ETV Bharat / state

ರಾಜಕೀಯ ವಿರೋಧಿಗಳ ಗುರಿಯಾಗಿಸಿ ಐಟಿ,ಇಡಿ ದಾಳಿ ಆರೋಪ: ಪ್ರತಿಕ್ರಿಯೆ ವ್ಯರ್ಥವೆಂದ ಕೇಂದ್ರ ಸಚಿವ

author img

By

Published : Oct 12, 2019, 5:40 PM IST

ದೇಶದಲ್ಲಿ ರಾಜಕೀಯ ವಿರೋಧಿಗಳ ಗುರಿಯಾಗಿಸಿಕೊಂಡು ಐಟಿ, ಇಡಿ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡೋದೇ ವ್ಯರ್ಥ ಎಂದು ಕೇಂದ್ರ ಸಚಿವ ಹರ್ಷವರ್ಧನ್​ ಹೇಳಿದ್ರು.

ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಹೇಳಿಕೆ

ಮೈಸೂರು: ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ ಮಾಡಲಾಗುತ್ತಿದೆ ಎಂಬುದು ಆಧಾರರಹಿತ ಆರೋಪ. ಈ ಬಗ್ಗೆ ಪ್ರತಿಕ್ರಿಯೆ ‌ನೀಡುವುದೇ ವ್ಯರ್ಥ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮೈಸೂರಿನಲ್ಲಿ ಹೇಳಿದ್ರು.

ನವೆಂಬರ್ 5 ರಿಂದ 8 ರವರೆಗೆ ಕಲ್ಕತ್ತಾದಲ್ಲಿ ನಡೆಯುವ 5ನೇ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದ ಬಗ್ಗೆ ಮಾಹಿತಿ ನೀಡಲು ಸಿ.ಎಫ್‌.ಟಿ.ಆರ್.ಐ ಸಭಾಂಗಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಸುದ್ದಿಗೋಷ್ಠಿ ನಡೆಸಿದ್ರು.

ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಹೇಳಿಕೆ

ಈ ಬಾರಿ ಕಲ್ಕತ್ತಾದಲ್ಲಿ ನಡೆಯುವ ವಿಜ್ಞಾನ ಮೇಳಕ್ಕೆ ದೇಶ ವಿದೇಶಗಳಿಂದ ಸುಮಾರು 12 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಸಮ್ಮೇಳನದಲ್ಲಿ 1500 ಯುವ ವಿದ್ಯಾರ್ಥಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನದಲ್ಲಿ 28 ಪ್ರಮುಖ ಗೋಷ್ಠಿಗಳು ನಡೆಯಲಿವೆ. ಇದಕ್ಕಾಗಿ ಕಲ್ಕತ್ತಾದ ವಿಜ್ಞಾನ ಗ್ರಾಮ ನಿರ್ಮಾಣವಾಗಿದೆ ಎಂದು ತಿಳಿಸಿದ್ರು. ಈ ವಿಜ್ಞಾನ ಮೇಳದಲ್ಲಿ ಗ್ರಾಮಾಂತರ ಮಟ್ಟಕ್ಕೂ ತಂತ್ರಜ್ಞಾನ ವಿಜ್ಞಾನವನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದ ಕೇಂದ್ರ ಸಚಿವರು, ದೇಶದ ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೂತನವಾಗಿ 157 ಮೆಡಿಕಲ್ ಕಾಲೇಜ್​ಗಳನ್ನ ಸ್ಥಾಪಿಸಲು ಈಗಾಗಲೇ ನಿರ್ಧರಿಸಿದ್ದೇವೆ‌ ಎಂದು ತಿಳಿಸಿದ್ರು.

ಮೈಸೂರು: ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ ಮಾಡಲಾಗುತ್ತಿದೆ ಎಂಬುದು ಆಧಾರರಹಿತ ಆರೋಪ. ಈ ಬಗ್ಗೆ ಪ್ರತಿಕ್ರಿಯೆ ‌ನೀಡುವುದೇ ವ್ಯರ್ಥ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮೈಸೂರಿನಲ್ಲಿ ಹೇಳಿದ್ರು.

ನವೆಂಬರ್ 5 ರಿಂದ 8 ರವರೆಗೆ ಕಲ್ಕತ್ತಾದಲ್ಲಿ ನಡೆಯುವ 5ನೇ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದ ಬಗ್ಗೆ ಮಾಹಿತಿ ನೀಡಲು ಸಿ.ಎಫ್‌.ಟಿ.ಆರ್.ಐ ಸಭಾಂಗಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಸುದ್ದಿಗೋಷ್ಠಿ ನಡೆಸಿದ್ರು.

ಕೇಂದ್ರ ಸಚಿವ ಡಾ. ಹರ್ಷವರ್ಧನ್​ ಹೇಳಿಕೆ

ಈ ಬಾರಿ ಕಲ್ಕತ್ತಾದಲ್ಲಿ ನಡೆಯುವ ವಿಜ್ಞಾನ ಮೇಳಕ್ಕೆ ದೇಶ ವಿದೇಶಗಳಿಂದ ಸುಮಾರು 12 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಸಮ್ಮೇಳನದಲ್ಲಿ 1500 ಯುವ ವಿದ್ಯಾರ್ಥಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನದಲ್ಲಿ 28 ಪ್ರಮುಖ ಗೋಷ್ಠಿಗಳು ನಡೆಯಲಿವೆ. ಇದಕ್ಕಾಗಿ ಕಲ್ಕತ್ತಾದ ವಿಜ್ಞಾನ ಗ್ರಾಮ ನಿರ್ಮಾಣವಾಗಿದೆ ಎಂದು ತಿಳಿಸಿದ್ರು. ಈ ವಿಜ್ಞಾನ ಮೇಳದಲ್ಲಿ ಗ್ರಾಮಾಂತರ ಮಟ್ಟಕ್ಕೂ ತಂತ್ರಜ್ಞಾನ ವಿಜ್ಞಾನವನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದ ಕೇಂದ್ರ ಸಚಿವರು, ದೇಶದ ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೂತನವಾಗಿ 157 ಮೆಡಿಕಲ್ ಕಾಲೇಜ್​ಗಳನ್ನ ಸ್ಥಾಪಿಸಲು ಈಗಾಗಲೇ ನಿರ್ಧರಿಸಿದ್ದೇವೆ‌ ಎಂದು ತಿಳಿಸಿದ್ರು.

Intro:ಮೈಸೂರು: ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ ಮಾಡಲಾಗುತ್ತಿದೆ ಎಂಬ ವಿಚಾರ ಬೇಸ್ ಲೆಸ್ ಅಲಿಗೇಷನ್ ಇದರ ಬಗ್ಗೆ ಪ್ರತಿಕ್ರಿಯೆ ‌ನೀಡುವುದೆ ವ್ಯರ್ಥ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.


Body:ನವೆಂಬರ್ ೫ ರಿಂದ ೮ ರ ವರೆಗೆ ಕಲ್ಕತ್ತಾದಲ್ಲಿ ನಡೆಯುವ ೫ನೇ ಭಾರತೀಯ ಅಂತರರಾಷ್ಟ್ರೀಯ ವಿಜ್ಞಾನ ಮೇಳದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಸಿ.ಎಫ್‌.ಟಿ.ಆರ್.ಐ ಸಭಾಂಗಣದಲ್ಲಿ ನಡೆಸಿದ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್,
ಈ ಬಾರಿ ಕಲ್ಕತ್ತಾದಲ್ಲಿ ನಡೆಯುವ ವಿಜ್ಞಾನ ಮೇಳಕ್ಕೆ ದೇಶ ವಿದೇಶಗಳಿಂದ ಸುಮಾರು ೧೨ ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಈ ಸಮ್ಮೇಳನದಲ್ಲಿ ೧೫೦೦ ಯುವ ವಿದ್ಯಾರ್ಥಿ ವಿಜ್ಞಾನಿಗಳನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನದಲ್ಲಿ ೨೮ ಪ್ರಮುಖ ಗೋಷ್ಠಿಗಳು ನಡೆಯಲಿದ್ದು, ಇದಕ್ಕಾಗಿ ಕಲ್ಕತ್ತಾದ ವಿಜ್ಞಾನ ಗ್ರಾಮ ನಿರ್ಮಾಣವಾಗಿದೆ. ಎಂದ ಸಚಿವರು ೪ ದಿನದ ಈ ವಿಜ್ಞಾನ ಮೇಳಕ್ಕೆ ಸುಮಾರು ೧೦ ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ ಎಂದರು.
ಈ ವಿಜ್ಞಾನ ಮೇಳದಲ್ಲಿ ಮಕ್ಕಳಿಗೆ ನೂತನ ಆವಿಷ್ಕಾರಗಳ ಪರಿಚಯ, ಜೊತೆಗೆ ನುರಿತ ವಿಜ್ಞಾನಿಗಳ ಜೊತೆ ಸಂವಾದ ಇರುತ್ತದೆ.
ಈ ವಿಜ್ಞಾನ ಮೇಳದಲ್ಲಿ ಗ್ರಾಮಾಂತರ ಮಟ್ಟಕ್ಕೂ ತಂತ್ರಜ್ಞಾನ ವಿಜ್ಞಾನವನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದ ಕೇಂದ್ರ ಸಚಿವರು,
ದೇಶದ ಎಲ್ಲಾ ಜನರಿಗೂ ಆರೋಗ್ಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನೂತನವಾಗಿ ೧೫೭ ಮೆಡಿಕಲ್ ಕಾಲೇಜ ಅನ್ನು ಸ್ಥಾಪನೆ ಮಾಡಲು ಈಗಾಗಲೇ ನಿರ್ಧರಿಸಿದ್ದೇವೆ‌ ಎಂದ ಅವರು.
ದೇಶದಲ್ಲಿ ರಾಜಕೀಯ ವಿರೋಧಿಗಳ ಗುರಿಯಾಗಿಸಿಕೊಂಡು ಐಟಿ,ಇಡಿ ದಾಳಿ ನಡೆಸಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು.‌‌ ಇದೊಂದು ಬೇಸ್ ಲೆಸ್ ಅಲಿಗೇಷನ್, ಸ್ವತಂತ್ರವಾಗಿ ಸ್ಥಾಪಿತ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿವೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದೇ ವ್ಯರ್ಥ ಎಂದರು.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.