ETV Bharat / state

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವವರು ಮುಸ್ಲಿಂ, ಕ್ರೈಸ್ತ​​ರಿಗೆ ಟಿಕೆಟ್ ಕೊಟ್ಟಿದ್ದಾರೆಯೇ: ಸಿದ್ದರಾಮಯ್ಯ ಪ್ರಶ್ನೆ

author img

By

Published : Apr 28, 2023, 10:27 AM IST

Updated : Apr 28, 2023, 1:49 PM IST

ಮೋದಿ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಒಬ್ಬರೆ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Former CM Siddaramaiah spoke.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ರಾಯಚೂರು: ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಆರ್ ಆರ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ವಾಲ್ಕಾಟ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಸಮಾವೇಶದಲ್ಲಿ ಗುರುವಾರ ರಾತ್ರಿ ಅವರು ಮಾತನಾಡಿದರು. ಬಿಜೆಪಿ ಪಕ್ಷವು ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದೆ. ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂಘ ಪರಿವಾರದ ಮುಖವಾಣಿ ಆರ್ಗನೈಸರ್ ಓದಬೇಕು. ಅಂಬೇಡ್ಕರ್ ಸಂವಿಧಾನದ ಬಗ್ಗೆ ಏನು ಹೇಳಿದ್ದಾರೆ ಅನ್ನುವುದು ಗೊತ್ತಾಗುತ್ತೆ. ಸಾವರ್ಕರ್ ಏನು ಹೇಳಿದ್ರು, ಗೋಲವಾಲಕರ್ ಏನು ಹೇಳಿದರು ಅಂತ ಗೊತ್ತಾಗುತ್ತೆ ಎಂದು ತಿಳಿಸಿದರು.

ಮೋದಿ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಒಬ್ಬರೆ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆಯೇ? ಕಾಂಗ್ರೆಸ್​ನವ್ರು ಮುಸ್ಲಿಂರಿಗೆ ಶೇ.14, ಕ್ರೈಸ್ತ್ ಸಮುದಾಯದವರಿಗೆ ಶೇ.2 ರಷ್ಟು ಟಿಕೆಟ್ ನೀಡಿದ್ದೇವೆ. ದೇಶದ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಂದೇ ಜಾತ್ಯಾತೀತ ಪಕ್ಷ, ಜೆಡಿಎಸ್ ಆ ಕಡೆಗೂ ಇಲ್ಲಾ ಈ ಕಡೆಗೂ ಇಲ್ಲಾ. ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಗೆ ಸಿದ್ಧಾಂತವಿಲ್ಲ, ಬಿಜೆಪಿ ಗೆದ್ದರೆ ಬಿಜೆಪಿ, ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ ಎಂದು ಹರಿಹಾಯ್ದರು.

ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನೂ ತೆಗೆದು ಹಾಕಿ ಬಿಜೆಪಿಯವರು ದ್ವೇಷ ರಾಜಕಾರಣ, ಮತಗಳ ದೃವೀಕರಣ ಮಾಡುತ್ತಿದ್ದಾರೆ. ಸಿಟಿ ರವಿ ನನ್ನನ್ನ ಸಿದ್ದರಾಮುಲ್ಲಾ ಖಾನ್ ಅಂತ ಕರಿತಾರೆ, ಅವರ ಊರಲ್ಲಿ ಅವರಿಗೆ ಲೂಟಿ ರವಿ ಅಂತ ಕರಿತಾರೆ, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಾರೆ ಎಂದು ದೂರಿದರು.

ಅಮಿತ್ ಶಾ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆಂದು ಹೇಳ್ತಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಅದಕ್ಕೆ ಶಾ ಏನು ಹೇಳುತ್ತೀರಾ?, ಬಿಜೆಪಿಯವರ ಆಟಾಟೋಪಗಳನ್ನು ನಂಬಬೇಡಿ. ಬಿಜೆಪಿಯವರು ಜನರ ಆರ್ಶೀವಾದ ಪಡೆದು ಬಂದವರು ಅಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿಕಾರ ಹಿಡಿದಿದ್ದಾರೆ. ಈಗ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ತವರಿನಲ್ಲಿ ಕಾರ್ಯಕರ್ತರ ಮಧ್ಯೆ ಗಲಾಟೆ ವಿಚಾರಕ್ಕೆ ಪ್ರಕ್ರಿಯೆ ನೀಡಿದ ಅವರು, ಯಾರೇ ಪ್ರಚಾರ ಮಾಡಿದರೂ ಅಡ್ಡಿಪಡಿಸಬಾರದು. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆಗಲಿ. ಈ ಬಗ್ಗೆ ಇನ್ನೂ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ವೇಳೆ ಆಜಾನ್ ಹಿನ್ನೆಲೆ ಕೆಲಕಾಲ ಭಾಷಣ ನಿಲ್ಲಿಸಿದರು. ರಾತ್ರಿ 8.15ಕ್ಕೆ ಆಜಾನ್ ಶಬ್ದ ಕೇಳಿದ ತಕ್ಷಣ ಎರಡು ಮೂರು ನಿಮಿಷ ಭಾಷಣ ಸ್ಥಗಿತ ಮಾಡಿದರು. ಬಳಿಕ ಭಾಷಣ ಆರಂಭಿಸಿದರು.

ಇದನ್ನೂಓದಿ:ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

ರಾಯಚೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

ರಾಯಚೂರು: ಸಂಘ ಪರಿವಾರದವರು ಹುಟ್ಟಿದಾಗಿನಿಂದ ಸಮಾಜ ಒಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಆರ್ ಆರ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ವಾಲ್ಕಾಟ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದ ಸಮಾವೇಶದಲ್ಲಿ ಗುರುವಾರ ರಾತ್ರಿ ಅವರು ಮಾತನಾಡಿದರು. ಬಿಜೆಪಿ ಪಕ್ಷವು ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ಮೇಲೆ ಎತ್ತಿಕಟ್ಟುವುದು ಮಾಡುತ್ತಿದೆ. ಬಿಜೆಪಿಯವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂಘ ಪರಿವಾರದ ಮುಖವಾಣಿ ಆರ್ಗನೈಸರ್ ಓದಬೇಕು. ಅಂಬೇಡ್ಕರ್ ಸಂವಿಧಾನದ ಬಗ್ಗೆ ಏನು ಹೇಳಿದ್ದಾರೆ ಅನ್ನುವುದು ಗೊತ್ತಾಗುತ್ತೆ. ಸಾವರ್ಕರ್ ಏನು ಹೇಳಿದ್ರು, ಗೋಲವಾಲಕರ್ ಏನು ಹೇಳಿದರು ಅಂತ ಗೊತ್ತಾಗುತ್ತೆ ಎಂದು ತಿಳಿಸಿದರು.

ಮೋದಿ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಿದ್ದಾರೆ. ಆದರೆ ಒಬ್ಬರೆ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆಯೇ? ಕಾಂಗ್ರೆಸ್​ನವ್ರು ಮುಸ್ಲಿಂರಿಗೆ ಶೇ.14, ಕ್ರೈಸ್ತ್ ಸಮುದಾಯದವರಿಗೆ ಶೇ.2 ರಷ್ಟು ಟಿಕೆಟ್ ನೀಡಿದ್ದೇವೆ. ದೇಶದ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಒಂದೇ ಜಾತ್ಯಾತೀತ ಪಕ್ಷ, ಜೆಡಿಎಸ್ ಆ ಕಡೆಗೂ ಇಲ್ಲಾ ಈ ಕಡೆಗೂ ಇಲ್ಲಾ. ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವವರು. ಅವರಿಗೆ ಸಿದ್ಧಾಂತವಿಲ್ಲ, ಬಿಜೆಪಿ ಗೆದ್ದರೆ ಬಿಜೆಪಿ, ಕಾಂಗ್ರೆಸ್ ಗೆದ್ರೆ ಕಾಂಗ್ರೆಸ್ ಬಾಲ ಹಿಡಿತಾರೆ ಎಂದು ಹರಿಹಾಯ್ದರು.

ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನೂ ತೆಗೆದು ಹಾಕಿ ಬಿಜೆಪಿಯವರು ದ್ವೇಷ ರಾಜಕಾರಣ, ಮತಗಳ ದೃವೀಕರಣ ಮಾಡುತ್ತಿದ್ದಾರೆ. ಸಿಟಿ ರವಿ ನನ್ನನ್ನ ಸಿದ್ದರಾಮುಲ್ಲಾ ಖಾನ್ ಅಂತ ಕರಿತಾರೆ, ಅವರ ಊರಲ್ಲಿ ಅವರಿಗೆ ಲೂಟಿ ರವಿ ಅಂತ ಕರಿತಾರೆ, ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಾರೆ ಎಂದು ದೂರಿದರು.

ಅಮಿತ್ ಶಾ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆಂದು ಹೇಳ್ತಾರೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಅದಕ್ಕೆ ಶಾ ಏನು ಹೇಳುತ್ತೀರಾ?, ಬಿಜೆಪಿಯವರ ಆಟಾಟೋಪಗಳನ್ನು ನಂಬಬೇಡಿ. ಬಿಜೆಪಿಯವರು ಜನರ ಆರ್ಶೀವಾದ ಪಡೆದು ಬಂದವರು ಅಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಧಿಕಾರ ಹಿಡಿದಿದ್ದಾರೆ. ಈಗ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ತವರಿನಲ್ಲಿ ಕಾರ್ಯಕರ್ತರ ಮಧ್ಯೆ ಗಲಾಟೆ ವಿಚಾರಕ್ಕೆ ಪ್ರಕ್ರಿಯೆ ನೀಡಿದ ಅವರು, ಯಾರೇ ಪ್ರಚಾರ ಮಾಡಿದರೂ ಅಡ್ಡಿಪಡಿಸಬಾರದು. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆಗಲಿ. ಈ ಬಗ್ಗೆ ಇನ್ನೂ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಪ್ರತಿಕ್ರಿಯೆ ನೀಡುವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ವೇಳೆ ಆಜಾನ್ ಹಿನ್ನೆಲೆ ಕೆಲಕಾಲ ಭಾಷಣ ನಿಲ್ಲಿಸಿದರು. ರಾತ್ರಿ 8.15ಕ್ಕೆ ಆಜಾನ್ ಶಬ್ದ ಕೇಳಿದ ತಕ್ಷಣ ಎರಡು ಮೂರು ನಿಮಿಷ ಭಾಷಣ ಸ್ಥಗಿತ ಮಾಡಿದರು. ಬಳಿಕ ಭಾಷಣ ಆರಂಭಿಸಿದರು.

ಇದನ್ನೂಓದಿ:ಮಹಿಳೆಯರಿಗೆ ಉಚಿತ್ ಬಸ್ ಸೇವೆ ನೀಡುವ ಕಾಂಗ್ರೆಸ್​​ನ 5ನೇ ಭರವಸೆ ಅವೈಜ್ಞಾನಿಕ: ನಳಿನ್ ಕುಮಾರ್ ಕಟೀಲ್

Last Updated : Apr 28, 2023, 1:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.