ETV Bharat / state

ರಾಯಚೂರಲ್ಲಿ ಮೈತ್ರಿ ಸಮಾವೇಶ, ಯುವರಾಜನಿಗೆ ಕಾದು ಸುಸ್ತಾದ ಜನ - undefined

ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಜಿಲ್ಲೆಯಲ್ಲಿ ಬೃಹತ್‌ ಪ್ರಚಾರ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ತಡವಾಗಿ ಆಗಮಿಸಿದ ಪರಿಣಾಮ ಜನರು ಕಾದು ಕಾದು ಸುಸ್ತಾದ ದೃಶ್ಯಾವಳಿಗಳು ಸಾಮಾನ್ಯವಾಗಿದ್ದವು.

ನಾಯಕರನ್ನು ಮೆರವಣಿಗೆ ಮಾಡಿದ ಜನರು
author img

By

Published : Apr 19, 2019, 10:33 PM IST

ರಾಯಚೂರು: ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಮತಯಾಚನೆಗೆ ಬೃಹತ್ ಪ್ರಚಾರ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ​ ತಡವಾಗಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಗಾ ಭಾಷಣ ಕೇಳಲು ದೂರದೂರುಗಳಿಂದ ಆಗಮಿಸಿದ ಜನರು ಯುವರಾಜನಿಗಾಗಿ ಕಾದು ಸುಸ್ತಾದರು.

ನಾಯಕರನ್ನು ಮೆರವಣಿಗೆ ಮಾಡಿದ ಜನರು

ಪ್ರಚಾರ ಸಭೆಗೆ ಪೂರ್ವನಿಗದಿಯಂತೆ ರಾಹುಲ್​ ಗಾಂಧಿ ಮಧ್ಯಾಹ್ನ 3ಕ್ಕೆ ಆಗಮಿಸಬೇಕಿತ್ತು. ಆದರೆ ಅವರು ವೇದಿಕೆಗೆ ಬಂದಾಗ ಸಮಯ 4 ಗಂಟೆ ಆಗಿತ್ತು. ರಾಯಚೂರಿನಲ್ಲಿ ಸದ್ಯ ತಾಪಮಾನ 40 ಡಿಗ್ರಿ ಮೀರುತ್ತಿದೆ. ಹೀಗಾಗಿ ಜನರು ಬಿಸಿಲಿನ ಧಗೆಗೆ ಕಾದು ಕಾದು ಸುಸ್ತಾಗಿ ನೀರಿಗಾಗಿ ಪರಿತಪಿಸಿದರು.

ಇದೇ ಸಮಯವನ್ನು ಲಾಭಕ್ಕೆ ಬಳಸಿಕೊಂಡ ಹೋಟೆಲ್ ಮಾಲೀಕರು ಹೆಚ್ಚಿನ ದರದಲ್ಲಿ ಒಗ್ಗರಣೆ,, ಮಿರ್ಚಿ ಮಾರಾಟ ಮಾಡಿ ಜೇಬು ತುಂಬಿಸಿಕೊಂಡರು. ಸಮಾವೇಶದ ಅಂಗವಾಗಿ ಜನರಿಗೆ ಮಜ್ಜಿಗೆ, ನೀರು ವಿತರಿಸಲಾಯಿತಾದರೂ, ಅನೇಕರಿಗೆ ಸಿಗದೆ ಖಾಸಗಿ ಹೋಟೆಲ್​ಗಳ ಮೊರೆ ಹೋಗುತ್ತಿದ್ದರು.

ರಾಯಚೂರು ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ರಾಯಚೂರು ನಗರವೂ ಒಂದು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಹೈದ್ರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಜನರನ್ನು ನಿಂಯತ್ರಿಸಲು ಪೋಲೀಸರು ಹರಸಾಹಸಪಟ್ಟರು.

ರಾಯಚೂರು: ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಮತಯಾಚನೆಗೆ ಬೃಹತ್ ಪ್ರಚಾರ ಸಮಾವೇಶ ಏರ್ಪಡಿಸಲಾಗಿತ್ತು. ಈ ಸಮಾವೇಶಕ್ಕೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ​ ತಡವಾಗಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಗಾ ಭಾಷಣ ಕೇಳಲು ದೂರದೂರುಗಳಿಂದ ಆಗಮಿಸಿದ ಜನರು ಯುವರಾಜನಿಗಾಗಿ ಕಾದು ಸುಸ್ತಾದರು.

ನಾಯಕರನ್ನು ಮೆರವಣಿಗೆ ಮಾಡಿದ ಜನರು

ಪ್ರಚಾರ ಸಭೆಗೆ ಪೂರ್ವನಿಗದಿಯಂತೆ ರಾಹುಲ್​ ಗಾಂಧಿ ಮಧ್ಯಾಹ್ನ 3ಕ್ಕೆ ಆಗಮಿಸಬೇಕಿತ್ತು. ಆದರೆ ಅವರು ವೇದಿಕೆಗೆ ಬಂದಾಗ ಸಮಯ 4 ಗಂಟೆ ಆಗಿತ್ತು. ರಾಯಚೂರಿನಲ್ಲಿ ಸದ್ಯ ತಾಪಮಾನ 40 ಡಿಗ್ರಿ ಮೀರುತ್ತಿದೆ. ಹೀಗಾಗಿ ಜನರು ಬಿಸಿಲಿನ ಧಗೆಗೆ ಕಾದು ಕಾದು ಸುಸ್ತಾಗಿ ನೀರಿಗಾಗಿ ಪರಿತಪಿಸಿದರು.

ಇದೇ ಸಮಯವನ್ನು ಲಾಭಕ್ಕೆ ಬಳಸಿಕೊಂಡ ಹೋಟೆಲ್ ಮಾಲೀಕರು ಹೆಚ್ಚಿನ ದರದಲ್ಲಿ ಒಗ್ಗರಣೆ,, ಮಿರ್ಚಿ ಮಾರಾಟ ಮಾಡಿ ಜೇಬು ತುಂಬಿಸಿಕೊಂಡರು. ಸಮಾವೇಶದ ಅಂಗವಾಗಿ ಜನರಿಗೆ ಮಜ್ಜಿಗೆ, ನೀರು ವಿತರಿಸಲಾಯಿತಾದರೂ, ಅನೇಕರಿಗೆ ಸಿಗದೆ ಖಾಸಗಿ ಹೋಟೆಲ್​ಗಳ ಮೊರೆ ಹೋಗುತ್ತಿದ್ದರು.

ರಾಯಚೂರು ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ರಾಯಚೂರು ನಗರವೂ ಒಂದು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಹೈದ್ರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಜನರನ್ನು ನಿಂಯತ್ರಿಸಲು ಪೋಲೀಸರು ಹರಸಾಹಸಪಟ್ಟರು.

Intro:ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಪರ ಪ್ರಚಾರ ಮಾಡಲು ಇಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಮಾವೇಶಕ್ಕೆ ಎರಡು ಪಕ್ಷದ ಕಾರ್ಯಕರ್ತರು,ಮಹಿಳೆಯರು,ಯುವಕರು ಸೇರಿ ಜನಸಾಗರವೇ ಹರಿದುಬಂದಿತು.


Body:ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಹೈದ್ರಾಬಾದ್ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.
ಜಿಲ್ಲಾ ಕ್ರೀಡಾಂಗಣ ದ ಸುತ್ತಲೂ ಎತ್ತ ನೋಡಿದರು ಜನವೂ ಜನ ಕಾಣುತ್ತಿತ್ತು.
ರಾಯಚೂರು ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರ ಬರಲಿದ್ದು ಇದರಲ್ಲಿ ರಾಯಚೂರು ನಗರ ಒಂದಾಗಿದ್ದು ಇಲ್ಲಿ ಅಲ್ಪಸಂಖ್ಯಾತರೇ ಹೆಚ್ಷು ವಾಸವಾಗಿದ್ದು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಮಾವೇಶದ ಅಂಗವಾಗಿ ಮೈತ್ರಿ ಮುಖಂಡರು ಹಾಗೂ ಎರಡು ಪಕ್ಷದ ನಗರದ ನಾಯಕರಾದ ಸಾಜಿದ್ ಸಮೀರ್, ಶೇಖ್ ಶಾಲಂ,ಜೆಡಿಎಸ್ನ ಹಿರಿಯ ನಾಯಕ ಯುಸೂಫ್ ಖಾನ್ ಮತ್ತಿತರೆ ಅಲ್ಪಸಂಖ್ಯಾತರ ನಾಯಕರನ್ನು ಮೆರವಣಿಗೆ ಮಾಡಿದರು ಅವರ ಬೆಂಬಲಿಗರು.
ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಪೋಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.


Conclusion:ಇದೇ ಸಂದರ್ಭದಲ್ಲಿ ಮೋದಿ ವಿರುದ್ಧ ಚೌಕಿದಾರ್ ಚೋರ್ ಎಂಬ ಘೋಷಣೆ ಹಾಕಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.