ETV Bharat / state

ವರದಕ್ಷಿಣೆ ಕಿರುಕುಳ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ - ವರದಕ್ಷಿಣೆ ಕಿರುಕುಳ

ದೇಶದಲ್ಲಿ ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗಾಗಿ ಘೋಷಿತವಾಗಿದೆ. ಆದರೆ, ರಾಯಚೂರಿನಲ್ಲಿ ಇನ್ನು ಈ ಪಿಡುಗು ಚಾಲ್ತಿಯಲ್ಲಿದ್ದು, ಇದರಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಗಂಡನ ವಿರುದ್ಧ ದೂರು ನೀಡಲು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

Raichur
ರಾಯಚೂರು ಮಹಿಳಾ ಪೊಲೀಸ್ ಠಾಣೆ
author img

By

Published : Mar 18, 2020, 6:20 PM IST

ರಾಯಚೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿಯು ದೂರು ನೀಡಲು ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಮರ್ಚೇಟಾಳ್ ಗ್ರಾಮದ ತಾಯಪ್ಪ, ತನ್ನ ಪತ್ನಿ ತಿಮಲಮ್ಮ ಮೇಲೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಆಕೆ ಗಂಡನ ವಿರುದ್ಧ ದೂರು ನೀಡಲು ತನ್ನ ಪೋಷಕರೊಂದಿಗೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ರಾಯಚೂರು ಮಹಿಳಾ ಪೊಲೀಸ್ ಠಾಣೆ

ಕಳೆದ 2019 ಜುಲೈ ತಿಂಗಳಲ್ಲಿ ಬೊಳಮಾನದೊಡ್ಡಿ ಗ್ರಾಮದ ತಿಮಲಮ್ಮ, ಮರ್ಚೇಟಾಳ್ ಗ್ರಾಮದ ತಾಯಪ್ಪನನ್ನು ವಿವಾಹವಾಗಿದ್ದಳು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬಂಗಾರ ಹಾಗೂ ಬಟ್ಟೆ-ಬರೆ ಎಲ್ಲವನ್ನೂ ನೀಡಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಗಲಾಟೆ ನಡೆಸಿ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಕಿರುಕುಳ ದೂರು ದಾಖಲಿಸಿಕೊಳ್ಳಲಾಗಿದೆ.

ರಾಯಚೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿಯು ದೂರು ನೀಡಲು ಪೊಲೀಸ್​ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಮರ್ಚೇಟಾಳ್ ಗ್ರಾಮದ ತಾಯಪ್ಪ, ತನ್ನ ಪತ್ನಿ ತಿಮಲಮ್ಮ ಮೇಲೆ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ಬೇಸತ್ತ ಆಕೆ ಗಂಡನ ವಿರುದ್ಧ ದೂರು ನೀಡಲು ತನ್ನ ಪೋಷಕರೊಂದಿಗೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ರಾಯಚೂರು ಮಹಿಳಾ ಪೊಲೀಸ್ ಠಾಣೆ

ಕಳೆದ 2019 ಜುಲೈ ತಿಂಗಳಲ್ಲಿ ಬೊಳಮಾನದೊಡ್ಡಿ ಗ್ರಾಮದ ತಿಮಲಮ್ಮ, ಮರ್ಚೇಟಾಳ್ ಗ್ರಾಮದ ತಾಯಪ್ಪನನ್ನು ವಿವಾಹವಾಗಿದ್ದಳು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬಂಗಾರ ಹಾಗೂ ಬಟ್ಟೆ-ಬರೆ ಎಲ್ಲವನ್ನೂ ನೀಡಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಗಲಾಟೆ ನಡೆಸಿ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಕಿರುಕುಳ ದೂರು ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.