ETV Bharat / state

ಮೈಸೂರು: ಅನಗತ್ಯ ಓಡಾಟಕ್ಕೆ ಬ್ರೇಕ್, ಪೊಲೀಸರ ಮುಂದೆ ವ್ಯಕ್ತಿಯ ಹೈಡ್ರಾಮಾ...!

author img

By

Published : May 9, 2021, 3:33 PM IST

10 ಗಂಟೆಯ ನಂತರ ಓಡಾಡಬಾರದು ಅಂತಾ ಹೇಳಿದ್ದಕ್ಕೆ ವ್ಯಕ್ತಿಯೋರ್ವ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ್ದಾನೆ‌. ಬಳಿಕ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ, ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾನೆ. ಈ ದೃಶ್ಯವನ್ನು ಆ ವ್ಯಕ್ತಿಯ ಮಗ ಸೆರೆಹಿಡಿದಿದ್ದಾನೆ.

clash between police and man in mysore
ಅನಗತ್ಯ ಓಡಾಟಕ್ಕೆ ಬ್ರೇಕ್, ಪೊಲೀಸರ ಮುಂದೆ ವ್ಯಕ್ತಿಯ ಹೈಡ್ರಾಮಾ...!

ಮೈಸೂರು:‌ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ ಪರಿಣಾಮ, ಪೊಲೀಸರ ವಿರುದ್ಧ ವ್ಯಕ್ತಿಯೋರ್ವ ಹೈಡ್ರಾಮಾ ಮಾಡಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅನಗತ್ಯ ಓಡಾಟಕ್ಕೆ ಬ್ರೇಕ್, ಪೊಲೀಸರ ಮುಂದೆ ವ್ಯಕ್ತಿಯ ಹೈಡ್ರಾಮಾ...!

ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ರಸ್ತೆಯಲ್ಲಿ ಮಲಗಿ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. 10 ಗಂಟೆಯ ನಂತರ ಓಡಾಡಬಾರದು ಅಂತಾ ಹೇಳಿದ್ದಕ್ಕೆ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ್ದಾನೆ‌. ಬಳಿಕ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ, ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾನೆ.

ಇದನ್ನೂ ಓದಿ: ವಿನಾಯಿತಿ ಅವಧಿ ಮೀರಿದರೂ ಅನಗತ್ಯ ಓಡಾಟ: ಪೊಲೀಸರಿಂದ ಎಚ್ಚರಿಕೆ

ಇದನ್ನು ಆ ವ್ಯಕ್ತಿಯ ಪುತ್ರ ವೀಡಿಯೋ ಮಾಡಿದ್ದಾನೆ. ಬಳಿಕ ಆ ವ್ಯಕ್ತಿಯ ಪುತ್ರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ವಿಪರೀತಕ್ಕೇರಿತ್ತು. ನಂತರ ಪೊಲೀಸರು, ಬೈಕ್ ಕಿತ್ತುಕೊಂಡು ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಮೈಸೂರು:‌ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ ಪರಿಣಾಮ, ಪೊಲೀಸರ ವಿರುದ್ಧ ವ್ಯಕ್ತಿಯೋರ್ವ ಹೈಡ್ರಾಮಾ ಮಾಡಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅನಗತ್ಯ ಓಡಾಟಕ್ಕೆ ಬ್ರೇಕ್, ಪೊಲೀಸರ ಮುಂದೆ ವ್ಯಕ್ತಿಯ ಹೈಡ್ರಾಮಾ...!

ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ರಸ್ತೆಯಲ್ಲಿ ಮಲಗಿ ವ್ಯಕ್ತಿಯೊಬ್ಬ ಹೈಡ್ರಾಮಾ ಮಾಡಿದ್ದಾನೆ. 10 ಗಂಟೆಯ ನಂತರ ಓಡಾಡಬಾರದು ಅಂತಾ ಹೇಳಿದ್ದಕ್ಕೆ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ್ದಾನೆ‌. ಬಳಿಕ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ, ರಸ್ತೆಯಲ್ಲೇ ಬಿದ್ದು ಹೊರಳಾಡಿದ್ದಾನೆ.

ಇದನ್ನೂ ಓದಿ: ವಿನಾಯಿತಿ ಅವಧಿ ಮೀರಿದರೂ ಅನಗತ್ಯ ಓಡಾಟ: ಪೊಲೀಸರಿಂದ ಎಚ್ಚರಿಕೆ

ಇದನ್ನು ಆ ವ್ಯಕ್ತಿಯ ಪುತ್ರ ವೀಡಿಯೋ ಮಾಡಿದ್ದಾನೆ. ಬಳಿಕ ಆ ವ್ಯಕ್ತಿಯ ಪುತ್ರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ವಿಪರೀತಕ್ಕೇರಿತ್ತು. ನಂತರ ಪೊಲೀಸರು, ಬೈಕ್ ಕಿತ್ತುಕೊಂಡು ಬುದ್ಧಿ ಹೇಳಿ ಕಳುಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.