ರಾಯಚೂರು: ರಾಯಚೂರು ಜಿಲ್ಲೆಯ ಪಾರ್ವತಮ್ಮ ಎಂಬ ಅಜ್ಜಿ ನೂರು ವರ್ಷಗಳ ಕಾಲ ಬದುಕಿ ಶತಾಯುಷಿಯಾಗಿ ನಿಧನ ಹೊಂದಿದ್ದಾರೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದಾ ಗ್ರಾಮದ ಪಾರ್ವತಮ್ಮ ಕಾಸರೆಡ್ಡಿ(105) ದೈವಾದೀನರಾಗಿದ್ದಾರೆ. ಶತಾಯುಷಿಗೆ ಐದು ಜನ ಹೆಣ್ಣು ಮಕ್ಕಳು, ನಾಲ್ವರು ಪುತ್ರರು, ಮರಿ ಮಕ್ಕಳು, ಮೊಮ್ಮಕಳು ಸೇರಿದಂತೆ ಅಪಾರ ಬಂಧು ಬಳಗವಿದ್ದು, ಅವರೆಲ್ಲರನ್ನು ಅಗಲಿದ್ದಾರೆ. ೧೦೦ ವರ್ಷಕ್ಕೂ ಹೆಚ್ಚು ಕಾಲ ಜೀವಿಸಿದ್ದು, ಯಾವುದೇ ಅನಾರೋಗ್ಯದಿಂದ ಬಳಲದೇ ಸಹಜವಾಗಿಯೇ ನಿಧನರಾಗಿದ್ದಾರೆ.
ಅಜ್ಜಿಯನ್ನ ಕಳೆದುಕೊಂಡ ಕುಟುಂಬಸ್ಥರಲ್ಲಿ ದುಃಖ ಆವರಿಸಿದೆ.