ETV Bharat / state

ಸುಮಲತಾಗೆ ಸಿಎಂ ನಾನಾ ತೊಂದರೆ ನೀಡುತ್ತಿದ್ದಾರೆ, ಅವಳು ಗಟ್ಟಿಗಿತ್ತಿ ಅದಕ್ಕೆ ತಡೆದುಕೊಂಡಿದ್ದಾಳೆ: ಜಗದೀಶ್ ಶೆಟ್ಟರ್ - undefined

ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರಿಗೆ ಮಂಡ್ಯದಲ್ಲಿ ಸಿಎಂ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಆರೋಪಿಸಿದ್ದಾರೆ. ಅಲ್ಲದೆ, ಸುಮಲತಾ ಆದ್ರೆ ಅವರು ಗಟ್ಟಿಗಿತ್ತಿ ಅದೆಲ್ಲವನ್ನು ಎದುರಿಸಿ ನಿಂತಿದ್ದಾರೆ ಎಂದರು. ಮೋದಿ ಅಲೆಯಿಂದಾಗಿ ರಾಜ್ಯದಲ್ಲಿ 24 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಮೇಲೆ ಎಲ್ಲಾ‌ ಕಡೆಯೂ ಬಿಜೆಪಿ ಸುನಾಮಿ ಉಂಟಾಗಿದೆ
author img

By

Published : Apr 10, 2019, 10:04 AM IST

ರಾಯಚೂರು : ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ನಡೆಸಿದ್ರು.

ಮೋದಿ ಭೇಟಿಯಿಂದ ರಾಜ್ಯಾದ್ಯಂತ ಬಿಜೆಪಿ ಸುನಾಮಿ ಉಂಟಾಗಿದೆ ಎಂದ ಶೆಟ್ಟರ್​

ಆರಂಭದಲ್ಲಿ ಲಿಂಗಸೂಗೂರು ಪಟ್ಟಣದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಬಳಿಕ ದೇವದುರ್ಗ ತಾಲೂಕಿನ ಮಿಯ್ಯಾಪುರ ಕ್ರಾಸ್ ಗ್ರಾಮ ಬಳಿ ಬೂತ್ ಮಟ್ಟದ ಕಾರ್ಯಕರ್ತರ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. ದೇಶದ ಒಳಿತಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ‌ ಪ್ರಧಾನಿ ಆಗುವುದಕ್ಕೆ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್​ಗೆ ಮತ ನೀಡುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಮೇಲೆ ಎಲ್ಲಾ‌ ಕಡೆಯೂ ಬಿಜೆಪಿ ಸುನಾಮಿ ಉಂಟಾಗಿದೆ. ಈ ಮೊದಲು ನಾವು ಮೊದಲು 22 ಸ್ಥಾನ ಪಡೆಯುತ್ತೇವೆ ಎಂದುಕೊಂಡಿದ್ದೆವು. ಆದ್ರೆ ಈಗ 24 ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ ಅನ್ನೋ ವಿಶ್ವಾಸ ಮೂಡಿದೆ ಎಂದರು.

ಇನ್ನು ಕಾಂಗ್ರೆಸ್​​​ನವರು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಕರೆಸಲು ಮುಂದಾಗಿದ್ದಾರೆ. ಮುಂದೊಂದು ದಿನ ಕೊನೆಗೆ ಪ್ರಿಯಾಂಕಾ ಗಾಂಧಿ ಮಕ್ಕಳನ್ನು ಕರೆಸುವ ಸ್ಥಿತಿ ಅವೆರಿಗೆ ಬರುತ್ತದೆ ಎಂದು ಶೆಟ್ಟರ್​ ಗೇಲಿ ಮಾಡಿದ್ರು.

ಮತ್ತೊಂದೆಡೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ಸಿಎಂ ಕುಮಾರಸ್ವಾಮಿ ನಾನಾ ರೀತಿಯ ತೊಂದರೆ ಕೊಡುತ್ತಿದ್ದಾರೆ ಎಂದು ಶೆಟ್ಟರ್​ ದೂರಿದರು. ಅಲ್ಲದೆ ಸುಮಲತಾ ಗಟ್ಟಿಗಿತ್ತಿಯಾಗಿದ್ದರಿಂದ ಎಲ್ಲವನ್ನು ಎದುರಿಸಿ ನಿಂತಿದ್ದಾರೆ. ಚುನಾವಣೆ ನಂತರ ಸರ್ಕಾರ ಬದಲಾವಣೆ ಆಗುತ್ತೆ, ಕಾದು ನೋಡಿ ಎಂದರು.

ರಾಯಚೂರು : ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ನಡೆಸಿದ್ರು.

ಮೋದಿ ಭೇಟಿಯಿಂದ ರಾಜ್ಯಾದ್ಯಂತ ಬಿಜೆಪಿ ಸುನಾಮಿ ಉಂಟಾಗಿದೆ ಎಂದ ಶೆಟ್ಟರ್​

ಆರಂಭದಲ್ಲಿ ಲಿಂಗಸೂಗೂರು ಪಟ್ಟಣದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಬಳಿಕ ದೇವದುರ್ಗ ತಾಲೂಕಿನ ಮಿಯ್ಯಾಪುರ ಕ್ರಾಸ್ ಗ್ರಾಮ ಬಳಿ ಬೂತ್ ಮಟ್ಟದ ಕಾರ್ಯಕರ್ತರ ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. ದೇಶದ ಒಳಿತಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ‌ ಪ್ರಧಾನಿ ಆಗುವುದಕ್ಕೆ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್​ಗೆ ಮತ ನೀಡುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಮೇಲೆ ಎಲ್ಲಾ‌ ಕಡೆಯೂ ಬಿಜೆಪಿ ಸುನಾಮಿ ಉಂಟಾಗಿದೆ. ಈ ಮೊದಲು ನಾವು ಮೊದಲು 22 ಸ್ಥಾನ ಪಡೆಯುತ್ತೇವೆ ಎಂದುಕೊಂಡಿದ್ದೆವು. ಆದ್ರೆ ಈಗ 24 ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ ಅನ್ನೋ ವಿಶ್ವಾಸ ಮೂಡಿದೆ ಎಂದರು.

ಇನ್ನು ಕಾಂಗ್ರೆಸ್​​​ನವರು ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಕರೆಸಲು ಮುಂದಾಗಿದ್ದಾರೆ. ಮುಂದೊಂದು ದಿನ ಕೊನೆಗೆ ಪ್ರಿಯಾಂಕಾ ಗಾಂಧಿ ಮಕ್ಕಳನ್ನು ಕರೆಸುವ ಸ್ಥಿತಿ ಅವೆರಿಗೆ ಬರುತ್ತದೆ ಎಂದು ಶೆಟ್ಟರ್​ ಗೇಲಿ ಮಾಡಿದ್ರು.

ಮತ್ತೊಂದೆಡೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ಸಿಎಂ ಕುಮಾರಸ್ವಾಮಿ ನಾನಾ ರೀತಿಯ ತೊಂದರೆ ಕೊಡುತ್ತಿದ್ದಾರೆ ಎಂದು ಶೆಟ್ಟರ್​ ದೂರಿದರು. ಅಲ್ಲದೆ ಸುಮಲತಾ ಗಟ್ಟಿಗಿತ್ತಿಯಾಗಿದ್ದರಿಂದ ಎಲ್ಲವನ್ನು ಎದುರಿಸಿ ನಿಂತಿದ್ದಾರೆ. ಚುನಾವಣೆ ನಂತರ ಸರ್ಕಾರ ಬದಲಾವಣೆ ಆಗುತ್ತೆ, ಕಾದು ನೋಡಿ ಎಂದರು.

Intro:ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರ ನಡೆಸಿದ್ರು.Body:ಆರಂಭದಲ್ಲಿ ಲಿಂಗಸೂಗೂರು ಪಟ್ಟಣದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ದೇವದುರ್ಗ ತಾಲೂಕಿನ ಮಿಯ್ಯಾಪುರ ಕ್ರಾಸ್ ಗ್ರಾಮ ಬಳಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮೈತ್ರಿ ಸರಕಾರ ವಿರುದ್ದ ಹರಿಹಾಯ್ದರು. ದೇಶದ ಒಳಿತಿಗಾಗಿ ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ‌ ಪ್ರಧಾನಿ ಆಗುವುದಕ್ಕೆ ರಾಯಚೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲುವಿಸುವುದಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದ್ರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಮಾತನಾಡಿ ,ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಬಂದ ಮೇಲ್ಮೆ ಎಲ್ಲಾ‌ ಕಡೆಯೂ ಬಿಜೆಪಿ ಸುನಾಮಿ ಉಂಟಾಗಿದೆ. ಈ ಮೊದಲು ನಾವು ಮೊದಲು ೨೨ ಸ್ಥಾನ ಪಡೆಯುತ್ತೇವೆ ಎಂದುಕೊಂಡಿದ್ದೇವು . ಈಗ ೨೪ ಕ್ಕೂ ಅಧಿಕ ಸ್ಥಾನ ಪಡೆಯುತ್ತೇವೆ. ಮೋದಿಯ ನಂತರ ರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ಕರೆಯಿಸಲು  ಕಾಂಗ್ರೆಸ್ಸಿಗೆ ಕೊನೆಗೆ ಪ್ರಿಯಾಂಕ ಗಾಂಧಿ ಮಕ್ಕಳನ್ನು ಕರೆಸುವ ಸ್ಥಿತಿ ಬಂದಿದೆ.
ಮಂಡ್ಯದಲ್ಲಿ ಸುಮಲತಾರಿಗೆ ಸಿಎಂ ನಾನಾ ರೀತಿಯ ತೊಂದರೆ ನೀಡುತ್ತಿದ್ದಾರೆ. ಅವರು ಗಟ್ಟಿಯಾಗಿದ್ದರಿಂದ ತಡೆದುಕೊಂಡಿದ್ದಾರೆ. ಚುನಾವಣೆ ನಂತರ ಸರಕಾರ ಬದಲಾವಣೆ ಕಾದು ನೋಡಿ ಎಂದು ಹೇಳಿದ್ರು.Conclusion:ಬೈಟ್.೧: ಜಗದೀಶ್ ಶೆಟ್ಟರ್, ಮಾಜಿ ಸಿಎಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.