ETV Bharat / state

ಗಂಜಿ ಕೇಂದ್ರದಲ್ಲಿದ್ದ ನೆರೆ ಸಂತ್ರಸ್ತೆಗೆ ವರವಾದ ಈಟಿವಿ ಭಾರತ್ ರಿಪೋರ್ಟ್​: ವಾಪಸ್ ಬಂತು ಪರಿಹಾರ ಚೆಕ್​ - MLA order to return componstion check to Flood victim

ನೆರೆ ಹಾವಳಿ ಸಂದರ್ಭ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ಮಹಿಳೆಗೆ ಸರ್ಕಾರದಿಂದ ನೀಡಲಾದ ಪರಿಹಾರದ ಚೆಕ್​ನ್ನು ಅಧಿಕಾರಿಗಳು ವಾಪಸ್ ಪಡೆದ ಬಗ್ಗೆ ಈಟಿವಿ ಭಾರತ್​ನಲ್ಲಿ ವರದಿ ಪ್ರಸಾರವಾಗಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕ ಹರ್ಷವರ್ಧನ್​ ಅವರು ಸಂತ್ರಸ್ತೆಗೆ ಹಣ ವಾಪಸ್ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಟಿವಿ ಭಾರತ್ ವರದಿಗೆ ಸ್ಪಂದನೆ
author img

By

Published : Oct 18, 2019, 5:40 PM IST

ಮೈಸೂರು: ನೆರೆ ಹಾವಳಿ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಗೆ ನೀಡಲಾಗಿದ್ದ ಪರಿಹಾರ ಚೆಕ್​ನ್ನು ಅಧಿಕಾರಿಗಳು ವಾಪಸ್ ಪಡೆದ ಘಟನೆ ನಂಜನಗೂಡಿನಲ್ಲಿ ನಡೆದಿತ್ತು. ಈ ಕುರಿತು ಈಟಿವಿ ಭಾರತ್​ನಲ್ಲಿ ವರದಿ ಪ್ರಸಾರವಾಗಿದ್ದ ವರದಿ ಸದ್ದು ಮಾಡಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಸಂತ್ರಸ್ತೆಗೆ ಪುನಃ ಚೆಕ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.

ಪ್ರವಾಹದಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ನಂಜನಗೂಡಿನ ಚಂದ್ರಮ್ಮ ಎಂಬುವರಿಗೆ, 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್​ನ್ನು ಸರ್ಕಾರದ ಪರವಾಗಿ ನೀಡಲಾಗಿತ್ತು. ಆದರೆ ಚೆಕ್ ನೀಡಿದ್ದ ಅಧಿಕಾರಿಗಳು ಮಾರನೇ ದಿನವೇ ಅದನ್ನು ವಾಪಸ್ ಪಡೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡಿದ್ದ ಚಂದ್ರಮ್ಮ, ಕಂಡ ಕಂಡವರ ಬಳಿ ತನಗೆ ನೀಡಿದ್ದ ಚೆಕ್ ವಾಪಸ್ ಪಡೆದ ಅಧಿಕಾರಿಗಳು, 2 ತಿಂಗಳಾದರೂ ಹಿಂತಿರುಗಿಸಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಅಕ್ಟೋಬರ್ 13ರಂದು ಈಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾಗಿತ್ತು.

ಹೆಚ್ಚಿನ ಓದಿಗಾಗಿ: ನೀಡಿದ್ದ 5 ಲಕ್ಷ ಪರಿಹಾರದ ಚೆಕ್​​​ ವಾಪಸ್​​​ ಪಡೆದ ಅಧಿಕಾರಿಗಳು: ಸಂಕಷ್ಟದಲ್ಲಿ ಮಹಿಳೆ

ಈ ವರದಿಯನ್ನು ಗಮನಿಸಿದ್ದ ಶಾಸಕ ಹರ್ಷವರ್ಧನ್ ಅವರು, ತಕ್ಷಣ ಈ ಬಗ್ಗೆ ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್​ರಿಂದ ಮಾಹಿತಿ ಪಡೆದರು. ಅಲ್ಲದೆ, ಚಂದ್ರಮ್ಮನಿಗೆ ಬ್ಯಾಂಕ್ ಖಾತೆ ಮಾಡಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಒದಗಿಸಿ, ಅವರಿಗೆ ಬ್ಯಾಂಕ್ ಖಾತೆಯಾದ ನಂತರ ಚೆಕ್ ಹಣವನ್ನು ಆ ಖಾತೆಗೆ ವಾಪಸ್ ನೀಡುವಂತೆ ಸೂಚಿಸಿದ್ದಾರೆ.

ಮೈಸೂರು: ನೆರೆ ಹಾವಳಿ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಗೆ ನೀಡಲಾಗಿದ್ದ ಪರಿಹಾರ ಚೆಕ್​ನ್ನು ಅಧಿಕಾರಿಗಳು ವಾಪಸ್ ಪಡೆದ ಘಟನೆ ನಂಜನಗೂಡಿನಲ್ಲಿ ನಡೆದಿತ್ತು. ಈ ಕುರಿತು ಈಟಿವಿ ಭಾರತ್​ನಲ್ಲಿ ವರದಿ ಪ್ರಸಾರವಾಗಿದ್ದ ವರದಿ ಸದ್ದು ಮಾಡಿತ್ತು. ವರದಿಗೆ ಸ್ಪಂದಿಸಿರುವ ಸ್ಥಳೀಯ ಶಾಸಕರು ಸಂತ್ರಸ್ತೆಗೆ ಪುನಃ ಚೆಕ್ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ.

ಪ್ರವಾಹದಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿದ್ದ ನಂಜನಗೂಡಿನ ಚಂದ್ರಮ್ಮ ಎಂಬುವರಿಗೆ, 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್​ನ್ನು ಸರ್ಕಾರದ ಪರವಾಗಿ ನೀಡಲಾಗಿತ್ತು. ಆದರೆ ಚೆಕ್ ನೀಡಿದ್ದ ಅಧಿಕಾರಿಗಳು ಮಾರನೇ ದಿನವೇ ಅದನ್ನು ವಾಪಸ್ ಪಡೆದುಕೊಂಡು ಹೋಗಿದ್ದರು. ಇದರಿಂದ ಆತಂಕಗೊಂಡಿದ್ದ ಚಂದ್ರಮ್ಮ, ಕಂಡ ಕಂಡವರ ಬಳಿ ತನಗೆ ನೀಡಿದ್ದ ಚೆಕ್ ವಾಪಸ್ ಪಡೆದ ಅಧಿಕಾರಿಗಳು, 2 ತಿಂಗಳಾದರೂ ಹಿಂತಿರುಗಿಸಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಅಕ್ಟೋಬರ್ 13ರಂದು ಈಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾಗಿತ್ತು.

ಹೆಚ್ಚಿನ ಓದಿಗಾಗಿ: ನೀಡಿದ್ದ 5 ಲಕ್ಷ ಪರಿಹಾರದ ಚೆಕ್​​​ ವಾಪಸ್​​​ ಪಡೆದ ಅಧಿಕಾರಿಗಳು: ಸಂಕಷ್ಟದಲ್ಲಿ ಮಹಿಳೆ

ಈ ವರದಿಯನ್ನು ಗಮನಿಸಿದ್ದ ಶಾಸಕ ಹರ್ಷವರ್ಧನ್ ಅವರು, ತಕ್ಷಣ ಈ ಬಗ್ಗೆ ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್​ರಿಂದ ಮಾಹಿತಿ ಪಡೆದರು. ಅಲ್ಲದೆ, ಚಂದ್ರಮ್ಮನಿಗೆ ಬ್ಯಾಂಕ್ ಖಾತೆ ಮಾಡಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಒದಗಿಸಿ, ಅವರಿಗೆ ಬ್ಯಾಂಕ್ ಖಾತೆಯಾದ ನಂತರ ಚೆಕ್ ಹಣವನ್ನು ಆ ಖಾತೆಗೆ ವಾಪಸ್ ನೀಡುವಂತೆ ಸೂಚಿಸಿದ್ದಾರೆ.

Intro:ಮೈಸೂರು: ನೆರೆಪ್ರವಾಹದ ಸಂದರ್ಭದಲ್ಲಿ ಗಂಜಿಕೇಂದ್ರದಲ್ಲಿ ಗಂಡನನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಸರ್ಕಾರದಿಂದ ನೀಡಾಲಾದ ೫ ಲಕ್ಷ ಪರಿಹಾರ ಚೆಕ್ ಅನ್ನು ಪುನಃ ಅಧಿಕಾತರಿಗಳು ವಾಪಸ್ ಪಡೆದಿದ್ದು ,ಈ ಬಗ್ಗೆ ಈ ಟಿವಿ ಭಾರತ್ ನಲ್ಲಿ ವರದಿ ಪ್ರಸಾರವಾದ ಹಿನ್ನಲೆಯಲ್ಲಿ ಸ್ಥಳೀಯ ಶಾಸಕ ವರದಿಗೆ ಸ್ಪಂದಿಸಿ ಪುನಃ ಚೆಕ್ ಕೊಡಿಸುವ ವ್ಯವಸ್ಥೆ ಮಾಡಿದ್ದಾಗಿ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.


Body:ಅಕ್ಟೋಬರ್ ೧೩ ರಂದು ನಿರಾಶ್ರಿತೆಯೆ ಚೆಕ್ ವಾಪಸ್ ಪಡೆದು ೨ ತಿಂಗಳಾದರು ಅಧಿಕಾರಿಗಳು ವಾಪಸ್ ನೀಡಿಲ್ಲ ಎಂದು ಈ ಟಿವಿ ಭಾರತ್ ನಲ್ಲಿ ನಂಜನಗೂಡಿನ ನೆರೆ ಪ್ರವಾಹದ ಸಂದರ್ಭದಲ್ಲಿ ತನ್ನ ಗಂಡ ಚಿಕ್ಕಣ್ಣ ನನ್ನು ಗಂಜಿಕೇಂದ್ರದಲ್ಲಿ ಕಳೆದುಕೊಂಡಿದ್ದ ಚಂದ್ರಮ್ಮನಿಗೆ ೫ ಲಕ್ಷ ರೂಪಾಯಿ ಪರಿಹಾರದ ಚೆಕ್ ನನ್ನು ಸರ್ಕಾರದ ಪರವಾಗಿ ನೀಡಲಾಗಿತ್ತು. ಆದರೆ ಈ ಚೆಕ್ ನನ್ನು , ನೀಡಿದ್ದ ಅಧಿಕಾರಿಗಳು ಮಾರನೆ ದಿನ ವಾಪಸ್ ಪಡೆದು ಹೋಗಿದ್ದರು. ಆದರೆ ಇಲ್ಲಿಯವರೆಗೂ ೨ ತಿಂಗಳು ಆದರೂ ಆ ಚಂದ್ರಮ್ಮ ನಿಗೆ ಚೆಕ್ ನೀಡಿರಲ್ಲಿಲ್ಲ. ಇದರಿಂದ ಗಾಂಭರಿಯಾದ ಚಂದ್ರಮ್ಮ ಕಂಡಕಂಡವರ ಬಳಿ ತನ್ನಗೆ ನೀಡಿದ್ದ ಚೆಕ್ ವಾಪಸ್ ಪಡೆದ ಅಧಿಕಾರಿಗಳು ಚೆಕ್ ನೀಡಿಲ್ಲ ಎಂದು ಸಮಸ್ಯೆಯನ್ನು ಹೇಳಿಕೊಡಿದ್ದಳು, ಜೊತೆಗೆ ಈಕೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದು ಈಕೆಗೆ ಬೇರೆ ಯಾರು ಇಲ್ಲ. ಈ ಬಗ್ಗೆ ವರದಿ ಪ್ರಸಾರ ಮಾಡಿ ಸ್ಥಳೀಯ ಬಿಜೆಪಿ ಶಾಸಕ ಹರ್ಷವರ್ಧನ್ ಅವರಿಗೆ ಈ ವಿಚಾರವನ್ನು ಗಮನಕ್ಕೆ ತಂದಿದ್ದು ಈ ಬಗ್ಗೆ ತಕ್ಷಣ ಸ್ಥಳೀಯ ತಹಶಿಲ್ದಾರ್ ಮಹೇಶ್ ಕುಮಾರ್ ಅವರಿಂದ ಮಾಹಿತಿ ಪಡೆದು ಚಂದ್ರಮ್ಮನಿಗೆ ಬ್ಯಾಂಕ್ ಅಕೌಂಟ್ ಖಾತೆಯನ್ನು ಮಾಡಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ಒದಗಿಸಿ ಆಕೆಗೆ ಬ್ಯಾಂಕ್ ಖಾತೆಯಾದ ನಂತರ ವಾಪಸ್ ಚೆಕ್ ಹಣವನ್ನು ಚಂದ್ರಮ್ಮನ ಖಾತೆಗೆ ನೀಡುವಂತೆ ತಿಳಿಸಿದ್ದರು. ನೆರೆ ಪ್ರವಾಹದ ಸಂದರ್ಭದಲ್ಲಿ ಗಂಜಿಕೇಂದ್ರದಲ್ಲಿ ಗಂಡನನ್ನು ಕಳೆದುಕೊಂಡು ಅದರಿಂದ ಬಂದ ಪರಿಹಾರದ ೫ ಲಕ್ಷ ಚೆಕ್ ಅನ್ನು ಕಳೆದುಕೊಂಡು ಕಂಗಾಲು ಅಗಿದ್ದ ನಿರಾಶ್ರಿತೆ ಚಂದ್ರಮ್ಮನಿಗೆ ಪುನಃ ಶಾಸಕರ ಸಕಾರದಿಂದ ೫ ಲಕ್ಷ ಹಣದ ಚೆಕ್ ಅನ್ನು ವಾಪಸ್ ಕೊಡಿಸುವ ವವ್ಯಸ್ಥೆ ಮಾಡಿಸಿದ್ದು ಈ ಟಿವಿ ಭಾರತ್ ವರದಿ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.