ETV Bharat / state

ಕಾವೇರಿ, ಕಪಿಲಾ ನದಿಯಲ್ಲಿ ಪ್ರವಾಹ: ತ್ರಿವೇಣಿ ಸಂಗಮದಲ್ಲಿ ಸೇತುವೆಗಳು ಜಲಾವೃತ

ಕೆ.ಆರ್.ಎಸ್. ನ 34 ಗೇಟ್​ಗಳಿಂದ 1 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ. ಜೊತೆಗೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್​ ನೀರನ್ನು ಸಹ ರಿಲೀಸ್​ ಡಿರುವುದರಿಂದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ಸೇತುವೆಗಳು ಮುಳುಗಿವೆ.

author img

By

Published : Aug 11, 2019, 2:14 PM IST

Updated : Aug 11, 2019, 3:35 PM IST

flooding-in-kaveri-and-kapila-river

ಮೈಸೂರು: ಕಪಿಲಾ ಮತ್ತು ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಟ್ಟ ಪರಿಣಾಮ ತಲಕಾಡು ಸೇತುವೆ ಮುಳುಗಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ಕಾವೇರಿ ಮತ್ತು ಕಪಿಲಾ ನದಿಯಲ್ಲಿ ಪ್ರವಾಹ

ಶನಿವಾರ ಕೆ.ಆರ್.ಎಸ್. ನ 34 ಗೇಟ್​ಗಳಿಂದ 1 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು. ಈ ಕಡೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್​ ನೀರನ್ನು ಬಿಡಲಾಗಿದೆ. ಹೀಗಾಗಿ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಲಕಾಡು ಹಾಗೂ ಟಿ. ನರಸೀಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಹೆಮ್ಮಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನರು ಹಾಗೂ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.

ಟಿ.‌ನರಸೀಪುರ ಬಳಿಯ ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಭೀತಿಯಲ್ಲಿದೆ. ಸಂಗಮದ ಹಲವಾರು ದೇವಾಲಯಗಳು ಮುಳುಗುವ ಭೀತಿ ಇದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.

ಮೈಸೂರು: ಕಪಿಲಾ ಮತ್ತು ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಟ್ಟ ಪರಿಣಾಮ ತಲಕಾಡು ಸೇತುವೆ ಮುಳುಗಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ಕಾವೇರಿ ಮತ್ತು ಕಪಿಲಾ ನದಿಯಲ್ಲಿ ಪ್ರವಾಹ

ಶನಿವಾರ ಕೆ.ಆರ್.ಎಸ್. ನ 34 ಗೇಟ್​ಗಳಿಂದ 1 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು. ಈ ಕಡೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 1 ಲಕ್ಷದ 20 ಸಾವಿರ ಕ್ಯೂಸೆಕ್​ ನೀರನ್ನು ಬಿಡಲಾಗಿದೆ. ಹೀಗಾಗಿ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ತಲಕಾಡು ಹಾಗೂ ಟಿ. ನರಸೀಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಹೆಮ್ಮಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಜನರು ಹಾಗೂ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ.

ಟಿ.‌ನರಸೀಪುರ ಬಳಿಯ ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಭೀತಿಯಲ್ಲಿದೆ. ಸಂಗಮದ ಹಲವಾರು ದೇವಾಲಯಗಳು ಮುಳುಗುವ ಭೀತಿ ಇದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.

Intro:ಮೈಸೂರು: ಕಪಿಲ ಮತ್ತು ಕಾವೇರಿ ನದಿಗೆ ಅಧಿಕ ನೀರನ್ನು ಬಿಟ್ಟ ಪರಿಣಾಮ ತಲಕಾಡು ಸೇತುವೆ ಮುಳುಗಿದ್ದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. Body:




ನೆನ್ನೆ ಕೆ.ಆರ್.ಎಸ್. ಇಂದ ೩೪ ಗೇಟ್ ಗಳಿಂದ ೧ ಲಕ್ಷ ಕ್ಯೂಸೆಟ್ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಲಾಗಿದ್ದು ಈ ಕಡೆ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ೧ ಲಕ್ಷದ ೨೦ ಸಾವಿರ ನೀರನ್ನು ಬಿಡಲಾಗಿದ್ದು ಇದರಿಂದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ತಲಕಾಡು ಹಾಗೂ ಟಿ. ನರಸೀಪುರ ಸಂಪರ್ಕ ಕಡಿತಗೊಂಡು ಹೆಮ್ಮಿಗೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ಜನರಿಗೆ ಹಾಗೂ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಗಿದ್ದು ಟಿ.‌ನರಸೀಪುರ ಬಳಿಯ ತ್ರಿವೇಣಿ ಸಂಗಮದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಕುಸಿಯುವ ಭೀತಿಯಲ್ಲಿದ್ದು ಸಂಗಮದ ಹಲವಾರು ದೇವಾಲಯಗಳು ಮುಳುಗುವ ಭೀತಿ ಇದ್ದು ನದಿ ಪಾತ್ರದ ಗ್ರಾಮಗಳಲ್ಲಿ ಆತಂಕ ಉಂಟಾಗಿದೆ.Conclusion:
Last Updated : Aug 11, 2019, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.