ETV Bharat / state

ಸುತ್ತೂರು ಮಠ ಜಾತ್ರೆ: ಆರು ದಿನ ಇಲ್ಲಿ ಹೊತ್ತಿದ ಒಲೆ ಆರೋದಿಲ್ವಂತೆ! - ಸುತ್ತೂರು ಮಠದ ಜಾತ್ರೆ

ಸುತ್ತೂರು ಮಠದ ಜಾತ್ರೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ನಡೆಯುತ್ತೆ. ಈ ಆರು ದಿನ ಇಲ್ಲಿ ಹೊತ್ತಿಸಿದ ಒಲೆ ಆರದಂತೆ ಭಕ್ತರಿಗೆ ಭೋಜನ ತಯಾರಾಗುತ್ತದೆ.

ಸುತ್ತೂರು ಮಠ ಜಾತ್ರೆ
Suttur mutt fair started in Mysore
author img

By

Published : Jan 25, 2020, 6:31 PM IST

ಮೈಸೂರು: ಸುತ್ತೂರು ಮಠದ ಜಾತ್ರೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸನ ನಡೆಯುತ್ತೆ. ಈ ಆರು ದಿನ ಇಲ್ಲಿ ಹೊತ್ತಿಸಿದ ಒಲೆ ಆರದಂತೆ ಭಕ್ತರಿಗೆ ಭೋಜನ ತಯಾರಾಗುತ್ತದೆ.

ಸುತ್ತೂರು ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನ ದಾಸೋಹಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಜಾತ್ರೆಯ 5 ಕಡೆ ಭೋಜನಾ ಗೃಹಗಳನ್ನು ತೆರೆಯಲಾಗಿದೆ.

ಸುತ್ತೂರು ಮಠ ಜಾತ್ರೆ

ಅತಿಥಿ ಗಣ್ಯರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ಬಾರಿಗೆ 2000 ಮಂದಿ ಪ್ರಸಾದ ಸ್ವೀಕರಿಸಬಹುದಾಗಿದೆ. ಅಡುಗೆ ಸಿದ್ಧಪಡಿಸುವುದಕ್ಕಾಗಿ ಗದ್ದಿಗೆ ಸಮೀಪ ದೊಡ್ಡ ಪಾಕಶಾಲೆ ನಿರ್ಮಿಸಲಾಗಿದೆ. 50 ದೊಡ್ಡ ಗಾತ್ರದ ಒಲೆಗಳು ಹಗಲಿರುಳು ಉರಿಯುತ್ತಿವೆ. ಈ ಕಾರ್ಯಕ್ಕೆ ಒಟ್ಟು 500 ಬಾಣಸಿಗರು, 500 ಜನರು ಊಟ ಬಡಿಸಲು ನಿಯೋಜಿಸಲಾಗಿದೆ.

ನಾನಾ ಬಗೆಯ ಪ್ರಸಾದ ವಿತರಣೆ:
ದಾಸೋಹದಲ್ಲಿ ಸಿಹಿಪೊಂಗಲ್, ಖಾರ ಪೊಂಗಲ್, ಕೇಸರಿಬಾತ್,ಖಾರಭಾತ್, ಬಿಸಿಬೇಳೆಬಾತ್, ಕಡ್ಲೆಹುಳಿ, ಪಾಯಸ, ಲಾಡು, ಬಾದುಷಾ,ಸಿಹಿ ಖಾರ ಬೂಂದಿ ಇನ್ನಿತರ ಪ್ರಸಾದವಿರುತ್ತದೆ. ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪ್ರಸಾದ ವಿತರಿಸುವುದರಿಂದ ಬೆಂಕಿಯನ್ನು ನಂದಿಸುವುದಿಲ್ಲ. 24 ಗಂಟೆಗಳ ಕಾಲ ಸೌದೆ ಒಲೆ ಉರಿಯುತ್ತದೆ. ಇಂತಹ ದಾಸೋಹಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.

ಮೈಸೂರು: ಸುತ್ತೂರು ಮಠದ ಜಾತ್ರೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸನ ನಡೆಯುತ್ತೆ. ಈ ಆರು ದಿನ ಇಲ್ಲಿ ಹೊತ್ತಿಸಿದ ಒಲೆ ಆರದಂತೆ ಭಕ್ತರಿಗೆ ಭೋಜನ ತಯಾರಾಗುತ್ತದೆ.

ಸುತ್ತೂರು ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನ ದಾಸೋಹಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಜಾತ್ರೆಯ 5 ಕಡೆ ಭೋಜನಾ ಗೃಹಗಳನ್ನು ತೆರೆಯಲಾಗಿದೆ.

ಸುತ್ತೂರು ಮಠ ಜಾತ್ರೆ

ಅತಿಥಿ ಗಣ್ಯರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ಬಾರಿಗೆ 2000 ಮಂದಿ ಪ್ರಸಾದ ಸ್ವೀಕರಿಸಬಹುದಾಗಿದೆ. ಅಡುಗೆ ಸಿದ್ಧಪಡಿಸುವುದಕ್ಕಾಗಿ ಗದ್ದಿಗೆ ಸಮೀಪ ದೊಡ್ಡ ಪಾಕಶಾಲೆ ನಿರ್ಮಿಸಲಾಗಿದೆ. 50 ದೊಡ್ಡ ಗಾತ್ರದ ಒಲೆಗಳು ಹಗಲಿರುಳು ಉರಿಯುತ್ತಿವೆ. ಈ ಕಾರ್ಯಕ್ಕೆ ಒಟ್ಟು 500 ಬಾಣಸಿಗರು, 500 ಜನರು ಊಟ ಬಡಿಸಲು ನಿಯೋಜಿಸಲಾಗಿದೆ.

ನಾನಾ ಬಗೆಯ ಪ್ರಸಾದ ವಿತರಣೆ:
ದಾಸೋಹದಲ್ಲಿ ಸಿಹಿಪೊಂಗಲ್, ಖಾರ ಪೊಂಗಲ್, ಕೇಸರಿಬಾತ್,ಖಾರಭಾತ್, ಬಿಸಿಬೇಳೆಬಾತ್, ಕಡ್ಲೆಹುಳಿ, ಪಾಯಸ, ಲಾಡು, ಬಾದುಷಾ,ಸಿಹಿ ಖಾರ ಬೂಂದಿ ಇನ್ನಿತರ ಪ್ರಸಾದವಿರುತ್ತದೆ. ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪ್ರಸಾದ ವಿತರಿಸುವುದರಿಂದ ಬೆಂಕಿಯನ್ನು ನಂದಿಸುವುದಿಲ್ಲ. 24 ಗಂಟೆಗಳ ಕಾಲ ಸೌದೆ ಒಲೆ ಉರಿಯುತ್ತದೆ. ಇಂತಹ ದಾಸೋಹಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.

Intro:ಮೈಸೂರು: ಆರು ದಿನಗಳ ಕಾಲ ಒಲೆ ಆರಿಸದ ಹಾಗೆ ಅನ್ನದಾಸೋಹ ನಡೆಯುವ ಜಾತ್ರೆಯೇ ಈ ಸುತ್ತೂರು ಜಾತ್ರೆ. ಜಾತ್ರೆಗೆ ಬರುವ ಜನರಿಗೆ ಜಾಗೃತಿಯ ಜೊತೆಗೆ ಅನ್ನದಾಸೋಹವು ನಿರಂತರವಾಗಿ ನಡೆಯುತ್ತದೆ.Body:





ಸುತ್ತೂರು ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಜಾತ್ರೆಯ ಪ್ರತಿದಿನವೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರು ಹಸಿದು ಹೋಗಬಾರದೆಂದು ಅನ್ನ ದಾಸೋಹ ಏರ್ಪಡಿಸಲಾಗಿದ್ದು, ಈಗಾಗಲೇ ಅನ್ನ ದಾಸೋಹಕ್ಕೆ ಚಾಲನೆ ನೀಡಿದ್ದು ಜಾತ್ರೆಯ ೫ ಕಡೆ ಭೋಜನಾಗೃಹಗಳನ್ನು ತೆರೆಯಲಾಗಿದೆ. ಅತಿಥಿ ಗಣ್ಯರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಒಂದು ಬಾರಿಗೆ ೨,೦೦೦ ಮಂದಿ ಪ್ರಸಾದ ಸ್ವೀಕರಿಸುತ್ತಾರೆ. ಹಾಗೂ ಅಡುಗೆ ಸಿದ್ದಪಡಿಸುವುದಕ್ಕಾಗಿ ಗದ್ದಿಗೆ ಸಮೀಪ ದೊಡ್ಡ ಪಾಕಶಾಲೆ ನಿರ್ಮಿಸಿದ್ದು , ೫೦ ದೊಡ್ಡ ಗಾತ್ರದ ಒಲೆಗಳು ಹಗಲಿರುಳು ಉರಿಯುತ್ತಿವೆ, ೫೦೦ ಬಾಣಸಿಗರು ಇದ್ದಾರೆ.


ನಾನಾ ಬಗೆಯ ಪ್ರಸಾದ ವಿತರಣೆ

ದಾಸೋಹದಲ್ಲಿ ಸಿಹಿಪೊಂಗಲ್, ಖಾರ ಪೊಂಗಲ್, ಕೇಸರಿಬಾತ್,ಖಾರಭಾತ್, ಬಿಸಿಬೇಳೆಭಾತ್, ಕಡ್ಲೆಹುಳಿ, ಪಾಯಸ, ಲಾಡು, ಬಾದುಷಾ,ಸಿಹಿ ಖಾರ ಬೂಂದಿ ಇನ್ನಿತರ ಪ್ರಸಾದವಿರುತ್ತದೆ. ೨೦೦ ಕ್ವಿಂಟಲ್ ಬೇಳೆ, ೨೦೦ ಕ್ವಿಂಟಲ್ ಸಕ್ಕರೆ, ೫ ಟನ್ ಉಪ್ಪಿನಕಾಯಿ, ೧೦ ಟನ್ ಬೆಲ್ಲ, ೨೫ ಸಾವಿರ ತೆಂಗಿನಕಾಯಿ, ೨೦ ಸಾವಿರ ಲೀಟರ್ ಹಾಲು, ೪೬ ಸಾವಿರ ಸ್ಟೀಲ್‌ ಪ್ಲೇಟ್ ಮತ್ತು ೫,೦೦೦ ಮಂದಿಯನ್ನು ಊಟ ಬಡಿಸಲು ನಿಯೋಜಿಸಲಾಗಿದೆ. ಅಲ್ಲದೆ ಅಡುಗೆಯ ವಿಶೇಷವೆಂದರೆ ಸೌದೇ ಒಲೆಯನ್ನು ಬಳಸಿ ಅಡುಗೆ ಸಿದ್ದಪಡಿಸುತ್ತಾರೆ. ನಿರಂತರವಾಗಿ ಬೆಳಿಗ್ಗೆ ,ಮಧ್ಯಾಹ್ನ , ರಾತ್ರಿ ಪ್ರಸಾದ ವಿತರಿಸುವುದರಿಂದ ಬೆಂಕಿಯನ್ನು ನಂದಿಸುವುದಿಲ್ಲ. ೨೪ ಗಂಟೆಗಳ ಕಾಲ ಸೌದೆ ಒಲೆ ಉರಿಯುತ್ತದೆ. ಇಂತಹ ದಾಸೋಹಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.