ETV Bharat / state

ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ: ರಾಜಮನೆತನದವರು ವಿರೋಧಿಸಬೇಕಿತ್ತು: ವಾಟಾಳ್ ನಾಗರಾಜ್

author img

By

Published : Oct 30, 2022, 9:31 PM IST

ನವೆಂಬರ್​ 1ರಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲುಗಾಡಿಯ ಹೆಸರು ಬದಲಾವಣೆಯನ್ನು ರಾಜಮನೆತನದವರು ವಿರೋಧಿಸಬೇಕಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿd ಅವರು, ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರ ಈ ಕ್ರಮವನ್ನು ರಾಜಮನೆತನ ವಿರೋಧಿಸಬೇಕಿತ್ತು. ಬೇಕಾದರೆ ಹೊಸದಾಗಿ 4 ರೈಲಿಗೆ ಒಡೆಯರ ಹೆಸರಿಟ್ಟಿದ್ದರೂ ಸ್ವಾಗತವಿತ್ತು. ಆದರೆ, ಟಿಪ್ಪು ಹೆಸರು ತೆಗೆದು ಮಹಾರಾಜರ ಹೆಸರು ಇಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಮೈಸೂರು ಮಹಾರಾಜರು ಆಕ್ಷೇಪ ವ್ಯಕ್ತಪಡಿಸಿದ್ರೆ ಅವರ ಗೌರವ ಹೆಚ್ಚಾಗುತ್ತಿತ್ತು ಎಂದರು.

ನವೆಂಬರ್​ 1ರಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು. ನವೆಂಬರ್​ 1 ರಿಂದ ಹಿಂದಿ, ತಮಿಳು, ಮಲಯಾಳಂ, ಭಾಷೆಗಳ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಚಿತ್ರ ಮಂದಿರಗಳಿಗೆ ಬೆಂಕಿ ಬೀಳುತ್ತೆ ಎಂದು ವಾಟಾಳ್​ ನಾಗರಾಜ್​ ಎಚ್ಚರಿಕೆ ರವಾನಿಸಿದರು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿದರು

ರಾಜ್ಯದಲ್ಲಿ ಹಿಂದಿ ಹೇರಿಕೆ ಸಾಧ್ಯವಿಲ್ಲ: ಕರ್ನಾಟಕದಲ್ಲಿ ಮೊದಲು ಕನ್ನಡ ಬಳಸಬೇಕು. ಅನಂತರ ಬೇರೆ ಭಾಷೆಯನ್ನಾಡಬೇಕು. ಕೇಂದ್ರ ಪುರಸ್ಕೃತ ಹುದ್ದೆಗೆ ಕನ್ನಡ ಭಾಷೆಯ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಹಿಂದಿ ಹೇರಿಕೆ ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಿ, ನಮಗೆ ಬೇಡ ಎಂದು ವಾಟಾಳ್​ ಗುಡುಗಿದರು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿದರು

ಬೂಟಾಟಿಕೆ ಕಾರ್ಯಕ್ರಮ: ಕೋಟಿ ಕಂಠ ಗಾಯನ ಬೂಟಾಟಿಕೆ ಕಾರ್ಯಕ್ರಮವಾಗಿದೆ. ಇದರಿಂದ ಆದ ಪ್ರಯೋಜನವೇನು? ಅದರ ಬದಲು ರಾಜ್ಯದಿಂದ ಕೈಬಿಟ್ಟು ಹೋಗಿರುವ ಊಟಿ, ತಾಳವಾಡಿ, ಕಾಸರಗೋಡು, ಸೊಲ್ಲಾಪುರ ಮುಂತಾದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸುವ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಓದಿ: ಈ ಸರ್ಕಾರ ಜೆಸಿಬಿ, ಹಿಟಾಚಿಯಲ್ಲಿ ಹಣ ಬಾಚುತ್ತಿದೆ: ಭ್ರಷ್ಟಾಚಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಕಿಡಿ

ಮೈಸೂರು: ಟಿಪ್ಪು ಎಕ್ಸ್‌ಪ್ರೆಸ್ ರೈಲುಗಾಡಿಯ ಹೆಸರು ಬದಲಾವಣೆಯನ್ನು ರಾಜಮನೆತನದವರು ವಿರೋಧಿಸಬೇಕಿತ್ತು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.

ನಗರದ ಹಾರ್ಡಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿd ಅವರು, ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸರ್ಕಾರ ಈ ಕ್ರಮವನ್ನು ರಾಜಮನೆತನ ವಿರೋಧಿಸಬೇಕಿತ್ತು. ಬೇಕಾದರೆ ಹೊಸದಾಗಿ 4 ರೈಲಿಗೆ ಒಡೆಯರ ಹೆಸರಿಟ್ಟಿದ್ದರೂ ಸ್ವಾಗತವಿತ್ತು. ಆದರೆ, ಟಿಪ್ಪು ಹೆಸರು ತೆಗೆದು ಮಹಾರಾಜರ ಹೆಸರು ಇಡುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಮೈಸೂರು ಮಹಾರಾಜರು ಆಕ್ಷೇಪ ವ್ಯಕ್ತಪಡಿಸಿದ್ರೆ ಅವರ ಗೌರವ ಹೆಚ್ಚಾಗುತ್ತಿತ್ತು ಎಂದರು.

ನವೆಂಬರ್​ 1ರಂದು ಕರಾಳ ದಿನಾಚರಣೆ ಆಚರಿಸುವ ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು. ನವೆಂಬರ್​ 1 ರಿಂದ ಹಿಂದಿ, ತಮಿಳು, ಮಲಯಾಳಂ, ಭಾಷೆಗಳ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಚಿತ್ರ ಮಂದಿರಗಳಿಗೆ ಬೆಂಕಿ ಬೀಳುತ್ತೆ ಎಂದು ವಾಟಾಳ್​ ನಾಗರಾಜ್​ ಎಚ್ಚರಿಕೆ ರವಾನಿಸಿದರು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿದರು

ರಾಜ್ಯದಲ್ಲಿ ಹಿಂದಿ ಹೇರಿಕೆ ಸಾಧ್ಯವಿಲ್ಲ: ಕರ್ನಾಟಕದಲ್ಲಿ ಮೊದಲು ಕನ್ನಡ ಬಳಸಬೇಕು. ಅನಂತರ ಬೇರೆ ಭಾಷೆಯನ್ನಾಡಬೇಕು. ಕೇಂದ್ರ ಪುರಸ್ಕೃತ ಹುದ್ದೆಗೆ ಕನ್ನಡ ಭಾಷೆಯ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಹಿಂದಿ ಹೇರಿಕೆ ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಿ, ನಮಗೆ ಬೇಡ ಎಂದು ವಾಟಾಳ್​ ಗುಡುಗಿದರು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಾತನಾಡಿದರು

ಬೂಟಾಟಿಕೆ ಕಾರ್ಯಕ್ರಮ: ಕೋಟಿ ಕಂಠ ಗಾಯನ ಬೂಟಾಟಿಕೆ ಕಾರ್ಯಕ್ರಮವಾಗಿದೆ. ಇದರಿಂದ ಆದ ಪ್ರಯೋಜನವೇನು? ಅದರ ಬದಲು ರಾಜ್ಯದಿಂದ ಕೈಬಿಟ್ಟು ಹೋಗಿರುವ ಊಟಿ, ತಾಳವಾಡಿ, ಕಾಸರಗೋಡು, ಸೊಲ್ಲಾಪುರ ಮುಂತಾದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸುವ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಓದಿ: ಈ ಸರ್ಕಾರ ಜೆಸಿಬಿ, ಹಿಟಾಚಿಯಲ್ಲಿ ಹಣ ಬಾಚುತ್ತಿದೆ: ಭ್ರಷ್ಟಾಚಾರದ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.