ETV Bharat / state

ಪ್ರೀತಿಸಿ ವಿವಾಹವಾದ ಮಗಳು: ನಂಜನಗೂಡು ನೋಂದಣಿ ಕಚೇರಿಯಲ್ಲೇ ಜುಟ್ಟು ಹಿಡಿದು ಎಳೆದೊಯ್ಯಲು ಯತ್ನಿಸಿದ ತಂದೆ!

author img

By

Published : Dec 21, 2021, 9:34 AM IST

Updated : Dec 21, 2021, 12:55 PM IST

ಮಗಳ ಮಾಂಗಲ್ಯ ಸರ ಕಿತ್ತುಹಾಕಿದ ತಂದೆ, ಆಕೆಯ ಜುಟ್ಟು ಹಿಡಿದು ಎಳೆದಾಡಿ ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ತಂದೆಯ ಈ ಯತ್ನ ವಿಫಲವಾಗಿದೆ. ನಂಜನಗೂಡಲ್ಲಿ ಈ ಪ್ರಕರಣ ನಡೆದಿದೆ.

ನಂಜನಗೂಡು ನೋಂದಣಿ ಕಚೇರಿಯಲ್ಲೇ ಜುಟ್ಟು ಹಿಡಿದು ಎಳೆದೊಯ್ಯಲು ಯತ್ನಿಸಿದ ತಂದೆ!
ನಂಜನಗೂಡು ನೋಂದಣಿ ಕಚೇರಿಯಲ್ಲೇ ಜುಟ್ಟು ಹಿಡಿದು ಎಳೆದೊಯ್ಯಲು ಯತ್ನಿಸಿದ ತಂದೆ!

ಮೈಸೂರು: ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನೇ ಮದುವೆಯಾದ ಯುವತಿಯನ್ನ ಹೆತ್ತ ತಂದೆಯೇ ಉಪನೋಂದಣಿ ಕಚೇರಿಯಿಂದ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ ಘಟನೆ ನಂಜನಗೂಡಲ್ಲಿ ಸೋಮವಾರ ನಡೆದಿದೆ.

ಮಗಳ ಮಾಂಗಲ್ಯ ಸರ ಕಿತ್ತುಹಾಕಿದ ತಂದೆ, ಆಕೆಯ ಜುಟ್ಟು ಹಿಡಿದು ಎಳೆದಾಡಿ ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ತಂದೆಯ ಯತ್ನ ವಿಫಲವಾಗಿದೆ. ತಂದೆಗೆ ಡೋಂಟ್ ಕೇರ್ ಎಂದ ಮಗಳು, ಸಾರ್ವಜನಿಕರ ನೆರವಿನಿಂದ ತಪ್ಪಿಸಿಕೊಂಡು ಪ್ರಿಯತಮನನ್ನ ಸೇರಿಕೊಂಡಿದ್ದಾಳೆ. ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕೆಂದು ಸಾರ್ವಜನಿಕವಾಗೇ ಅವಲತ್ತುಕೊಂಡಿದ್ದಾಳೆ.

ನಂಜನಗೂಡು ನೋಂದಣಿ ಕಚೇರಿಯಲ್ಲೇ ಜುಟ್ಟು ಹಿಡಿದು ಎಳೆದೊಯ್ಯಲು ಯತ್ನಿಸಿದ ತಂದೆ!

ನಂಜನಗೂಡು ತಾಲೂಕು ಹರತಲೆ ಗ್ರಾಮದ ಚೈತ್ರ ಎಂಬುವಳಿಗೆ ಆಕೆಯ ತಂದೆ ಈ ರೀತಿ ಹಿಂಸೆ ಮಾಡಿದ್ದಾರೆ. ಹರತಲೆ ಗ್ರಾಮದ ಚೈತ್ರ ಹಾಗೂ ಹಲ್ಲರೆ ಗ್ರಾಮದ ಮಹೇಂದ್ರ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತಿದ್ದು, ಡಿಸೆಂಬರ್ 8 ರಂದು ಮದುವೆ ಆಗಿದ್ದರು. ಅದರಂತೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೋಂದಾಯಿಸಿಕೊಳ್ಳಲು ಬಂದಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಸ್ನಾನಕ್ಕೂ ಬಿಡಲಿಲ್ವಾ ಪೊಲೀಸಪ್ಪ?.. ಜಗ್ ಹಿಡಿದೇ ಪೊಲೀಸ್ ಠಾಣೆಗೆ ಬಂದ ರೌಡಿಶೀಟರ್!

ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರ ತಂದೆ ಬಸವರಾಜ ನಾಯ್ಕ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಹಾಕಿ ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಇಂತಹ ಯತ್ನ ನಡೆದಿದೆ. ತಂದೆಯ ಕೈಯಿಂದ ಬಿಡಿಸಿಕೊಳ್ಳಲು ಚೈತ್ರ ಹರಸಾಹಸ ನಡೆಸಿದ್ದಾಳೆ. ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಚೈತ್ರಾಳನ್ನ ಬಿಡಿಸಿದ್ದಾರೆ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಮೈಸೂರು: ಪೋಷಕರ ವಿರೋಧ ಲೆಕ್ಕಿಸದೆ ಪ್ರೀತಿಸಿದ ಯುವಕನನ್ನೇ ಮದುವೆಯಾದ ಯುವತಿಯನ್ನ ಹೆತ್ತ ತಂದೆಯೇ ಉಪನೋಂದಣಿ ಕಚೇರಿಯಿಂದ ಬಲವಂತವಾಗಿ ಎಳೆದುಕೊಂಡು ಹೋಗಲು ಯತ್ನಿಸಿದ ಘಟನೆ ನಂಜನಗೂಡಲ್ಲಿ ಸೋಮವಾರ ನಡೆದಿದೆ.

ಮಗಳ ಮಾಂಗಲ್ಯ ಸರ ಕಿತ್ತುಹಾಕಿದ ತಂದೆ, ಆಕೆಯ ಜುಟ್ಟು ಹಿಡಿದು ಎಳೆದಾಡಿ ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ತಂದೆಯ ಯತ್ನ ವಿಫಲವಾಗಿದೆ. ತಂದೆಗೆ ಡೋಂಟ್ ಕೇರ್ ಎಂದ ಮಗಳು, ಸಾರ್ವಜನಿಕರ ನೆರವಿನಿಂದ ತಪ್ಪಿಸಿಕೊಂಡು ಪ್ರಿಯತಮನನ್ನ ಸೇರಿಕೊಂಡಿದ್ದಾಳೆ. ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕೆಂದು ಸಾರ್ವಜನಿಕವಾಗೇ ಅವಲತ್ತುಕೊಂಡಿದ್ದಾಳೆ.

ನಂಜನಗೂಡು ನೋಂದಣಿ ಕಚೇರಿಯಲ್ಲೇ ಜುಟ್ಟು ಹಿಡಿದು ಎಳೆದೊಯ್ಯಲು ಯತ್ನಿಸಿದ ತಂದೆ!

ನಂಜನಗೂಡು ತಾಲೂಕು ಹರತಲೆ ಗ್ರಾಮದ ಚೈತ್ರ ಎಂಬುವಳಿಗೆ ಆಕೆಯ ತಂದೆ ಈ ರೀತಿ ಹಿಂಸೆ ಮಾಡಿದ್ದಾರೆ. ಹರತಲೆ ಗ್ರಾಮದ ಚೈತ್ರ ಹಾಗೂ ಹಲ್ಲರೆ ಗ್ರಾಮದ ಮಹೇಂದ್ರ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತಿದ್ದು, ಡಿಸೆಂಬರ್ 8 ರಂದು ಮದುವೆ ಆಗಿದ್ದರು. ಅದರಂತೆ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನ ನೋಂದಾಯಿಸಿಕೊಳ್ಳಲು ಬಂದಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಸ್ನಾನಕ್ಕೂ ಬಿಡಲಿಲ್ವಾ ಪೊಲೀಸಪ್ಪ?.. ಜಗ್ ಹಿಡಿದೇ ಪೊಲೀಸ್ ಠಾಣೆಗೆ ಬಂದ ರೌಡಿಶೀಟರ್!

ನೋಂದಣಿ ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರ ಬರುತ್ತಿದ್ದಂತೆಯೇ ಚೈತ್ರ ತಂದೆ ಬಸವರಾಜ ನಾಯ್ಕ ಮಗಳ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನ ಕಿತ್ತುಹಾಕಿ ಜುಟ್ಟು ಹಿಡಿದು ಎಳೆದಾಡುತ್ತಾ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಇಂತಹ ಯತ್ನ ನಡೆದಿದೆ. ತಂದೆಯ ಕೈಯಿಂದ ಬಿಡಿಸಿಕೊಳ್ಳಲು ಚೈತ್ರ ಹರಸಾಹಸ ನಡೆಸಿದ್ದಾಳೆ. ಈ ವೇಳೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಚೈತ್ರಾಳನ್ನ ಬಿಡಿಸಿದ್ದಾರೆ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

Last Updated : Dec 21, 2021, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.