ETV Bharat / state

ಸಾಫ್ಟ್‌ವೇರ್​​​​​​​​​​​​​​ ಉದ್ಯೋಗಿಗಳಿಗೆ ದೈಹಿಕ ಪಾಠ ಹೇಳಿದ ಮಾಜಿ ಕ್ರಿಕೆಟಿಗ ಜಾವಗಲ್​​ ಶ್ರೀನಾಥ್

ಐಟಿ ಮಂದಿಗೆ ದೈಹಿಕ ಪಾಠ ಮಾಡಿದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್. ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್​ವೇರ್​​ ಕಂಪನಿಯ ಉದ್ಯೋಗಿಗಳಿಗೆ ಕ್ರೀಡಾಕೂಟ ಆಯೋಜನೆ.

author img

By

Published : Jul 15, 2019, 8:29 PM IST

Updated : Jul 15, 2019, 9:22 PM IST

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಮೈಸೂರು: ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ದೈಹಿಕ ಆರೋಗ್ಯದ ಬಗ್ಗೆ ಪಾಠ ಹೇಳಿದರು.

ಮೈಸೂರು ಮೂಲದ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್​ವೇರ್​​ ಕಂಪನಿಯು ಬೆಂಗಳೂರು, ಮೈಸೂರು, ಲಂಡನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ತನ್ನ ಶಾಖೆ ಹೊಂದಿದೆ. ಇದು ಸುಮಾರು 1000ಕ್ಕೂ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿದೆ. ಇಂತಹ ಉದ್ಯೋಗಿಗಳು ವರ್ಷವಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ.‌

ಇಂತಹ ಉದ್ಯೋಗಿಗಳಿಗೆ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳ ವಾರಾಂತ್ಯದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಇಂತಹ ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಈ ಸಂಸ್ಥೆಯ ರಾಯಭಾರಿಯಾದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ತಿಳಿಸಿಕೊಟ್ಟರು.

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಈ ಎರಡು ತಿಂಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಥ್ರೋ ಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಜೊತೆಗೆ ಒಳಾಂಗಣ ಕ್ರೀಡೆಗಳಾದ ಸ್ನೂಕರ್‌, ಚೆಸ್, ಶೆಟಲ್, ಬ್ಯಾಡ್ಮಿಂಟನ್ ಹಾಗೂ ಕೇರಂ ಆಡಿಸಲಾಗುತ್ತದೆ.

ಮೈಸೂರು: ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ದೈಹಿಕ ಆರೋಗ್ಯದ ಬಗ್ಗೆ ಪಾಠ ಹೇಳಿದರು.

ಮೈಸೂರು ಮೂಲದ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್​ವೇರ್​​ ಕಂಪನಿಯು ಬೆಂಗಳೂರು, ಮೈಸೂರು, ಲಂಡನ್, ಅಮೆರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ತನ್ನ ಶಾಖೆ ಹೊಂದಿದೆ. ಇದು ಸುಮಾರು 1000ಕ್ಕೂ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿದೆ. ಇಂತಹ ಉದ್ಯೋಗಿಗಳು ವರ್ಷವಿಡೀ ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ.‌

ಇಂತಹ ಉದ್ಯೋಗಿಗಳಿಗೆ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳ ವಾರಾಂತ್ಯದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದ್ದು, ಇಂತಹ ಕ್ರೀಡಾಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಈ ಸಂಸ್ಥೆಯ ರಾಯಭಾರಿಯಾದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ತಿಳಿಸಿಕೊಟ್ಟರು.

ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್

ಈ ಎರಡು ತಿಂಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಥ್ರೋ ಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಜೊತೆಗೆ ಒಳಾಂಗಣ ಕ್ರೀಡೆಗಳಾದ ಸ್ನೂಕರ್‌, ಚೆಸ್, ಶೆಟಲ್, ಬ್ಯಾಡ್ಮಿಂಟನ್ ಹಾಗೂ ಕೇರಂ ಆಡಿಸಲಾಗುತ್ತದೆ.

Intro:ಮೈಸೂರು: ಸದಾ ಕಂಪ್ಯೂಟರ್ ನ ಮುಂದೆ ಕುಳಿತಿರುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ದೈಹಿಕ ಆರೋಗ್ಯದ ಮಹತ್ವದ ಪಾಠ ಹೇಳಿದರು. ಎಲ್ಲಿ ಎನ್ನುತ್ತೀರಾ ಈ ಸ್ಟೋರಿ ನೋಡಿ.
Body:

ಅಮೇರಿಕಾದಲ್ಲಿ ತನ್ನ ಮುಖ್ಯ ಕೇಂದ್ರ ಹೊಂದಿರುವ ಯುನಿಲಾಗ್ ಕಂಟೆಂಟ್ ಸಲ್ಯೂಷನ್ ಸಾಫ್ಟ್ವೇರ್ ಕಂಪನಿಯು ಬೆಂಗಳೂರು, ಮೈಸೂರು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಕಂಪನಿಯನ್ನು ಹೊಂದಿದ್ದು ಸುಮಾರು ೧೦೦೦ ಕ್ಕೂ ಹೆಚ್ಚು ಜನ ಉದ್ಯೋಗಿಗಳನ್ನು ಹೊಂದಿದೆ. ಇಂತಹ ಉದ್ಯೋಗಿಗಳು ವರ್ಷವಿಡಿ ಕಂಪ್ಯೂಟರ್ ನ ಮುಂದೆ ಕುಳಿತಿರುತ್ತಾರೆ.‌ ಇಂತಹ ಉದ್ಯೋಗಿಗಳಿಗೆ ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳ ವಾರಾಂತ್ಯದಲ್ಲಿ ಕ್ರೀಡಾ ಕೂಟಗಳನ್ನು ಆಯೋಜಿಸಿದ್ದು ಇಂತಹ ಕ್ರೀಡಾ ಕೂಟಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂದು ಈ ಸಂಸ್ಥೆಯ ರಾಯಭಾರಿಯಾದ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟರು.
ಈ ಎರಡು ತಿಂಗಳ ವಾರ್ಷಿಕ ಕ್ರೀಡಾ ಕೂಟದಲ್ಲಿ ಅಥ್ಲೆಟಿಕ್ಸ್, ಥ್ರೋಬಾಲ್, ವಾಲಿಬಾಲ್, ಫುಟ್ಬಾಲ್, ಕ್ರಿಕೆಟ್ ಜೊತೆಗೆ ಒಳಾಂಗಣ ಕ್ರೀಡೆಗಳಾದ ಸ್ನೂಕರ್‌, ಚೆಸ್, ಶೆಟಲ್ ಬ್ಯಾಡ್ಮಿಂಟನ್ ಹಾಗೂ ಕೇರಂ ಗಳನ್ನು ಆಡಿಸಲಾಗುತ್ತದೆ. ಸಾಫ್ಟ್‌ವೇರ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಪಟುಗಳಿಂದ ತಮ್ಮ ಉದ್ಯೋಗಿಗಳಿಗೆ ಕೆಲಸದ ಜೊತೆಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬ ಬಗ್ಗೆ ಖ್ಯಾತ ಕ್ರಿಕೆಟಿಗರಿಂದ ಸ್ಪೂರ್ತಿ ತುಂಬುತ್ತಿರುವುದು ನಮಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಾಫ್ಟ್‌ವೇರ್ ಉದ್ಯೋಗಿ.Conclusion:
Last Updated : Jul 15, 2019, 9:22 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.