ETV Bharat / state

ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ

author img

By

Published : Mar 7, 2023, 5:00 PM IST

Updated : Mar 7, 2023, 6:00 PM IST

ಸರ್ಕಾರದ ಸೌಲಭ್ಯ ಸೇರಿದಂತೆ ಗುರುತಿನ ಚೀಟಿ ನೀಡಲು ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೃತೀಯ ಲಿಂಗಿಗಳ ಪ್ರಾಯೋಗಿಕ ಗಣತಿ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ
ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ

ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ

ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಯನ್ನು ಮೈಸೂರು ಮತ್ತು ವಿಜಯಪುರದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರಿನ ತೃತೀಯ ಲಿಂಗಿ ಸವೆನ್ ರೈನ್ ಬೋ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘‘ನಾವು ಜನ ಗಣತಿ ಗಂಡು ಹೆಣ್ಣಿನ ಗಣತಿ, ಹುಲಿ ಗಣತಿ ಸೇರಿದಂತೆ ಹಲವು ಗಣತಿಗಳನ್ನ ಕೇಳಿದ್ದೇವೆ. ಅದೇ ರೀತಿ ನಮ್ಮ ಗಣತಿಯನ್ನು ನಡೆಸಿ. ನಮಗೂ ಸರ್ಕಾರದ ಸೌಲಭ್ಯ ಸೇರಿದಂತೆ ಒಂದು ಗುರುತಿನ ಚೀಟಿ ನೀಡಿ ಎಂದು ಕಳೆದ 16 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಈಗ ತೃತೀಯ ಲಿಂಗಿಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರ ಅಂಗವಾಗಿ ಮೊದಲ ಬಾರಿಗೆ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೃತೀಯ ಲಿಂಗಿಗಳ ಪ್ರಾಯೋಗಿಕ ಗಣತಿ ಕಾರ್ಯವನ್ನು ಮಾರ್ಚ್ 12 ಅಥವಾ 13ನೇ ತಾರೀಖಿನಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಕ್ಷೀಪ್ತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಣತಿ ಪ್ರಕಾಶ್ ಮಾಹಿತಿ ನೀಡಿದರು.

ತೃತೀಯ ಲಿಂಗಿಗಳ ಸರ್ವೆಯಿಂದ ಆಗುವ ಪ್ರಯೋಜನಗಳೇನು: ಮೈಸೂರು ಜಿಲ್ಲೆಯಲ್ಲಿ ಅಂದಾಜು 1400 ತೃತೀಯ ಲಿಂಗಿಗಳು ಇದ್ದಾರೆ ಎನ್ನಲಾಗಿದೆ. ಆದರೆ, ಖಚಿತವಾಗಿ ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ. ಈ ಸರ್ವೇಯಿಂದ ಎಷ್ಟು ಜನ ತೃತೀಯ ಲಿಂಗಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂಬುದನ್ನು ಕಂಡು ಹಿಡಿಯಬಹುದು. ಇದರ ಜೊತೆಗೆ ಈ ಸರ್ವೇ ಮಾಡಿ ಒಂದು ಗುರುತಿನ ಚೀಟಿಯನ್ನು ಅವರಿಗೆ ನೀಡಿದರೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಹಾಗೂ ತೃತೀಯ ಲಿಂಗಿಗಳು ಎಂದು ಹೇಳಿಕೊಂಡು ಜನರನ್ನು ಸುಲಿಗೆ ಮಾಡುವುದನ್ನ ತಪ್ಪಿಸಬಹುದು, ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವ ತೃತೀಯ ಲಿಂಗಿಗಳಿಗೆ ಇದೊಂದು ಗುರುತಿನ ಚೀಟಿ ತರ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಪ್ರಾಯೋಗಿಕ ಸರ್ವೇ ಎಲ್ಲೆಲ್ಲಿ: ಮೊದಲ ಬಾರಿಗೆ ರಾಜ್ಯ ಸರ್ಕಾರ ಮೈಸೂರು ಹಾಗೂ ವಿಜಯಪುರದಲ್ಲಿ ಪ್ರಾಯೋಗಿಕವಾಗಿ ತರಬೇತಿ ಪಡೆದ ತೃತೀಯ ಲಿಂಗಿಗಳ ಸರ್ವೇ ಕಾರ್ಯದಲ್ಲಿ ಭಾಗವಹಿಸಲಿದ್ದು, ಮೈಸೂರು ಜಿಲ್ಲೆಯ ಮೈಸೂರು ನಗರ, ಕೆ.ಆರ್.ನಗರ, ನಂಜನಗೂಡು, ಟಿ.ನರಸೀಪುರ, ಎಚ್.ಡಿ‌ ಕೋಟೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ವೇ ನಡೆಯಲಿದೆ. ಈ ಸರ್ವೇ ಕಾರ್ಯವು ಜಿಲ್ಲೆಯ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಡೆಯಲಿದೆ ಮತ್ತು ಸ್ಥಳದಲ್ಲೇ ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿಯನ್ನು ಕೊಡಲಾಗುವುದು ಎಂದು ತಿಳಿಸಿದರು.

ತೃತೀಯ ಲಿಂಗಿಗಳ ಸರ್ವೇಯನ್ನ ತೃತೀಯ ಲಿಂಗಿಗಳೇ ಮಾಡುವುದರಿಂದ ಅವರು ತಮ್ಮ ಎಲ್ಲ ಮಾಹಿತಿಗಳನ್ನು ಮುಕ್ತವಾಗಿ ಹಂಚಿ ಕೊಳ್ಳುತ್ತಾರೆ ಎಂದು ವಿವರಿಸಿದರು. ಅದೇ ರೀತಿ ವಿಜಯಪುರದಲ್ಲೂ ಸಹ ಮೊದಲ ಹಂತವಾಗಿ‌ ಪ್ರಾಯೋಗಿಕ ಸರ್ವೇಯನ್ನ ನಡೆಸಲಾಗುತ್ತಿದೆ ಎಂದು ಪ್ರಣತಿ ಪ್ರಕಾಶ್ ಮಾಹಿತಿ ನೀಡಿದರು.

ಇದನ್ನೂ ಓದಿ: ನಾನು ಬದುಕಿರುವವರೆಗೂ ಆರ್​ಎಸ್ಎಸ್ ವಿರೋಧಿಸುತ್ತೇನೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಗೆ ಸಿದ್ಧತೆ

ಮೈಸೂರು: ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪ್ರಾಯೋಗಿಕ ಸರ್ವೇಯನ್ನು ಮೈಸೂರು ಮತ್ತು ವಿಜಯಪುರದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಮೈಸೂರಿನ ತೃತೀಯ ಲಿಂಗಿ ಸವೆನ್ ರೈನ್ ಬೋ ಸಂಘದ ಅಧ್ಯಕ್ಷೆ ಪ್ರಣತಿ ಪ್ರಕಾಶ್ ಈಟಿವಿ ಭಾರತ್​ಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ‘‘ನಾವು ಜನ ಗಣತಿ ಗಂಡು ಹೆಣ್ಣಿನ ಗಣತಿ, ಹುಲಿ ಗಣತಿ ಸೇರಿದಂತೆ ಹಲವು ಗಣತಿಗಳನ್ನ ಕೇಳಿದ್ದೇವೆ. ಅದೇ ರೀತಿ ನಮ್ಮ ಗಣತಿಯನ್ನು ನಡೆಸಿ. ನಮಗೂ ಸರ್ಕಾರದ ಸೌಲಭ್ಯ ಸೇರಿದಂತೆ ಒಂದು ಗುರುತಿನ ಚೀಟಿ ನೀಡಿ ಎಂದು ಕಳೆದ 16 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಈಗ ತೃತೀಯ ಲಿಂಗಿಗಳ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇದರ ಅಂಗವಾಗಿ ಮೊದಲ ಬಾರಿಗೆ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತೃತೀಯ ಲಿಂಗಿಗಳ ಪ್ರಾಯೋಗಿಕ ಗಣತಿ ಕಾರ್ಯವನ್ನು ಮಾರ್ಚ್ 12 ಅಥವಾ 13ನೇ ತಾರೀಖಿನಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಂಕ್ಷೀಪ್ತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಪ್ರಣತಿ ಪ್ರಕಾಶ್ ಮಾಹಿತಿ ನೀಡಿದರು.

ತೃತೀಯ ಲಿಂಗಿಗಳ ಸರ್ವೆಯಿಂದ ಆಗುವ ಪ್ರಯೋಜನಗಳೇನು: ಮೈಸೂರು ಜಿಲ್ಲೆಯಲ್ಲಿ ಅಂದಾಜು 1400 ತೃತೀಯ ಲಿಂಗಿಗಳು ಇದ್ದಾರೆ ಎನ್ನಲಾಗಿದೆ. ಆದರೆ, ಖಚಿತವಾಗಿ ಎಷ್ಟು ಜನ ಇದ್ದಾರೆ ಎಂಬುದು ಗೊತ್ತಿಲ್ಲ. ಈ ಸರ್ವೇಯಿಂದ ಎಷ್ಟು ಜನ ತೃತೀಯ ಲಿಂಗಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂಬುದನ್ನು ಕಂಡು ಹಿಡಿಯಬಹುದು. ಇದರ ಜೊತೆಗೆ ಈ ಸರ್ವೇ ಮಾಡಿ ಒಂದು ಗುರುತಿನ ಚೀಟಿಯನ್ನು ಅವರಿಗೆ ನೀಡಿದರೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಹಾಗೂ ತೃತೀಯ ಲಿಂಗಿಗಳು ಎಂದು ಹೇಳಿಕೊಂಡು ಜನರನ್ನು ಸುಲಿಗೆ ಮಾಡುವುದನ್ನ ತಪ್ಪಿಸಬಹುದು, ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವ ತೃತೀಯ ಲಿಂಗಿಗಳಿಗೆ ಇದೊಂದು ಗುರುತಿನ ಚೀಟಿ ತರ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಪ್ರಾಯೋಗಿಕ ಸರ್ವೇ ಎಲ್ಲೆಲ್ಲಿ: ಮೊದಲ ಬಾರಿಗೆ ರಾಜ್ಯ ಸರ್ಕಾರ ಮೈಸೂರು ಹಾಗೂ ವಿಜಯಪುರದಲ್ಲಿ ಪ್ರಾಯೋಗಿಕವಾಗಿ ತರಬೇತಿ ಪಡೆದ ತೃತೀಯ ಲಿಂಗಿಗಳ ಸರ್ವೇ ಕಾರ್ಯದಲ್ಲಿ ಭಾಗವಹಿಸಲಿದ್ದು, ಮೈಸೂರು ಜಿಲ್ಲೆಯ ಮೈಸೂರು ನಗರ, ಕೆ.ಆರ್.ನಗರ, ನಂಜನಗೂಡು, ಟಿ.ನರಸೀಪುರ, ಎಚ್.ಡಿ‌ ಕೋಟೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸರ್ವೇ ನಡೆಯಲಿದೆ. ಈ ಸರ್ವೇ ಕಾರ್ಯವು ಜಿಲ್ಲೆಯ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಡೆಯಲಿದೆ ಮತ್ತು ಸ್ಥಳದಲ್ಲೇ ತೃತೀಯ ಲಿಂಗಿಗಳಿಗೆ ಗುರುತಿನ ಚೀಟಿಯನ್ನು ಕೊಡಲಾಗುವುದು ಎಂದು ತಿಳಿಸಿದರು.

ತೃತೀಯ ಲಿಂಗಿಗಳ ಸರ್ವೇಯನ್ನ ತೃತೀಯ ಲಿಂಗಿಗಳೇ ಮಾಡುವುದರಿಂದ ಅವರು ತಮ್ಮ ಎಲ್ಲ ಮಾಹಿತಿಗಳನ್ನು ಮುಕ್ತವಾಗಿ ಹಂಚಿ ಕೊಳ್ಳುತ್ತಾರೆ ಎಂದು ವಿವರಿಸಿದರು. ಅದೇ ರೀತಿ ವಿಜಯಪುರದಲ್ಲೂ ಸಹ ಮೊದಲ ಹಂತವಾಗಿ‌ ಪ್ರಾಯೋಗಿಕ ಸರ್ವೇಯನ್ನ ನಡೆಸಲಾಗುತ್ತಿದೆ ಎಂದು ಪ್ರಣತಿ ಪ್ರಕಾಶ್ ಮಾಹಿತಿ ನೀಡಿದರು.

ಇದನ್ನೂ ಓದಿ: ನಾನು ಬದುಕಿರುವವರೆಗೂ ಆರ್​ಎಸ್ಎಸ್ ವಿರೋಧಿಸುತ್ತೇನೆ: ಸಿದ್ದರಾಮಯ್ಯ

Last Updated : Mar 7, 2023, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.