ETV Bharat / state

ನಕಲಿ ಆಧಾರ್ ನೀಡಿ ಮೊಬೈಲ್​ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಂಕಿತ: ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ

author img

By

Published : Nov 22, 2022, 3:04 PM IST

ಮಂಗಳೂರು ಆಟೋ ಸ್ಫೋಟದ ಪ್ರಕರಣದ ಶಂಕಿತ ಮೈಸೂರಿನಲ್ಲಿ ಬಾಡಿಗೆ ರೂಮ್ ಪಡೆದಿದ್ದ. ಅಲ್ಲದೇ ನಕಲಿ ಆಧಾರ್​ ಕಾರ್ಡ್ ನೀಡಿ, ನಲವತ್ತೈದು ದಿನದ ಮೊಬೈಲ್ ತರಬೇತಿ ಕೋರ್ಸ್​ಗೆ ಸೇರಿಕೊಂಡಿದ್ದ ಎಂದು ಮೊಬೈಲ್​ ಅಂಗಡಿ ಮಾಲೀಕ ಪ್ರಸಾದ್ ಹೇಳುತ್ತಾರೆ.

suspect joined the mobile repair training by giving fake Aadhaar
ನಕಲಿ ಆಧಾರ್ ನೀಡಿ ಮೊಬೈಲ್​ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಂಕಿತ

ಮೈಸೂರು: ಶಂಕಿತ ವ್ಯಕ್ತಿಯೊಬ್ಬ ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಹೇಳಿ ಮೊಬೈಲ್​ ರಿಪೇರಿ ತರಬೇತಿಗೆ ಸೇರಿಕೊಳ್ಳುತ್ತಾನೆ. ಅಲ್ಲಿ ಕೆಲಸ ಸಿಗಲು ತಡವಾಗುತ್ತದೆ ಎಂಬ ಕಾರಣ ನೀಡಿ, ಆ ಸಮಯದಲ್ಲಿ ಮೊಬೈಲ್ ರಿಪೇರಿ ಕಲಿಯಲು ಸೇರಿಕೊಳ್ಳುತ್ತಿದ್ದೇನೆ ಎಂದು ಪ್ರೇಮ್ ರಾಜ್ ಹೆಸರಿನ ಆಧಾರ್ ಕಾರ್ಡ್ ನೀಡಿ, ನಲವತ್ತೈದು ದಿನದ ಮೊಬೈಲ್ ತರಬೇತಿ ಕೋರ್ಸ್​ಗೆ ಸೇರಿಕೊಂಡಿದ್ದ ಎಂದು ಮೊಬೈಲ್​ ಅಂಗಡಿ ಮಾಲೀಕ ಪ್ರಸಾದ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ

ಮಂಗಳೂರು ಆಟೋ ಸ್ಫೋಟದ ಪ್ರಕರಣದ ಶಂಕಿತ ಮೈಸೂರಿನಲ್ಲಿ ಬಾಡಿಗೆ ರೂಮ್ ಪಡೆದು, ಆ ರೂಮಿಗೆ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಈ ಶಂಕಿತ ವ್ಯಕ್ತಿ ನಾನು ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕೆ ಬಂದಿದ್ದೇನೆ. ಕೆಲಸ ಸಿಗುವುದು ಸ್ವಲ್ಪ ದಿನ ಆಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಳ್ಳಲು ಬಂದಿದ್ದೇನೆ. ನನ್ನ ಹೆಸರು ಪ್ರೇಮ್ ರಾಜ್ ಎಂದು ಹೇಳಿ, ಆಧಾರ್ ಕಾರ್ಡ್ ನೀಡಿದ್ದ. ನಾವು ಆತನಿಗೆ ಪ್ರವೇಶ ನೀಡಿ ಮೊಬೈಲ್ ತರಬೇತಿಗೆ ಅಡ್ಮಿಷನ್ ಮಾಡಿಕೊಂಡೆವು ಎಂದು ಮೊಬೈಲ್​ ಅಂಗಡಿ ಮಾಲೀಕ ಪ್ರಸಾದ್​ ಹೇಳುತ್ತಾರೆ.

ಆದರೆ ಆತ ಸರಿಯಾಗಿ ತರಗತಿಗೆ ಬರುತ್ತಿರಲಿಲ್ಲ. ಪ್ರಶ್ನೆ ಮಾಡಿದರೆ ಗೊಂದಲದ ಉತ್ತರ ನೀಡುತ್ತಿದ್ದ. ನಲವತ್ತೈದು ದಿನದ ತರಗತಿಗೆ ಕೇವಲ ಇಪ್ಪತ್ತೆರಡು ದಿನ ಮಾತ್ರ ಬಂದಿದ್ದಾನೆ. ಮೊಬೈಲ್​ನ ಸಾಫ್ಟ್ ವೇರ್, ಹಾರ್ಡ್ ವೇರ್ ಕಲಿಯಲು ಹತ್ತು ಡಮ್ಮಿ ಸೆಟ್ ಬೇಕೆಂದು ಹೇಳಿದ್ದೆವು. ಆದರೆ ರಿಪೇರಿಯನ್ನು ಸರಿಯಾಗಿ ಕಲಿಯಲಿಲ್ಲ. ಆತ ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದ. ಹುಬ್ಬಳ್ಳಿ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ನಾನೊಬ್ಬ ಶಿವನ ಭಕ್ತ ಎಂಬಂತೆ ವರ್ತಿಸುತ್ತಿದ್ದ. ಈತ ನಮ್ಮಲ್ಲಿ ಪ್ರವೇಶ ಪಡೆಯಲು ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ತರಬೇತಿ ಸಂಸ್ಥೆಯ ಮುಖ್ಯಸ್ಥ ಹಾಗೂ ಅಂಗಡಿ ಮಾಲೀಕ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್​ಐಎ ಶೋಧ

ಮೈಸೂರು: ಶಂಕಿತ ವ್ಯಕ್ತಿಯೊಬ್ಬ ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಹೇಳಿ ಮೊಬೈಲ್​ ರಿಪೇರಿ ತರಬೇತಿಗೆ ಸೇರಿಕೊಳ್ಳುತ್ತಾನೆ. ಅಲ್ಲಿ ಕೆಲಸ ಸಿಗಲು ತಡವಾಗುತ್ತದೆ ಎಂಬ ಕಾರಣ ನೀಡಿ, ಆ ಸಮಯದಲ್ಲಿ ಮೊಬೈಲ್ ರಿಪೇರಿ ಕಲಿಯಲು ಸೇರಿಕೊಳ್ಳುತ್ತಿದ್ದೇನೆ ಎಂದು ಪ್ರೇಮ್ ರಾಜ್ ಹೆಸರಿನ ಆಧಾರ್ ಕಾರ್ಡ್ ನೀಡಿ, ನಲವತ್ತೈದು ದಿನದ ಮೊಬೈಲ್ ತರಬೇತಿ ಕೋರ್ಸ್​ಗೆ ಸೇರಿಕೊಂಡಿದ್ದ ಎಂದು ಮೊಬೈಲ್​ ಅಂಗಡಿ ಮಾಲೀಕ ಪ್ರಸಾದ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ

ಮಂಗಳೂರು ಆಟೋ ಸ್ಫೋಟದ ಪ್ರಕರಣದ ಶಂಕಿತ ಮೈಸೂರಿನಲ್ಲಿ ಬಾಡಿಗೆ ರೂಮ್ ಪಡೆದು, ಆ ರೂಮಿಗೆ ನಕಲಿ ಆಧಾರ್ ಕಾರ್ಡ್ ನೀಡಿದ್ದ. ಈ ಶಂಕಿತ ವ್ಯಕ್ತಿ ನಾನು ಮೈಸೂರಿನಲ್ಲಿ ಕಾಲ್ ಸೆಂಟರ್ ಕೆಲಸಕ್ಕೆ ಬಂದಿದ್ದೇನೆ. ಕೆಲಸ ಸಿಗುವುದು ಸ್ವಲ್ಪ ದಿನ ಆಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮೊಬೈಲ್ ರಿಪೇರಿ ತರಬೇತಿಗೆ ಸೇರಿಕೊಳ್ಳಲು ಬಂದಿದ್ದೇನೆ. ನನ್ನ ಹೆಸರು ಪ್ರೇಮ್ ರಾಜ್ ಎಂದು ಹೇಳಿ, ಆಧಾರ್ ಕಾರ್ಡ್ ನೀಡಿದ್ದ. ನಾವು ಆತನಿಗೆ ಪ್ರವೇಶ ನೀಡಿ ಮೊಬೈಲ್ ತರಬೇತಿಗೆ ಅಡ್ಮಿಷನ್ ಮಾಡಿಕೊಂಡೆವು ಎಂದು ಮೊಬೈಲ್​ ಅಂಗಡಿ ಮಾಲೀಕ ಪ್ರಸಾದ್​ ಹೇಳುತ್ತಾರೆ.

ಆದರೆ ಆತ ಸರಿಯಾಗಿ ತರಗತಿಗೆ ಬರುತ್ತಿರಲಿಲ್ಲ. ಪ್ರಶ್ನೆ ಮಾಡಿದರೆ ಗೊಂದಲದ ಉತ್ತರ ನೀಡುತ್ತಿದ್ದ. ನಲವತ್ತೈದು ದಿನದ ತರಗತಿಗೆ ಕೇವಲ ಇಪ್ಪತ್ತೆರಡು ದಿನ ಮಾತ್ರ ಬಂದಿದ್ದಾನೆ. ಮೊಬೈಲ್​ನ ಸಾಫ್ಟ್ ವೇರ್, ಹಾರ್ಡ್ ವೇರ್ ಕಲಿಯಲು ಹತ್ತು ಡಮ್ಮಿ ಸೆಟ್ ಬೇಕೆಂದು ಹೇಳಿದ್ದೆವು. ಆದರೆ ರಿಪೇರಿಯನ್ನು ಸರಿಯಾಗಿ ಕಲಿಯಲಿಲ್ಲ. ಆತ ಕನ್ನಡ ಚೆನ್ನಾಗಿ ಮಾತನಾಡುತ್ತಿದ್ದ. ಹುಬ್ಬಳ್ಳಿ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ನಾನೊಬ್ಬ ಶಿವನ ಭಕ್ತ ಎಂಬಂತೆ ವರ್ತಿಸುತ್ತಿದ್ದ. ಈತ ನಮ್ಮಲ್ಲಿ ಪ್ರವೇಶ ಪಡೆಯಲು ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ತರಬೇತಿ ಸಂಸ್ಥೆಯ ಮುಖ್ಯಸ್ಥ ಹಾಗೂ ಅಂಗಡಿ ಮಾಲೀಕ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್​ಐಎ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.