ್ಟೇ ಅಲ್ಲದೇ ಹಿಂದೂಗಳು ಕೂಡ ಭಾಗವಹಿಸಿ ಮುಸ್ಲಿಂರ ಸಾಂಪ್ರದಾಯದಂತೆ ಪೂಜೆಗೈದು ಭಕ್ತಿ ಸಮರ್ಪಿಸುತ್ತಾರೆ.

ರಾಯಚೂರು ತಾಲೂಕಿನ ಕಮಲಾಪುರ ಗ್ರಾಮ ಪಂಚಾಯತ್​​ಗೆ ಒಳಪಡುವ ಮಂಜರ್ಲಾ ಗ್ರಾಮದ ಖಾದರ್ ವಲಿಗಳ ಉರುಸ್​​​ನಲ್ಲಿ ಈ ಎಲ್ಲಾ ದೃಶ್ಯಗಳನ್ನ ಕಾಣಬಹುದು. ಹೀಗಾಗಿ ಗಡಿಭಾಗದ ಮಂಜರ್ಲಾ ಗ್ರಾಮವು ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ. ರಾಯಚೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್​​ ವಲಿ ಅವರ ಉರುಸ್ ನಡೆಯುತ್ತದೆ. ಜಿಲ್ಲೆಯ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಜನರು ಉರುಸ್​ಗೆ ಆಗಮಿಸುತ್ತಾರೆ.

ಉರುಸ್ ಸಂಭ್ರಮ

ಉರುಸ್​ನಲ್ಲಿ ದರ್ಗಾದ ಪೀಠಾಧಿಪತಿಗಳು ಅವರ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತಾರೆ. ಆದರೆ ಪ್ರತಿ ವರ್ಷ ನಡೆಯುವ ಈ ಉರುಸ್ ಕೇವಲ ಮುಸ್ಲಿಂರು ಮಾತ್ರವಲ್ಲದೇ ಹಿಂದೂ ಬಾಂಧವರು, ಊರಿನ ಜನರು ಮಾತ್ರವಲ್ಲದೇ ಗಧಾರ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಆರ್ಥಿಕ, ಸಾಮಾಜಿಕವಾಗಿ ಜವಾಬ್ದಾರಿ ವಹಿಸಿಕೊಂಡು ನೆರವೇರಿಸುತ್ತಾರೆ.

ಖಾದರ್​​ ವಲಿ ಪ್ರಭುಗಳ ಹಿನ್ನೆಲೆ:

ಮಂಜರ್ಲಾ ಗ್ರಾಮದ ಖಾದರ್ ವಲಿ ಪ್ರಭುಗಳು ಮುಸ್ಲಿಂ ಮಹಮದೀಯ ಕುಟುಂಬಕ್ಕೆ ಸೇರಿದರೂ ಪ್ರಸಿದ್ಧ, ಪೂಜ್ಯ ಗುರು ದತ್ತಾತ್ರೆಯ ಸಂಪ್ರದಾಯಸ್ಥರಾಗಿದ್ದರು. ನಮಾಜ್ ಮಾಡುವ ಜೊತೆಗೆ ಗುಡಿ ಗುಂಡಾರಗಳಲ್ಲಿ ಭಜನೆ, ತತ್ವಪದ ಧಾರ್ಮಿಕ ಹಾಡುಗಳನ್ನ ಹಾಡುವ ಮೂಲಕ ಭಾವೈಕ್ಯತೆಯ ಕೇಂದ್ರ ವ್ಯಕ್ತಿಯಾಗಿದ್ದರು. ಅವರು 1975ರಲ್ಲಿ ದೇಹತ್ಯಾಗ ಮಾಡಿದ್ದು, ಅಂದಿನಿಂದ ಅವರ ಹೆಸರಿನಲ್ಲಿ ಉರುಸ್ (ಆರಾಧನೆ ) ಮಾಡಲಾಗುತ್ತಿದೆ.

ಖಾದರ್ ವಲಿ ಪ್ರಭುಗಳ ದಾರಿಯಲ್ಲೇ ಅವರ ಮಕ್ಕಳೂ ಕೂಡ ಸಾಗುವ ಮೂಲಕ ಭಾವೈಕ್ಯತೆ ಹಾಗೆಯೇ ಮುಂದುವರೆಯಲು ಕಾರಣರಾಗಿದ್ದಾರೆ.
ಖ್ಯಾತ ತತ್ವಪದ ಗಾಯಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಮಗನಾದ‌ ದಾದಾಪೀರ್ ಮಜರ್ಲಾ ಅವರ ನೇತೃತ್ವದಲ್ಲಿ ಸಹೋದರರಾದ ಚಾಂದ್ ಪೀರ್ ಮಂಜರ್ಲಾ, ಹುಸೇನ್ ಪೀರ್ ಮಂಜರ್ಲಾ ಅವರು ಆಚರಣೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೇ.18 ರಂದು ಉರುಸ್ ನಿಮಿತ್ತ ಶ್ರೀಗಳ ಅಂದರೆ ದಾದಾಪೀರ್ ಮಂಜರ್ಲಾ ಅವರ ಮನೆಯಿಂದ ಗಂಧದ ಮೆರವಣಿಗೆ ಹಾಗೂ ಇತರೆ ಧಾರ್ಮಿಕ ಕಾರ್ಯ ನೆರವೇರಿತು. ನಂತರ ಕೊಲ್ಕತ್ತಾದ ಹೆಸರಾಂತ ಹಿಂದುಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್‌ರ ಶಿಷ್ಯರಾದ ಪಂಡಿತ್ ಆಶಿಶ್ ಚಕ್ರವರ್ತಿ ಹಾಗೂ ನಿರಂಜನ ಬೋಸ್ ನೇತೃತ್ವದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

ರಾಯಚೂರು: ಸಾಮಾನ್ಯವಾಗಿ ಉರುಸ್ ಎಂದರೆ ಒಂದೇ ಕೋಮಿನ ಜನರು ಹೆಚ್ಚು ಸೇರುವುದು, ಒಂದೇ ಧಾರ್ಮಿಕ ಪದ್ಧತಿಯಂತೆ ಆಚಾರ ವಿಚಾರ ನಡೆಯುವುದನ್ನು ಕಾಣಬಹುದು. ಆದರೆ ಇಲ್ಲೊಂದು ಉರುಸ್​​ನಲ್ಲಿ ಮುಸ್ಲಿಂರಷ್ಟೇ ಅಲ್ಲದೇ ಹಿಂದೂಗಳು ಕೂಡ ಭಾಗವಹಿಸಿ ಮುಸ್ಲಿಂರ ಸಾಂಪ್ರದಾಯದಂತೆ ಪೂಜೆಗೈದು ಭಕ್ತಿ ಸಮರ್ಪಿಸುತ್ತಾರೆ.

ರಾಯಚೂರು ತಾಲೂಕಿನ ಕಮಲಾಪುರ ಗ್ರಾಮ ಪಂಚಾಯತ್​​ಗೆ ಒಳಪಡುವ ಮಂಜರ್ಲಾ ಗ್ರಾಮದ ಖಾದರ್ ವಲಿಗಳ ಉರುಸ್​​​ನಲ್ಲಿ ಈ ಎಲ್ಲಾ ದೃಶ್ಯಗಳನ್ನ ಕಾಣಬಹುದು. ಹೀಗಾಗಿ ಗಡಿಭಾಗದ ಮಂಜರ್ಲಾ ಗ್ರಾಮವು ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ. ರಾಯಚೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್​​ ವಲಿ ಅವರ ಉರುಸ್ ನಡೆಯುತ್ತದೆ. ಜಿಲ್ಲೆಯ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಜನರು ಉರುಸ್​ಗೆ ಆಗಮಿಸುತ್ತಾರೆ.

ಉರುಸ್ ಸಂಭ್ರಮ

ಉರುಸ್​ನಲ್ಲಿ ದರ್ಗಾದ ಪೀಠಾಧಿಪತಿಗಳು ಅವರ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತಾರೆ. ಆದರೆ ಪ್ರತಿ ವರ್ಷ ನಡೆಯುವ ಈ ಉರುಸ್ ಕೇವಲ ಮುಸ್ಲಿಂರು ಮಾತ್ರವಲ್ಲದೇ ಹಿಂದೂ ಬಾಂಧವರು, ಊರಿನ ಜನರು ಮಾತ್ರವಲ್ಲದೇ ಗಧಾರ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಆರ್ಥಿಕ, ಸಾಮಾಜಿಕವಾಗಿ ಜವಾಬ್ದಾರಿ ವಹಿಸಿಕೊಂಡು ನೆರವೇರಿಸುತ್ತಾರೆ.

ಖಾದರ್​​ ವಲಿ ಪ್ರಭುಗಳ ಹಿನ್ನೆಲೆ:

ಮಂಜರ್ಲಾ ಗ್ರಾಮದ ಖಾದರ್ ವಲಿ ಪ್ರಭುಗಳು ಮುಸ್ಲಿಂ ಮಹಮದೀಯ ಕುಟುಂಬಕ್ಕೆ ಸೇರಿದರೂ ಪ್ರಸಿದ್ಧ, ಪೂಜ್ಯ ಗುರು ದತ್ತಾತ್ರೆಯ ಸಂಪ್ರದಾಯಸ್ಥರಾಗಿದ್ದರು. ನಮಾಜ್ ಮಾಡುವ ಜೊತೆಗೆ ಗುಡಿ ಗುಂಡಾರಗಳಲ್ಲಿ ಭಜನೆ, ತತ್ವಪದ ಧಾರ್ಮಿಕ ಹಾಡುಗಳನ್ನ ಹಾಡುವ ಮೂಲಕ ಭಾವೈಕ್ಯತೆಯ ಕೇಂದ್ರ ವ್ಯಕ್ತಿಯಾಗಿದ್ದರು. ಅವರು 1975ರಲ್ಲಿ ದೇಹತ್ಯಾಗ ಮಾಡಿದ್ದು, ಅಂದಿನಿಂದ ಅವರ ಹೆಸರಿನಲ್ಲಿ ಉರುಸ್ (ಆರಾಧನೆ ) ಮಾಡಲಾಗುತ್ತಿದೆ.

ಖಾದರ್ ವಲಿ ಪ್ರಭುಗಳ ದಾರಿಯಲ್ಲೇ ಅವರ ಮಕ್ಕಳೂ ಕೂಡ ಸಾಗುವ ಮೂಲಕ ಭಾವೈಕ್ಯತೆ ಹಾಗೆಯೇ ಮುಂದುವರೆಯಲು ಕಾರಣರಾಗಿದ್ದಾರೆ.
ಖ್ಯಾತ ತತ್ವಪದ ಗಾಯಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಮಗನಾದ‌ ದಾದಾಪೀರ್ ಮಜರ್ಲಾ ಅವರ ನೇತೃತ್ವದಲ್ಲಿ ಸಹೋದರರಾದ ಚಾಂದ್ ಪೀರ್ ಮಂಜರ್ಲಾ, ಹುಸೇನ್ ಪೀರ್ ಮಂಜರ್ಲಾ ಅವರು ಆಚರಣೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೇ.18 ರಂದು ಉರುಸ್ ನಿಮಿತ್ತ ಶ್ರೀಗಳ ಅಂದರೆ ದಾದಾಪೀರ್ ಮಂಜರ್ಲಾ ಅವರ ಮನೆಯಿಂದ ಗಂಧದ ಮೆರವಣಿಗೆ ಹಾಗೂ ಇತರೆ ಧಾರ್ಮಿಕ ಕಾರ್ಯ ನೆರವೇರಿತು. ನಂತರ ಕೊಲ್ಕತ್ತಾದ ಹೆಸರಾಂತ ಹಿಂದುಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್‌ರ ಶಿಷ್ಯರಾದ ಪಂಡಿತ್ ಆಶಿಶ್ ಚಕ್ರವರ್ತಿ ಹಾಗೂ ನಿರಂಜನ ಬೋಸ್ ನೇತೃತ್ವದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

Intro:ಸಾಮಾನ್ಯವಾಗಿ ಉರುಸ್ ಎಂದರೇ ಒಂದೇ ಕೋಮಿನ ಜನರು ಹೆಚ್ಚು ಸೇರುವುದು ಸಾಮಾನ್ಯ ಒಂದೇ ಧಾರ್ಮಿಕ ಪದ್ದತಿ ಯಂತೆ ಆಚಾರ ವಿಚಾರ ನಡೆಯುವುದು ಕಾಣಬಹುದು.
ಆದ್ರೆ ಇಲ್ಲೊಂದು ಉರುಸ್ ನಡೆಯುತ್ತೇ ಮುಸ್ಲಿಂ ಮಾತ್ರವಲ್ಲದೇ ಹಿಂದೂ ಜನರು ಸೇರುವುದು ಮಾತ್ರವಲ್ಲದೇ ಮುಸ್ಲಿಂರ ಸಾಂಪ್ರದಾಯದ ಜೊತೆಗೆ‌ ಶ್ರೀಗಳ ದರ್ಗಾಕ್ಕೆ ಆರತಿ ಎತ್ತುವುದು ,ಕಳಸ ಹೊರುವುದು ಜೊತೆಗೆ ತತ್ವಪದ ಭಕ್ತಿಪದದ ಜೊತೆಗೆ ಅವರ ಆರಾಧನೆ ಮಾಡುವದರ ಮೂಲಕ ತಮ್ಮ ಭಕ್ತಿ ಸಮರ್ಪಿಸುತ್ತಾರೆ.
ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ರಾಯಚೂರು ತಾಲೂಕಿನ ಕಮಲಾಪುರ ಗ್ರಾಮ ಪಂಚಾಯತಿಗೆ ಒಳಪಡುವ ಮಂಜರ್ಲಾ ಗ್ರಾಮದ ಖಾದರ್ ವಲಿಗಳ ಉರುಸ್ ನಲ್ಲಿ ಈ ಎಲ್ಲಾ ದೃಷ್ಯಗಳು ಕಾಣಬಹುದು. ಗಡಿಭಾಗದ ಮಂಜರ್ಲಾ ಗ್ರಾಮವೇ ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ.



Body:ರಾಯಚೂರಿನಿಂದ ಸುಮಾರು 15 km ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್ವಲಿ ಅವರ ಉರುಸ್ ನಡೆಯುತ್ತಿದ್ದು ಜಿಲ್ಲೆಯ ಮಾತ್ರವಲ್ಲದೇ ಆಂದ್ರಪ್ರದೇಶದ, ತೆಲಂಗಾಣ ಹಾಗೂ ಅವರ ಭಕ್ತರು ಮಹಾರಾಷ್ಟ್ರ ದಲ್ಲಿಯೂ ಇದ್ದು ಅಲ್ಲಿಂದ ಪ್ರತಿ ವರ್ಷ ಈ ಉರುಸ್ ಕಾರ್ಯಕ್ರಮ ದಲ್ಲಿ ಸೇರುತ್ತಾರೆ.
ಉರುಸ್ ಎಂದರೆ ದರ್ಗಾದ ಪೀಠಾಧಿಪತಿಗಳು ಅವರ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರುಸುತ್ತಾರೆ ಆದರೆ ಪ್ರತಿ ವರ್ಷ ನಡೆಯುವ ಈ ಉರುಸ್ ಕೇವಲ ಮುಸ್ಲಿಂ ಮರು ಮಾತ್ರವಲ್ಲದೇ ಹಿಂದು ಬಾಂಧವರು ಊರಿನ ಜನರು ಮಾತ್ರವಲ್ಲದೇ ಗಧಾರ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಆರ್ಥಿಕ, ಸಾಮಾಜಿಕವಾಗಿ ಜವಾಬ್ದಾರಿ ವಹಿಸಿಕೊಂಡು ಉರುಸ್ ನೆರವೇರಿಸುತ್ತಾರೆ.
ಖಾದರ ವಲಿ ಪ್ರಭುಗಳ ಹಿನ್ನೆಲೆ: ಮಂಜರ್ಲಾ ಗ್ರಾಮದ ಖಾದರ್ ವಲಿ ಪ್ರಭುಗಳು ಅವರು ಮುಸ್ಲಿಂ ಮಹಮ್ಮದೀಯ ಕುಟುಂಬಕ್ಕೆ ಸೇರಿದರೂ ಪ್ರಸಿದ್ದ ,ಪೂಜ್ಯ ಗುರು ದತ್ತಾತ್ರೆಯ ಸಂಪ್ರದಾಯಸ್ಥರಾಗಿದ್ದರು. ನಮಾಜ್ ಮಾಡುವ ಜೊತೆಗೆ ಗುಡಿ ಗುಂಢಾರಗಳಲ್ಲಿ ಭಜನೆ,ತತ್ವಪದ ಧಾರ್ಮಿಕ ಹಾಡುಗಳು ಹಾಡುವ ಮೂಲಕ ಭಾವೈಕ್ಯತೆಯ ಕೇಂದ್ರ ವ್ಯಕ್ತಿ ಯಾಗಿದ್ದರು.
ಅವರು 1975ರಲ್ಲಿ ದೇಹ ತ್ಯಾಗ ಮಾಡಿದ್ದು ಅಂದಿನಿಂದ ಅವರ ಹೆಸರಿನಲ್ಲಿ ಉರುಸ್ (ಆರಾಧನೆ ) ಮಾಡಲಾಗುತ್ತಿದೆ ಹಿಂದು ಮುಸ್ಲಿಮರು.
ನಂತರ ಅವರ ತಂದೆಯಂತೆ ಅಂದರೆ ಖಾದರ್ ವಲೀ ಪ್ರಭುಗಳ ದಾರಿಯಲ್ಲಿ ಅವರು ಮಕ್ಕಳು ಸಾಗುವ ಮೂಲಕ ಭಾವೈಕ್ಯತೆ ಹೀಗೆ ಮುಂದುವರೆಯಲು ಕಾರಣರಾಗಿದ್ದಾರೆ.
ಖ್ಯಾತ ತತ್ವಪದ ಗಾಯಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಮಗನಾದ‌ ದಾದಾಪೀರ್ ಮಜರ್ಲಾ ಅವರ ನೇತೃತ್ವದಲ್ಲಿ ಸಹೋದರರಾದ ಚಾಂದ್ ಪೀರ್ ಮಂಜರ್ಲಾ,ಹುಸೇನ್ ಪೀರ್ ಮಂಜರ್ಲಾ ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ನಿನ್ನೆ ಮೇ.18 ರಂದು ಉರುಸ್ ನಿಮಿತ್ತ ಶ್ರೀಗಳ ಅಂದರೆ ದಾದಾಪೀರ್ ಮಂಜರ್ಲಾ ಅವರ ಮನೆಯಿಂದ ಶ್ರೀಗಳ ಉರುಸ್ ನಿಮಿತ್ತ ಗಂದದ ಮೆರವಣಿಗೆ ಹಾಗೂ ಇತರೆ ಧಾರ್ಮಿಕ ಕಾರ್ಯ ನೆರವೇರಿತು ನಂತರ ಕಲ್ಕತ್ತಾದ ಹೆಸರಾಂತ ಹಿಂದುಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್‌ರ ಶಿಷ್ಯರಾದ ಪಂಡಿತ್ ಆಶಿಶ್ ಚಕ್ರವರ್ತಿ ಹಾಗೂ ನಿರಂಜನ ಬೋಸ್ ನೇತೃತ್ವದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.