ಮೈಸೂರು : ಕೊರೊನಾ ಲಾಕ್ಡೌನ್ನಿಂದ ಕುಂಟಿತವಾಗಿದ್ದ ಮೈಸೂರು ಪ್ರವಾಸೋದ್ಯಮ ಅನ್ಲಾಕ್ ನಂತರ ಚೇತರಿಕೆ ಕಾಣುತ್ತಿದೆ.
ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸೋದ್ಯಮವೇ ಇಲ್ಲಿನ ಜನರ ಆದಾಯದ ಮೂಲವಾಗಿದ್ದು, ಕೋವಿಡ್ನಿಂದ ಕಳೆದ 6 ತಿಂಗಳಿನಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಅನ್ ಲಾಕ್ ನಂತರವೂ ನಗರದಲ್ಲಿರುವ ಅರಮನೆ, ಚಾಮುಂಡಿ ಬೆಟ್ಟ , ಮೃಗಾಲಯ, ಚರ್ಚ್, ಕೆ.ಆರ್.ಎಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಅಂತರಾಷ್ಟ್ರೀಯ ಪ್ರವಾಸಿಗರು, ಹೊರ ರಾಜ್ಯದ ಪ್ರವಾಸಿಗರು ಬರುತ್ತಿಲ್ಲ. ಸ್ಥಳೀಯವಾಗಿ ಅಲ್ಪಸ್ವಲ್ಪ ಪ್ರವಾಸಿಗರು ಮಾತ್ರ ಆಗಮಿಸುತ್ತಿದ್ದು, ಪ್ರವಾಸೋದ್ಯಮ ಸ್ವಲ್ಪ ಚೇತರಿಕೆ ಕಾಣುತ್ತಿದೆ.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ತೊಂದರೆಯಾದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ದೊಡ್ಡ ತೊಂದರೆಯಾಗಿತ್ತು. ಪ್ರವಾಸಿ ಸ್ಥಳಗಳಿಗೆ ಜನರು ಬರುತ್ತಿಲ್ಲ ಇದರಿಂದ ಹೋಟೆಲ್ ಸೇರಿದಂತೆ ಪ್ರಮುಖ ವ್ಯಾಪಾರಿ ಮಾಲ್ಗಳಲ್ಲಿ ಜನರು ಇಲ್ಲ.
ಇದರಿಂದ ಬಿಸಿನೆಸ್ ಸಂಪೂರ್ಣ ಬಿದ್ದು ಹೋಗಿದ್ದು, ಇದರ ಬಗ್ಗೆ ಸರ್ಕಾರ ಜನರಿಗೆ ಧೈರ್ಯ ತುಂಬಬೇಕು, ಹಣಕಾಸಿನ ಸಹಾಯ ಮಾಡಬೇಕು, ವ್ಯಾಪಾರಿ ಲೋನ್ಗಳನ್ನು ನೀಡಬೇಕು. ಜೊತೆಗೆ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ವ್ಯಾಪಾರಿ ಪುನೀತ್.