ETV Bharat / state

ಯುವ ಸಂಭ್ರಮದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರು - mysore dasara

ಮೈಸೂರಿನಲ್ಲಿ ನಡೆಯುತ್ತಿರುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಬಗೆ ಬಗೆಯ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದರು.

ಯುವಸಂಭ್ರಮ
author img

By

Published : Sep 19, 2019, 9:11 AM IST

ಮೈಸೂರು: ಚಾಮುಂಡೇಶ್ವರಿ, ಮಹಿಷಾಸುರ, ಶ್ರೀಕೃಷ್ಣ, ಆಂಜನೇಯ ವೇಷಧಾರಿಯಾಗಿದ್ದ ಮಕ್ಕಳು ನೃತ್ಯ ಮಾಡಿ ಯುವ ಸಂಭ್ರಮದ ಎರಡನೇ ದಿನ ಮತ್ತಷ್ಟು ರಂಗೇರಿತ್ತು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೆಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಳಂದೂರಿನ ವೈ.ಎಂ.ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ನೆರೆದಿದ್ದವರನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದರು.

ಕೆ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಡುಗಳಿಗೆ ಹೆಜ್ಜೆ ಹಾಕಿ ರಾಷ್ಟ್ರೀಯ ಹಾಗೂ ಧಾರ್ಮಿಕ ಭಾವೈಕ್ಯತೆ ಮೆರೆದರು. ನಂಜನಗೂಡಿನ ಜೆಎಸ್‌ಎಸ್ ಪಿಯುಸಿ ಕಾಲೇಜಿನ ಮಕ್ಕಳು ಮಲೆ ಮಹದೇಶ್ವರನ ಕುರಿತ ಹಾಡಿಗಳಿಗೆ ಹೆಜ್ಜೆ ಹಾಕಿದರು.

ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಮಹಿಷಾಸುರ ಮರ್ದಿನಿ ಹಾಗೂ ವಿಶ್ವವಿಖ್ಯಾತ ದಸರಾ ವೈಭವ ಸಾರುವ ಹಾಡುಗಳಿಗೆ ವಿಶೇಷ ಮಕ್ಕಳು ಮಾಡಿದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆದಿದ್ದು, ಸಭಿಕರಿಂದ ಉತ್ಸಾಹ, ಚಪ್ಪಾಳೆ ಅನುರಣಿಸುತ್ತಿತ್ತು. ವಿವಿಧ ಕಾಲೇಜಿನ 20ಕ್ಕೂ ಹೆಚ್ಚು ತಂಡಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಸಿರಿಯನ್ನು ಬಿತ್ತಿದವು.

ಮೈಸೂರು: ಚಾಮುಂಡೇಶ್ವರಿ, ಮಹಿಷಾಸುರ, ಶ್ರೀಕೃಷ್ಣ, ಆಂಜನೇಯ ವೇಷಧಾರಿಯಾಗಿದ್ದ ಮಕ್ಕಳು ನೃತ್ಯ ಮಾಡಿ ಯುವ ಸಂಭ್ರಮದ ಎರಡನೇ ದಿನ ಮತ್ತಷ್ಟು ರಂಗೇರಿತ್ತು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಹೆಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಳಂದೂರಿನ ವೈ.ಎಂ.ಮಲ್ಲಿಕಾರ್ಜುನ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ನೆರೆದಿದ್ದವರನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದರು.

ಕೆ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಡುಗಳಿಗೆ ಹೆಜ್ಜೆ ಹಾಕಿ ರಾಷ್ಟ್ರೀಯ ಹಾಗೂ ಧಾರ್ಮಿಕ ಭಾವೈಕ್ಯತೆ ಮೆರೆದರು. ನಂಜನಗೂಡಿನ ಜೆಎಸ್‌ಎಸ್ ಪಿಯುಸಿ ಕಾಲೇಜಿನ ಮಕ್ಕಳು ಮಲೆ ಮಹದೇಶ್ವರನ ಕುರಿತ ಹಾಡಿಗಳಿಗೆ ಹೆಜ್ಜೆ ಹಾಕಿದರು.

ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಮಹಿಷಾಸುರ ಮರ್ದಿನಿ ಹಾಗೂ ವಿಶ್ವವಿಖ್ಯಾತ ದಸರಾ ವೈಭವ ಸಾರುವ ಹಾಡುಗಳಿಗೆ ವಿಶೇಷ ಮಕ್ಕಳು ಮಾಡಿದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆದಿದ್ದು, ಸಭಿಕರಿಂದ ಉತ್ಸಾಹ, ಚಪ್ಪಾಳೆ ಅನುರಣಿಸುತ್ತಿತ್ತು. ವಿವಿಧ ಕಾಲೇಜಿನ 20ಕ್ಕೂ ಹೆಚ್ಚು ತಂಡಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಸಿರಿಯನ್ನು ಬಿತ್ತಿದವು.

Intro:ಯುವಸಂಭ್ರಮBody:ಮೈಸೂರು: ಚಾಮುಂಡೇಶ್ವರಿ, ಮಹಿಷಾಸುರ, ಶ್ರೀಕೃಷ್ಣ, ಆಂಜನೇಯ ವೇಷಧಾರಿಯಾಗಿದ್ದ ಮಕ್ಕಳು ನೃತ್ಯ ಮಾಡಿ ಯುವಸಂಭ್ರಮದ ಎರಡನೇ ದಿನ ಮತ್ತಷ್ಟು ರಂಗು ತಂದರು.
ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಬಯಲು ರಂಗಮಂದಿರದಲ್ಲಿ ಬುಧವಾರ ನಡೆದ ಯುವಸಂಭ್ರಮ ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಯಳಂದೂರಿನ ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿ ನೆರೆದಿದ್ದವರೂ ಕುಣಿದು ಕುಪ್ಪಳಿಸುವಂತೆ ಮಾಡಿದರು. ಕೆ.ಆರ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಿಂದೂ, ಮುಸ್ಲಿಂ, ಕ್ರೈಸ್ತರ ಹಾಡುಗಳಿಗೆ ಹೆಜ್ಜೆ ಹಾಕಿ ರಾಷ್ಟ್ರೀಯ ಹಾಗೂ ಧಾರ್ಮಿಕ ಭಾವೈಕ್ಯತೆ ಮೆರೆದರು. ನಂಜನಗೂಡಿನ ಜೆಎಸ್‌ಎಸ್ ಪಿಯುಸಿ ಕಾಲೇಜಿನ ಮಕ್ಕಳು ಮಲೇ ಮಹದೇಶ್ವರನ ಕುರಿತು ಹಾಡಿಗಳಿಗೆ ಕುಣಿದರು.
ಜೆಎಸ್‌ಎಸ್ ಸಹನಾ ಸಮನ್ವಯ ಶಿಕ್ಷಣ ಶಾಲೆಯ ವಿಶೇಷ ಮಕ್ಕಳು ನೃತ್ಯದ ಕೊನೆಯಲ್ಲಿ ಪ್ರೇಕ್ಷಕರು ಮೊಬೈಲ್ ಟಾರ್ಚ್ ಹಾಕಿ ವಿಶೇಷ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದರು.ಬಣ್ಣ ಬಣ್ಣದ ವೇಷಭೂಷಣ ತೊಟ್ಟು ಗುರುಗಳ ಆಣತಿಯಂತೆ ಮಹಿಷಾಸುರ ಮರ್ಧಿನಿ ಹಾಗೂ ವಿಶ್ವವಿಖ್ಯಾತ ದಸರಾ ವೈಭವ ಸಾರುವ ಹಾಡುಗಳಿಗೆ ವಿಶೇಷ ಮಕ್ಕಳು ಮಾಡಿದ ನೃತ್ಯ ಪ್ರೇಕ್ಷಕರ ಕಣ್ಮನಗಳಲ್ಲಿ ಆಗಮಿಸುತ್ತಿದ್ದಂತೆ ಸಭಿಕರಿಂದ ಉತ್ಸಾಹ ಚಪ್ಪಾಳೆ ಅನುರಣಿಸುತ್ತಿತ್ತು. ವಿವಿಧ ಕಾಲೇಜಿನ ೨೦ ತಂಡಗಳು ವೇದಿಕೆಯಲ್ಲಿ ಸಾಂಸ್ಕೃತಿಕ ಸಿರಿಯನ್ನು ಬಿತ್ತಿದರು. Conclusion:ಯುವಸಂಭ್ರಮ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.