ಮೈಸೂರು : ಗ್ರಾಮದಲ್ಲಿ ಬಾರ್ ಒಪನ್ ಆಗಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರಣ ಎಂದು ಆರೋಪಿಸಿರುವ ವರುಣಾ ಕ್ಷೇತ್ರದ ಗ್ರಾಮವೊಂದರ ಮಹಿಳೆಯರು ಮದ್ಯದಂಗಡಿಯನ್ನು ಕೂಡಲೇ ಮುಚ್ಚಿಸುವಂತೆ ಆಗ್ರಹಿಸಿದ್ದಾರೆ.
ನಂಜನಗೂಡು ತಾಲೂಕಿನ ಸುತ್ತೂರು ಸಮೀಪ ದೂರದಲ್ಲಿರುವ ಎಸ್ ಹೊಸಕೋಟೆ ಗ್ರಾಮದಲ್ಲಿ ಬಾರ್ ಒಪನ್ ಆಗಿದೆ. ಇದರಿಂದ ಸ್ಥಳೀಯ ಪ್ರಭಾವಿಗಳು ಸಿದ್ದರಾಮಯ್ಯನವರ ಬೆಂಬಲದೊಂದಿಗೆ ಇಲ್ಲಿ ಬಾರ್ ತೆರೆದಿದ್ದಾರೆ. ಇದಕ್ಕೆ ನೇರ ಹೊಣೆ ಸಿದ್ದರಾಮಯ್ಯನವರೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದ್ಯದಂಗಡಿ ಒಪನ್ ಆಗುವ ಮುನ್ನ ಗ್ರಾಮದ ಯುವಕರು ಆರಾಮವಾಗಿದ್ದರು. ಆದರೆ, ಬಾರ್ ತೆರೆದ ನಂತರ ಮನೆಗೆ ಬರುತ್ತಿಲ್ಲ. ಕೂಲಿಗೂ ಹೋಗುತ್ತಿಲ್ಲ, ಮನೆ ನಡೆಸಲು ಕಷ್ಟವಾಗುತ್ತಿದೆ. ಆದ ಕಾರಣ ಬಾರ್ ಮುಚ್ಚಿಸಿ ಎಂದು ಮಹಿಳೆಯರು ಕಿಡಿಕಾರಿದ್ದಾರೆ.