ಮೈಸೂರು: ಕೊರೊನಾ ಭೀತಿ ಹಿನ್ನೆಲೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದಿದ್ದರು.
ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಹಾಗೂ ಉಪಮೇಯರ್ ಸಿ.ಶ್ರೀಧರ್ ಸೇರಿದಂತೆ ಸ್ಥಾಯಿ ಸಮಿತಿಯ ಸದಸ್ಯರು ಮಾಸ್ಕ್ ಧರಿಸಿ ಆಗಮಿಸಿದ್ದರು. ಈ ಮೂಲಕ ಮೈಸೂರಿನ ಜನತೆಗೆ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದರು.
ವಿದೇಶದಲ್ಲಿ ಮರಣ ಮೃದಂಗ ಬಾರಿಸಿದ ಕೊರೊನಾ ಭಾರತಕ್ಕೂ ಕಾಲಿಟ್ಟಿದ್ದು ಕಳೆದರಡು ದಿನಗಳಿಂದ ಜನರು ಆತಂದಲ್ಲಿದ್ದಾರೆ.