ETV Bharat / state

ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆ

ಮಾನ್ವಿ ಪಟ್ಟಣದ ಹೊರವಲಯದ ಮಲ್ಲಿಕಾರ್ಜುನ ಗುಡ್ಡದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯ ಶವ ಪತ್ತೆಯಾಗಿದೆ. ಪೊಲೀಸ್ ತನಿಖೆ ನಂತರ ವ್ಯಕ್ತಿ ಹೇಗೆ ಸತ್ತ ಎಂಬ ಕಾರಣ ತಿಳಿದು ಬರಲಿದೆ.

author img

By

Published : Mar 13, 2020, 12:58 PM IST

dead_body
dead_body

ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದ ಮಲ್ಲಿಕಾರ್ಜುನ ಗುಡ್ಡದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಅಮರೇಶ್ವರ ಕ್ಯಾಂಪ್‌ನ ನಿವಾಸಿ ಯಲ್ಲಪ್ಪ(33) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.

ಅನುಮಾನಾಸ್ಪದವಾಗಿ ಪತ್ತೆಯಾದ ಮೃತದೇಹ

ಮೃತ ವ್ಯಕ್ತಿ ಸ್ಥಳದಲ್ಲಿ ಮದ್ಯಪಾನ, ಊಟ ಮಾಡಿದ ಪತ್ರೋಳಿ ಬಿದ್ದಿದೆ. ಈ ಸ್ಥಳಕ್ಕೆ ತೆರಳಲು ಒಬ್ಬಂಟಿಯಾಗಿ ತೆರಳಿದ್ದನೋ ಅಥವಾ ಸ್ನೇಹಿತರೊಡನೆ ತೆರಳಿದ್ದಾನೋ ಎಂಬ ಮಾಹಿತಿ ತಿಳಿದು ಬಂದಿಲ್ಲ.

ಘಟನೆ ಸಂಬಂಧ ಪೊಲೀಸ್ ತನಿಖೆ ನಂತರ ಕಾರಣ ತಿಳಿದು ಬರಲಿದೆ. ಅಲ್ಲದೇ ಯಲ್ಲಪ್ಪನ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದ ಮಲ್ಲಿಕಾರ್ಜುನ ಗುಡ್ಡದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಅಮರೇಶ್ವರ ಕ್ಯಾಂಪ್‌ನ ನಿವಾಸಿ ಯಲ್ಲಪ್ಪ(33) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.

ಅನುಮಾನಾಸ್ಪದವಾಗಿ ಪತ್ತೆಯಾದ ಮೃತದೇಹ

ಮೃತ ವ್ಯಕ್ತಿ ಸ್ಥಳದಲ್ಲಿ ಮದ್ಯಪಾನ, ಊಟ ಮಾಡಿದ ಪತ್ರೋಳಿ ಬಿದ್ದಿದೆ. ಈ ಸ್ಥಳಕ್ಕೆ ತೆರಳಲು ಒಬ್ಬಂಟಿಯಾಗಿ ತೆರಳಿದ್ದನೋ ಅಥವಾ ಸ್ನೇಹಿತರೊಡನೆ ತೆರಳಿದ್ದಾನೋ ಎಂಬ ಮಾಹಿತಿ ತಿಳಿದು ಬಂದಿಲ್ಲ.

ಘಟನೆ ಸಂಬಂಧ ಪೊಲೀಸ್ ತನಿಖೆ ನಂತರ ಕಾರಣ ತಿಳಿದು ಬರಲಿದೆ. ಅಲ್ಲದೇ ಯಲ್ಲಪ್ಪನ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.