ETV Bharat / state

ಮೈಸೂರಿನ ಫುಟ್ಸಲ್ ಕ್ರೀಡಾಪಟು ರೋಮ್​ನಲ್ಲಿ ಸಾವು

author img

By

Published : Aug 11, 2021, 3:44 PM IST

ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಸಾಧಿಸುವ ಛಲ ಹೊಂದಿದ್ದ ಇವರು ಉತ್ತಮ ಕ್ರೀಡಾಪಟುವಾಗಿ ಬೆಳೆದಿದ್ದರು. ಕರ್ನಾಟಕ ಮತ್ತು ಕೇರಳ ಫುಟ್ಸಲ್ ತಂಡಗಳನ್ನು ಪ್ರತಿನಿಧಿಸಿದ್ದಲ್ಲದೆ ಇಂಡಿಯನ್ ಫುಟ್ಸಲ್ ಜರ್ಸಿಯನ್ನೂ ಧರಿಸಿ, 2016ರಲ್ಲಿ ಗೋವಾದಲ್ಲಿ ನಡೆದ ಪ್ರೀಮಿಯರ್ ಫುಟ್ಸಲ್ ಲೀಗ್​ನಲ್ಲೂ ಆಡಿದ್ದರು..

Yashawanth Kumar
ಯಶವಂತ್ ಕುಮಾರ್

ಮೈಸೂರು : ಭಾರತದ ಅತ್ಯುತ್ತಮ ಫುಟ್ಸಲ್ ಗೋಲ್ ಕೀಪರ್ ಆಗಬೇಕೆಂಬ ಗುರಿ ಹೊಂದಿದ್ದ ನಗರದ ಪ್ರತಿಭಾನ್ವಿತ ಯುವ ಕ್ರೀಡಾಪಟು ದೂರದ ಇಟಲಿ ದೇಶದ ರೋಮ್ ನಗರದಲ್ಲಿ ಸಾವಿಗೀಡಾಗಿದ್ದಾನೆ.

ಮೈಸೂರಿನ ಎನ್ ಆರ್ ಮೊಹಲ್ಲಾದ ನಿವಾಸಿ, ಕರಕುಶಲ ಕಲಾವಿದ ಎನ್.ಕುಮಾರ್ ಹಾಗೂ ಎನ್.ರೂಪಾ ಎಂಬ ದಂಪತಿ ಪುತ್ರ ಯಶವಂತ್‌ ಕುಮಾರ್(23) ಇಟಲಿಯಲ್ಲಿ ಮೃತಪಟ್ಟಿರುವ ಫುಟ್ಸಲ್ ಆಟಗಾರ.

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ,`ಸೀರೀ ಬಿ ಫುಟ್ಸಲ್ ಲೀಗ್​ನಲ್ಲಿ `ಕ್ಯಾಲ್ಸಿಯೊ ಸಿ 5 ತಂಡದೊಂದಿಗೆ ಭಾಗವಹಿಸಲು ಕಳೆದ 4 ತಿಂಗಳ ಹಿಂದೆಯಷ್ಟೇ ಇಟಲಿಗೆ ತೆರಳಿದ್ದ. ರೋಮ್​ನಲ್ಲಿನ ಜಲಪಾತವೊಂದರಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ದೂರವಾಣಿಯಲ್ಲಿ ಯಶವಂತ ಕುಮಾರ್ ತಂದೆ ಎನ್.ಕುಮಾರ್ ಮಾತನಾಡಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಮಗ ಯಶವಂತ್ ಕುಮಾರ್ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ, ತಂಡದ ಕ್ಯಾಪ್ಟನ್​ಗೆ ಮೆಸೇಜ್ ಕಳುಹಿಸಿದ್ದೆವು. ಆದರೆ, ಆತ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದನ್ನು ಆ. 6ರಂದು ನಮಗೆ ತಿಳಿಸಿದ್ದರಾದರೂ ಖಚಿತಪಡಿಸಿರಲಿಲ್ಲ.

ಪೊಲೀಸರು ಮರುದಿನ ಬೆರಳಚ್ಚಿನ ಆಧಾರದಲ್ಲಿ ದೃಢಪಡಿಸಿದರು. ಆಗಸ್ಟ್ 31ರವರೆಗೂ ಅಲ್ಲಿಗೆ ವಿಮಾನ ಸೌಲಭ್ಯವಿಲ್ಲ. ಅಲ್ಲದೆ ಮೃತದೇಹವನ್ನು ಮೀನುಗಳು ತಿಂದಿರುವುದರಿಂದ ಕೊಳೆತ ಸ್ಥಿತಿ ತಲುಪಿದೆ. ಹಾಗಾಗಿ, ಅಲ್ಲಿರುವ ಕನ್ನಡಿಗರೇ ಅಂತ್ಯಕ್ರಿಯೆ ನೆರವೇರಿಸಿ, ಅಸ್ತಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಯಶವಂತ್ ರೋಚಕ ಕ್ರೀಡಾ ಹಾದಿ

ಫುಟ್ಬಾಲ್ ಮಾದರಿಯ ಫುಟ್ಸಲ್ ಕ್ರೀಡೆ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಫುಟ್ಬಾಲ್ ರೂಪಾಂತರ ಕ್ರೀಡೆ ಫುಟ್ಸಲ್ ಒಂದು ಒಳಾಂಗಣ ಕ್ರೀಡೆ. ಗೋಲ್ ಕೀಪರ್ ಸೇರಿ ಒಂದು ತಂಡದಲ್ಲಿ ಐವರು ಆಟಗಾರರು ಮಾತ್ರ ಇರುತ್ತಾರೆ. ಈ ವಿಶೇಷ ಕ್ರೀಡೆಯ ಬಗ್ಗೆ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಆಸಕ್ತಿ ಬೆಳೆಸಿಕೊಂಡಿದ್ದ ಯಶವಂತ್, ನಂತರದ ದಿನಗಳಲ್ಲಿ ತರಬೇತಿ ಪಡೆದಿದ್ದರು.

ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಸಾಧಿಸುವ ಛಲ ಹೊಂದಿದ್ದ ಇವರು ಉತ್ತಮ ಕ್ರೀಡಾಪಟುವಾಗಿ ಬೆಳೆದಿದ್ದರು. ಕರ್ನಾಟಕ ಮತ್ತು ಕೇರಳ ಫುಟ್ಸಲ್ ತಂಡಗಳನ್ನು ಪ್ರತಿನಿಧಿಸಿದ್ದಲ್ಲದೆ ಇಂಡಿಯನ್ ಫುಟ್ಸಲ್ ಜರ್ಸಿಯನ್ನೂ ಧರಿಸಿ, 2016ರಲ್ಲಿ ಗೋವಾದಲ್ಲಿ ನಡೆದ ಪ್ರೀಮಿಯರ್ ಫುಟ್ಸಲ್ ಲೀಗ್​ನಲ್ಲೂ ಆಡಿದ್ದರು.

ಒಪ್ಪಂದದೊಂದಿಗೆ ಇಟಲಿಗೆ ಹೋಗಿದ್ದರು

ಬೆಂಗಳೂರು ಟ್ರಯಲ್ಸ್​ನಲ್ಲಿ ಭಾಗವಹಿಸಿದ್ದ ಚೆನ್ನೈ, ಮುಂಬೈ, ಕೋಲ್ಕತಾ, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯ 320 ಆಟಗಾರರಲ್ಲಿ ಆಯ್ಕೆಯಾದ 40 ಸದಸ್ಯರ ಪಟ್ಟಿಯಲ್ಲಿ ಯಶವಂತ್ ಕುಮಾರ್ ಸ್ಥಾನ ಪಡೆದಿದ್ದರು.

ಇವರ ಕ್ರೀಡಾ ಸ್ಫೂರ್ತಿ, ನೈಪುಣ್ಯತೆಯನ್ನು `ಕ್ಯಾಲ್ಸಿಯೊ ಸಿ5 ತಂಡ ಗುರುತಿಸಿ, ಅಂತಾರಾಷ್ಟೀಯ `ಇಟಲಿ ಸೀರೀ ಬಿ ಲೀಗ್​ನಲ್ಲಿ ತಂಡ ಪ್ರತಿನಿಧಿಸಲು ಆಹ್ವಾನಿಸಿತ್ತು. ಅದರಂತೆ ತಂಡದಲ್ಲಿ ಆಡಲು 2 ವರ್ಷ ಒಪ್ಪಂದದೊಂದಿಗೆ 4 ತಿಂಗಳ ಹಿಂದಷ್ಟೇ ಇಟಲಿಗೆ ತೆರಳಿದ್ದರು.

ಆ ಸಂದರ್ಭದಲ್ಲಿ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ 1 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ, ಸಂಭ್ರಮದಿಂದ ಬೀಳ್ಕೊಟ್ಟಿತ್ತು. ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಲೀಗ್​ಗೆ ಯಶವಂತ ಕುಮಾರ್ ಆಯ್ಕೆಯಾಗಿದ್ದರು.

ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

ಮೈಸೂರು : ಭಾರತದ ಅತ್ಯುತ್ತಮ ಫುಟ್ಸಲ್ ಗೋಲ್ ಕೀಪರ್ ಆಗಬೇಕೆಂಬ ಗುರಿ ಹೊಂದಿದ್ದ ನಗರದ ಪ್ರತಿಭಾನ್ವಿತ ಯುವ ಕ್ರೀಡಾಪಟು ದೂರದ ಇಟಲಿ ದೇಶದ ರೋಮ್ ನಗರದಲ್ಲಿ ಸಾವಿಗೀಡಾಗಿದ್ದಾನೆ.

ಮೈಸೂರಿನ ಎನ್ ಆರ್ ಮೊಹಲ್ಲಾದ ನಿವಾಸಿ, ಕರಕುಶಲ ಕಲಾವಿದ ಎನ್.ಕುಮಾರ್ ಹಾಗೂ ಎನ್.ರೂಪಾ ಎಂಬ ದಂಪತಿ ಪುತ್ರ ಯಶವಂತ್‌ ಕುಮಾರ್(23) ಇಟಲಿಯಲ್ಲಿ ಮೃತಪಟ್ಟಿರುವ ಫುಟ್ಸಲ್ ಆಟಗಾರ.

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ,`ಸೀರೀ ಬಿ ಫುಟ್ಸಲ್ ಲೀಗ್​ನಲ್ಲಿ `ಕ್ಯಾಲ್ಸಿಯೊ ಸಿ 5 ತಂಡದೊಂದಿಗೆ ಭಾಗವಹಿಸಲು ಕಳೆದ 4 ತಿಂಗಳ ಹಿಂದೆಯಷ್ಟೇ ಇಟಲಿಗೆ ತೆರಳಿದ್ದ. ರೋಮ್​ನಲ್ಲಿನ ಜಲಪಾತವೊಂದರಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ದೂರವಾಣಿಯಲ್ಲಿ ಯಶವಂತ ಕುಮಾರ್ ತಂದೆ ಎನ್.ಕುಮಾರ್ ಮಾತನಾಡಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಮಗ ಯಶವಂತ್ ಕುಮಾರ್ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ, ತಂಡದ ಕ್ಯಾಪ್ಟನ್​ಗೆ ಮೆಸೇಜ್ ಕಳುಹಿಸಿದ್ದೆವು. ಆದರೆ, ಆತ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದನ್ನು ಆ. 6ರಂದು ನಮಗೆ ತಿಳಿಸಿದ್ದರಾದರೂ ಖಚಿತಪಡಿಸಿರಲಿಲ್ಲ.

ಪೊಲೀಸರು ಮರುದಿನ ಬೆರಳಚ್ಚಿನ ಆಧಾರದಲ್ಲಿ ದೃಢಪಡಿಸಿದರು. ಆಗಸ್ಟ್ 31ರವರೆಗೂ ಅಲ್ಲಿಗೆ ವಿಮಾನ ಸೌಲಭ್ಯವಿಲ್ಲ. ಅಲ್ಲದೆ ಮೃತದೇಹವನ್ನು ಮೀನುಗಳು ತಿಂದಿರುವುದರಿಂದ ಕೊಳೆತ ಸ್ಥಿತಿ ತಲುಪಿದೆ. ಹಾಗಾಗಿ, ಅಲ್ಲಿರುವ ಕನ್ನಡಿಗರೇ ಅಂತ್ಯಕ್ರಿಯೆ ನೆರವೇರಿಸಿ, ಅಸ್ತಿಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದರು.
ಯಶವಂತ್ ರೋಚಕ ಕ್ರೀಡಾ ಹಾದಿ

ಫುಟ್ಬಾಲ್ ಮಾದರಿಯ ಫುಟ್ಸಲ್ ಕ್ರೀಡೆ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಫುಟ್ಬಾಲ್ ರೂಪಾಂತರ ಕ್ರೀಡೆ ಫುಟ್ಸಲ್ ಒಂದು ಒಳಾಂಗಣ ಕ್ರೀಡೆ. ಗೋಲ್ ಕೀಪರ್ ಸೇರಿ ಒಂದು ತಂಡದಲ್ಲಿ ಐವರು ಆಟಗಾರರು ಮಾತ್ರ ಇರುತ್ತಾರೆ. ಈ ವಿಶೇಷ ಕ್ರೀಡೆಯ ಬಗ್ಗೆ 7ನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಆಸಕ್ತಿ ಬೆಳೆಸಿಕೊಂಡಿದ್ದ ಯಶವಂತ್, ನಂತರದ ದಿನಗಳಲ್ಲಿ ತರಬೇತಿ ಪಡೆದಿದ್ದರು.

ಕ್ರೀಡೆಯ ಬಗ್ಗೆ ಅಪಾರ ಪ್ರೀತಿ ಹಾಗೂ ಸಾಧಿಸುವ ಛಲ ಹೊಂದಿದ್ದ ಇವರು ಉತ್ತಮ ಕ್ರೀಡಾಪಟುವಾಗಿ ಬೆಳೆದಿದ್ದರು. ಕರ್ನಾಟಕ ಮತ್ತು ಕೇರಳ ಫುಟ್ಸಲ್ ತಂಡಗಳನ್ನು ಪ್ರತಿನಿಧಿಸಿದ್ದಲ್ಲದೆ ಇಂಡಿಯನ್ ಫುಟ್ಸಲ್ ಜರ್ಸಿಯನ್ನೂ ಧರಿಸಿ, 2016ರಲ್ಲಿ ಗೋವಾದಲ್ಲಿ ನಡೆದ ಪ್ರೀಮಿಯರ್ ಫುಟ್ಸಲ್ ಲೀಗ್​ನಲ್ಲೂ ಆಡಿದ್ದರು.

ಒಪ್ಪಂದದೊಂದಿಗೆ ಇಟಲಿಗೆ ಹೋಗಿದ್ದರು

ಬೆಂಗಳೂರು ಟ್ರಯಲ್ಸ್​ನಲ್ಲಿ ಭಾಗವಹಿಸಿದ್ದ ಚೆನ್ನೈ, ಮುಂಬೈ, ಕೋಲ್ಕತಾ, ದೆಹಲಿ ಸೇರಿದಂತೆ ದೇಶದ ವಿವಿಧೆಡೆಯ 320 ಆಟಗಾರರಲ್ಲಿ ಆಯ್ಕೆಯಾದ 40 ಸದಸ್ಯರ ಪಟ್ಟಿಯಲ್ಲಿ ಯಶವಂತ್ ಕುಮಾರ್ ಸ್ಥಾನ ಪಡೆದಿದ್ದರು.

ಇವರ ಕ್ರೀಡಾ ಸ್ಫೂರ್ತಿ, ನೈಪುಣ್ಯತೆಯನ್ನು `ಕ್ಯಾಲ್ಸಿಯೊ ಸಿ5 ತಂಡ ಗುರುತಿಸಿ, ಅಂತಾರಾಷ್ಟೀಯ `ಇಟಲಿ ಸೀರೀ ಬಿ ಲೀಗ್​ನಲ್ಲಿ ತಂಡ ಪ್ರತಿನಿಧಿಸಲು ಆಹ್ವಾನಿಸಿತ್ತು. ಅದರಂತೆ ತಂಡದಲ್ಲಿ ಆಡಲು 2 ವರ್ಷ ಒಪ್ಪಂದದೊಂದಿಗೆ 4 ತಿಂಗಳ ಹಿಂದಷ್ಟೇ ಇಟಲಿಗೆ ತೆರಳಿದ್ದರು.

ಆ ಸಂದರ್ಭದಲ್ಲಿ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ 1 ಲಕ್ಷ ರೂ. ಪ್ರೋತ್ಸಾಹ ಧನ ನೀಡಿ, ಸಂಭ್ರಮದಿಂದ ಬೀಳ್ಕೊಟ್ಟಿತ್ತು. ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಲೀಗ್​ಗೆ ಯಶವಂತ ಕುಮಾರ್ ಆಯ್ಕೆಯಾಗಿದ್ದರು.

ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂನಿಂದ ಷರತ್ತುಬದ್ಧ ಜಾಮೀನು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.