ಮೈಸೂರು: ನನ್ನನ್ನು ಸ್ಕ್ರ್ಯಾಪ್ ಮಾಡೋಕೆ ಹೋಗಿ ನಿವ್ಯಾಕೆ ಸ್ಕ್ರ್ಯಾಪ್ ಆಗ್ತಿರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಕೌಂಟರ್ ಕೊಟ್ಟಿದ್ದಾರೆ.
ನನ್ನ ಬಗ್ಗೆ ಮಾತನಾಡಿ ನೀವ್ ಯಾಕ್ ಸ್ಕ್ರ್ಯಾಪ್ ಆಗ್ತಿರಾ: ಹೆಚ್ಡಿಕೆಗೆ ವಿಶ್ವನಾಥ್ ಟಾಂಗ್
ಉಪ ಚುನಾವಣೆಯ ನಿಮಿತ್ತ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಹೆಚ್.ವಿಶ್ವನಾಥ್, ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹೇಳಿಕೆ ನೀಡಿದ್ದ ಸ್ಕ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
![ನನ್ನ ಬಗ್ಗೆ ಮಾತನಾಡಿ ನೀವ್ ಯಾಕ್ ಸ್ಕ್ರ್ಯಾಪ್ ಆಗ್ತಿರಾ: ಹೆಚ್ಡಿಕೆಗೆ ವಿಶ್ವನಾಥ್ ಟಾಂಗ್ H.Vishwanath tong](https://etvbharatimages.akamaized.net/etvbharat/prod-images/768-512-5204455-thumbnail-3x2-vicky.jpg?imwidth=3840)
ಹುಣಸೂರು ತಾಲೂಕಿನ ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರನ್ನು ನೋಡಲು ಹೋದಾಗ ಪರಿಚಯವಿದ್ದ ವ್ಯಕ್ತಿಯೊಬ್ಬರು ಸಿಎಂ ಭೇಟಿ ಮಾಡಿಸಿ ಎಂದಿದ್ದಕ್ಕೆ ನಾನು ಹೇಳಿದ್ದೆ ಅಷ್ಟೆ. ಅದರಿಂದ ನಾನು ಕಮಿಷನ್ ಪಡೆಯುವ ಅಗತ್ಯವಿಲ್ಲ. ಅಂತಹ ಸಣ್ಣ ವ್ಯಕ್ತಿಯಲ್ಲ. ದೊಡ್ಡ ತಪ್ಪು ಇದ್ರೆ ಹೇಳಿ, ಸಣ್ಣ ವ್ಯಕ್ತಿಯಾಗಬೇಡಿ ಎಂದು ಕುಮಾರಸ್ವಾಮಿಗೆ ಕುಟುಕಿದರು.
ನಾನು ಮಂತ್ರಿಯಾಗಬೇಕೆಂದು ಆಸೆ ಪಟ್ಟಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಸಲಹೆಗಾರನಾಗಿ ಇರಬೇಕು ಎಂದುಕೊಂಡಿದ್ದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರು ಸೇರಿ ಹೊರ ಹೋಗುವಂತೆ ಮಾಡಿದರು ಎಂದರು.
ಮೈಸೂರು: ನನ್ನನ್ನು ಸ್ಕ್ರ್ಯಾಪ್ ಮಾಡೋಕೆ ಹೋಗಿ ನಿವ್ಯಾಕೆ ಸ್ಕ್ರ್ಯಾಪ್ ಆಗ್ತಿರಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಕೌಂಟರ್ ಕೊಟ್ಟಿದ್ದಾರೆ.
ಹುಣಸೂರು ತಾಲೂಕಿನ ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರನ್ನು ನೋಡಲು ಹೋದಾಗ ಪರಿಚಯವಿದ್ದ ವ್ಯಕ್ತಿಯೊಬ್ಬರು ಸಿಎಂ ಭೇಟಿ ಮಾಡಿಸಿ ಎಂದಿದ್ದಕ್ಕೆ ನಾನು ಹೇಳಿದ್ದೆ ಅಷ್ಟೆ. ಅದರಿಂದ ನಾನು ಕಮಿಷನ್ ಪಡೆಯುವ ಅಗತ್ಯವಿಲ್ಲ. ಅಂತಹ ಸಣ್ಣ ವ್ಯಕ್ತಿಯಲ್ಲ. ದೊಡ್ಡ ತಪ್ಪು ಇದ್ರೆ ಹೇಳಿ, ಸಣ್ಣ ವ್ಯಕ್ತಿಯಾಗಬೇಡಿ ಎಂದು ಕುಮಾರಸ್ವಾಮಿಗೆ ಕುಟುಕಿದರು.
ನಾನು ಮಂತ್ರಿಯಾಗಬೇಕೆಂದು ಆಸೆ ಪಟ್ಟಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಸಲಹೆಗಾರನಾಗಿ ಇರಬೇಕು ಎಂದುಕೊಂಡಿದ್ದೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರು ಸೇರಿ ಹೊರ ಹೋಗುವಂತೆ ಮಾಡಿದರು ಎಂದರು.
Body:ಎಚ್.ವಿಶ್ವನಾಥ್ ಬೈಟ್
Conclusion:ನನ್ನ ಬಗ್ಗೆ ಮಾತನಾಡಿ ನೀವ್ ಯಾಕ್ ಸ್ಕ್ರ್ಯಾಪ್ ಆಗ್ತಿರಾ ಕುಮಾರಸ್ವಾಮಿ ಅವ್ರೆ: ಎಚ್.ವಿಶ್ವನಾಥ್ ಪ್ರಶ್ನೆ
ಮೈಸೂರು: ನನ್ನ ಬಗ್ಗೆ ಮಾತನಾಡಿ ನೀವ್ ಯಾಕೆ ಸ್ಕ್ರ್ಯಾಪ್ ಆಗ್ತಿರಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ 'ಸ್ಕ್ರ್ಯಾಪ್' ಹೇಳಿಕೆಗೆ ಎಚ್.ವಿಶ್ವನಾಥ್ ಕೌಂಟರ್ ಕೊಟ್ಟಿದ್ದಾರೆ.
ಹುಣಸೂರು ತಾಲ್ಲೂಕಿನ ಕುರುಬರ ಹೊಸಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರನ್ನು ನೋಡಲು ಹೋದಾಗ ,ಪರಿಚಯವಿದ್ದ ವ್ಯಕ್ತಿಯೊಬ್ಬ ಸ್ಕ್ರ್ಯಾಪ್ ಕೊಡಿಸಲು ಹೇಳಿದ,ಅದಕ್ಕೆ ನಾನು ಹೇಳಿದೆ ಅಷ್ಟೇ.ಅದರಿಂದ ನಾನು ಕಮಿಷನ್ ಪಡೆಯುವ ಅಗತ್ಯವಿಲ್ಲ.ಅಂತಹ ಸಣ್ಣ ವ್ಯಕ್ತಿಯಲ್ಲ.ದೊಡ್ಡ ತಪ್ಪು ಇದ್ರೆ ಹೇಳಿ, ಸಣ್ಣ ವ್ಯಕ್ತಿಯಾಗಬೇಡಿ ಎಂದು ಕುಟುಕಿದರು.
ಸಿದ್ದರಾಮಯ್ಯ ಹಾಗೂ ಎಚ್.ಡಿ.ದೇವೇಗೌಡ ಅವರನ್ನು ಹೊಗಳಿ ಮತ ಪಡೆಯುವ ಅಗತ್ಯವಿಲ್ಲ.ಅವರು ಇಲ್ಲಿಯ ಮತದಾರರೇ? ಒಳ್ಳೆ ಕೆಲಸ ಮಾಡಿದಾಗ ಹೊಗಳಿದರೆ ತಪ್ಪೇ ಎಂದರು.
ನಾನು ಮಂತ್ರಿಯಾಗಬೇಕೆಂದು ಆಸೆ ಇರಲಿಲ್ಲ.ಆದರೆ ಕುಮಾರಸ್ವಾಮಿ ಅವರಿಗೆ ಸಲಹೆಗಾರನಾಗಿ ಇರಬೇಕು ಎಂದು ಕೊಂಡಿದ್ದೆ,ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಇಬ್ಬರು ಸೇರಿ ಹೊರ ಹೋಗುವಂತೆ ಮಾಡಿದರು ಎಂದು ತಿಳಿಸಿದರು.
ಕುಮಾರಸ್ವಾಮಿ ಅವರು ಕೂಡ ಹಲವು ಸಮ್ಮಿಶ್ರ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ ಎಂದರು.