ಮೈಸೂರು: ಅಮೆರಿಕದಲ್ಲಿ ನಡೆದಿದ್ದ ಶೂಟೌಟ್ ಗೆ ಬಲಿಯಾಗಿರುವ ಮೈಸೂರು ವಿದ್ಯಾರ್ಥಿ ಅಭಿಷೇಕ್ ಕುಟುಂಬಸ್ಥರಿಗೆ ಅಡ್ಡಿಯಾಗಿದ್ದ ವೀಸಾ ಸಮಸ್ಯೆ ಬಗೆಹರಿದಿದೆ. ಈ ಹಿನ್ನೆಲೆ ಅವರು ಪುತ್ರನ ಮೃತದೇಹ ತರಲು ಶುಕ್ರವಾರ ಅಮೆರಿಕಕ್ಕೆ ತೆರಳಲಿದ್ದಾರೆ.
ಅಮೆರಿಕದಲ್ಲಿ ಕಡ್ಲೆಪುರಿಯಂತೆ ಸಿಗುವ ಗನ್ ಇಂಥ ದುರಂತಕ್ಕೆ ಕಾರಣ: ಅಭಿಷೇಕ್ ಸಾವಿಗೆ ಪ್ರತಾಪ್ ಸಿಂಹ ವಿಷಾದ
ಕಳೆದ ವಾರ ಅಮೆರಿಕದಲ್ಲಿ ಅಭಿಷೇಕ ಹತ್ಯೆಯಾದ ಮೈಸೂರಿನ ವಿದ್ಯಾರ್ಥಿ ಅಭಿಷೇಕ್ ಭಟ್ ಮೃತದೇಹವನ್ನು ನೋಡಲು ತೆರಳಬೇಕಿತ್ತು. ಆದ್ರೆ ಅಭಿಷೇಕ್ ಸಹೋದರನಿಗೆ ವೀಸಾ ಸಮಸ್ಯೆ ಆಗಿದ್ದರಿಂದ ತಡವಾಗಿದೆ. ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಶ್ರೀರಾಮುಲು ಅವರು ಸಮಸ್ಯೆಯನ್ನು ಬಗರಹರಿಸುತ್ತೇವೆ ಎಂದು ಹೇಳಿದ್ದರು.
ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ
ಈಗ ವೀಸಾ ಹಾಗೂ ಪಾಸ್ ಪೋರ್ಟ್ ಸಮಸ್ಯೆ ಬಗೆಹರಿದಿದ್ದು ಶುಕ್ರವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳುತ್ತೇವೆ ಎಂದು ಅಭಿಷೇಕ್ ತಂದೆ ಸುದೇಶ್ ಚಂದ ತಿಳಿಸಿದ್ದಾರೆ.