ETV Bharat / state

ಕಾರ ಹುಣ್ಣಿಮೆ ವಿಶೇಷ... ಮಾರುಕಟ್ಟೆಯಲ್ಲಿ ರೈತರಿಂದ ಖರೀದಿ ಜೋರು

author img

By

Published : Jun 17, 2019, 10:41 PM IST

ರಾಯಚೂರು ಜಿಲ್ಲೆಯಲ್ಲಿ ಒಂದೆಡೆ ಬರ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ್ರು ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲೇಬೇಕೆಂಬ ಅನಿವಾರ್ಯತೆ. ಬೆಲೆ ಹೆಚ್ಚಾದರೂ ಕಾರ ಹುಣ್ಣಿಮೆ ಪ್ರಯುಕ್ತ ಜಾನುವಾರುಗಳಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಿ ವರ್ಷ ಪೂರ್ತಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಎತ್ತುಗಳನ್ನು ಸಿಂಗಾರ ಮಾಡಿ ಪೂಜೆ ಸಲ್ಲಿಸಿದರು.

ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಜನ

ರಾಯಚೂರು: ಈಗಾಗಲೇ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲು ಶುರುವಾಗಿದೆ. ಇಂದು ಕಾರ ಹುಣ್ಣಿಮೆಯಾದ ಪ್ರಯುಕ್ತ ರೈತರು ತಮ್ಮ ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸ್ಥಳೀಯ ಮಾರುಕಟ್ಟೆಗೆ ಮುಗಿಬಿದ್ದ ದೃಶ್ಯ ಕಂಡುಬಂತು.

ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಜನ

ನಗರದ ಮಾರುಕಟ್ಟೆಯಲ್ಲಿ ನಿನ್ನೆಯಿಂದ ರೈತರು ತಮ್ಮ ಜಾನುವಾರುಗಳಿಗಾಗಿ ದಾಂಡ, ಮಗಡ, ಕೊಮ್ಮೆಣಸು, ಗೆಜ್ಜೆಸರ, ಗಂಟೆ, ಸರಪಳಿ, ಜೂಲಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಿಂದ ಮಳೆಯ ಕೊರತೆ ಉಂಟಾಗಿದ್ದು, ತೀವ್ರ ಬರ ಆವರಿಸಿತ್ತು. ಈ ವರ್ಷವೂ ಸಹ ಮುಂಗಾರು ಬಾರದೇ ರೈತರನ್ನು ಚಿಂತೆಗೀಡು ಮಾಡಿದ್ದು, ಬರದ ನಡುವೆಯೂ ಒಂದಿಷ್ಟು ಚೌಕಾಸಿ ಮಾಡಿ ಕಾರ ಹುಣ್ಣಿಮೆ ಆಚರಿಸಿದ್ದಾರೆ.

ಒಂದೆಡೆ ಬರ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ್ರು ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲೇ ಬೇಕೆಂಬ ಅನಿವಾರ್ಯತೆಯಿಂದ ಬೆಲೆ ಹೆಚ್ಚಾದರೂ ಸಹ ವಸ್ತುಗಳನ್ನು ಖರೀದಿಸಿ ಹೊಲಗಳಲ್ಲಿ ವರ್ಷ ಪೂರ್ತಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಎತ್ತುಗಳನ್ನು ಸಿಂಗಾರ ಮಾಡಿ ಪೂಜೆ ಸಲ್ಲಿಸಿದ್ದಾರೆ.

ರಾಯಚೂರು: ಈಗಾಗಲೇ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಲು ಶುರುವಾಗಿದೆ. ಇಂದು ಕಾರ ಹುಣ್ಣಿಮೆಯಾದ ಪ್ರಯುಕ್ತ ರೈತರು ತಮ್ಮ ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಸ್ಥಳೀಯ ಮಾರುಕಟ್ಟೆಗೆ ಮುಗಿಬಿದ್ದ ದೃಶ್ಯ ಕಂಡುಬಂತು.

ಜಾನುವಾರುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಜನ

ನಗರದ ಮಾರುಕಟ್ಟೆಯಲ್ಲಿ ನಿನ್ನೆಯಿಂದ ರೈತರು ತಮ್ಮ ಜಾನುವಾರುಗಳಿಗಾಗಿ ದಾಂಡ, ಮಗಡ, ಕೊಮ್ಮೆಣಸು, ಗೆಜ್ಜೆಸರ, ಗಂಟೆ, ಸರಪಳಿ, ಜೂಲಗಳನ್ನು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಿಂದ ಮಳೆಯ ಕೊರತೆ ಉಂಟಾಗಿದ್ದು, ತೀವ್ರ ಬರ ಆವರಿಸಿತ್ತು. ಈ ವರ್ಷವೂ ಸಹ ಮುಂಗಾರು ಬಾರದೇ ರೈತರನ್ನು ಚಿಂತೆಗೀಡು ಮಾಡಿದ್ದು, ಬರದ ನಡುವೆಯೂ ಒಂದಿಷ್ಟು ಚೌಕಾಸಿ ಮಾಡಿ ಕಾರ ಹುಣ್ಣಿಮೆ ಆಚರಿಸಿದ್ದಾರೆ.

ಒಂದೆಡೆ ಬರ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ್ರು ಸಾಂಪ್ರದಾಯಿಕ ಹಬ್ಬ ಆಚರಣೆ ಮಾಡಲೇ ಬೇಕೆಂಬ ಅನಿವಾರ್ಯತೆಯಿಂದ ಬೆಲೆ ಹೆಚ್ಚಾದರೂ ಸಹ ವಸ್ತುಗಳನ್ನು ಖರೀದಿಸಿ ಹೊಲಗಳಲ್ಲಿ ವರ್ಷ ಪೂರ್ತಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಎತ್ತುಗಳನ್ನು ಸಿಂಗಾರ ಮಾಡಿ ಪೂಜೆ ಸಲ್ಲಿಸಿದ್ದಾರೆ.

Intro:ನಮ್ಮ ದೇಶ ಬಹು ಸಂಸ್ಕೃತಿ, ವೈದ್ಯಮಯ ಸಾಂಪ್ರದಾಯಿಕ ಉಳ್ಳ ದೇಶ ಜೊತೆಗೆ ಯಾವುದೇ ಹಬ್ಬ ಹರಿದಿನ ವಿರಲಿ ಅದರ ಅಚಾರ ವಿಚಾರ ವಿಭಿನ್ನ ಹಾಗೂ ಒಂದು ಕಾರಣ,ಹಿನ್ನೆಲೆಯೂ ಒಳಗೊಂಡಿರುತ್ತದೆ.
ಮಳೆಗಾಲದಲ್ಲಿ ಮುಂಗಾರು ಮಳೆ ಬರುವ ಸಮಯದಲ್ಲಿ ಕಾರ ಹುಣ್ಣಿಮೆಯ ಸಂಭ್ರಮ.ಕೃಷಿ ಚಟುವಟಿಕೆಯ ತಯಾರಿ ನಡೆಸುವ ಸಂದರ್ಭವೂ ಹೌದು.ಇಂದು ಕಾರ ಹುಣ್ಣಿಮೆಯ ಅಂಗವಾಗಿ ಕರಿ ಹರಿಯುವ ಆಚರಣೆ ಮಾಡುವ ಸಲುವಾಗಿ ಇಂದು ಸ್ಥಳೀಯ ಮಾರುಕಟ್ಟೆಯಲ್ಲಿ ರೈತರು ತಮ್ಮ ಜಾನುವಾರುಗಳಿಗೆ ( ಎತ್ತುಗಳಿಗೆ) ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಮುಂದಾದರು.



Body:ನಗರದ ಮಾರುಕಟ್ಟೆಯಲ್ಲಿ ನಿನ್ನೆಯಿಂದ ರೈತರು ತಮ್ಮ ಜಾನುವಾರುಗಳಿಗಾಗಿ ದಾಂಡ,ಮಗಡ, ಕೊಮ್ಮೆಣಸು,ಗೆಜ್ಜೆಸರ,ಗಂಟೆ,ಸರಪಳಿ,ಜೂಲಾಗಳ ಖರೀದಿಸುವ ದೃಷ್ಯಗಳು ಕಂಡು ಬಂದಿತು.
ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಿಂದ ಮಳೆಯ ಕೊರತೆಯಿಂದ ತೀವ್ರ ಬರ ಆವರಿಸಿದ್ದು ಈ ವರ್ಷವೂ ಮುಂಗಾರು ಬಾರದೇ ರೈತರಿಗೆ ಚಿಂತೆಗೀಡು ಮಾಡಿದ್ದು ಬರದ ನಡುವೆಯೂ ಒಂದಿಷ್ಟು ಚೌಕಾಸಿ ಮಾಡಿ ಕಾರ ಹುಣ್ಣಿಮೆಯ ಆಚರಣೆ ಮುಂದಾದರು.
ಒಂದೆಡೆ ಬರ ಮತ್ತೊಂದೆಡೆ ಅಗತ್ಯವವಸ್ತುಗಳ ಬೆಲೆ ಏರಿಕೆ ಅದ್ರು ಸಾಂಪ್ರದಾಯಿಕ ಹಬ್ಬ ಆಚರಣೆಗೆ ಮಾಡಲೇಬೇಕೆಂಬ ಅನಿವಾರ್ಯ ಬೆಲೆ ಹೆಚ್ಚಾದರೂ ವಸ್ತುಗಳ ಖರೀದಿಸುತಿದ್ದಾರೆ.
ಕೈಯಲ್ಲಿ ಹಣ ವಿಲ್ಲ ಅದ್ರೂ ಸಾಲ ಸೋಲು ಮಾಡಿ ತಮ್ಮ ಹೊಲಗಳಲ್ಲಿ ವರ್ಷಪೂರ್ತಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಬಸವಣ್ಣ ( ಎತ್ತುಗಳು) ಸಿಂಗಾರ ಮಾಡಿ ಸಾಂಪ್ರದಾಯಿಕ ವಾಗಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ.



Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.