ಮೈಸೂರು: ಅರಮನೆ ಆವರಣದಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಇಂದು ತಾಲೀಮು ನಡೆಸಿತು.
ಇಂದು ಬೆಳಗ್ಗೆ ಅರಮನೆ ಆವರಣದಲ್ಲಿ ಗಜಪಡೆ ತಾಲೀಮು ನಡೆಸಿದ್ದು , ಈ ಬಾರಿ ಅರಮನೆಗೆ ಸೀಮಿತವಾಗಿರುವ ಸರಳ ದಸರಾದಲ್ಲಿ ಗಜಪಡೆಯು ಅರಮೆಯ ಆವರಣದಲ್ಲಿ ತಾಲೀಮು ನಡೆಸಿತು. ಅಂಬಾರಿ ಹೊರುವ ಅಭಿಮನ್ಯು, ವಿಕ್ರಮ, ವಿಜಯ, ಗೋಪಿ ಹಾಗೂ ಕಾವೇರಿ ಆನೆಗಳು ಸಾಲಾಗಿ ಅರಮನೆಯನ್ನು ಒಂದು ಸುತ್ತು ಹಾಕಿದವು.
ಈ ಬಾರಿಯ ಸರಳ ಹಾಗೂ ಸಾಂಪ್ರದಾಯಿಕ ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಆನೆಗಳ ತಾಲೀಮು, ಕುಶಾಲ ತೋಪು ತಾಲೀಮು ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.