ETV Bharat / state

ಉಪಚುನಾವಣೆಗೆ ಸ್ಪರ್ಧಿಸಿರುವ ಅನರ್ಹರ ವಿರುದ್ಧ ಪ್ರಚಾರ ಮಾಡ್ತೀನಿ.. ವಾಟಾಳ್​ ನಾಗರಾಜ್

author img

By

Published : Nov 17, 2019, 4:36 PM IST

ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡಿ ಇಂತಹ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ಮತದಾರರಿಗೆ ಹೇಳ್ತೀನಿ ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ತಿಳಿಸಿದ್ದಾರೆ.

ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್

ಮೈಸೂರು: ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡಿ ಇಂತಹ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ಮತದಾರರಿಗೆ ಹೇಳ್ತೀನಿ ಅಂತಾ ಕನ್ನಡ ಚಳವಳಿ ವಾಟಾಳ್​​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ತಿಳಿಸಿದ್ದಾರೆ.

ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ಪ್ರಚಾರ ಮಾಡ್ತೀನಿ.. ವಾಟಾಳ್​ ನಾಗರಾಜ್

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳು ಪ್ರಜಾಪ್ರಭುತ್ವವನ್ನು ಹಾಳು ಮಾಡಿದಲ್ಲದೇ,ಸರ್ಕಾರವನ್ನ ಪದಚ್ಯುತಿಗೊಳಿಸಿ ಬೇರೆ ಪಕ್ಷವನ್ನು ಸೇರಿ ಅಕ್ರಮ ಮಾಡಿದ್ದಾರೆ. ಇದೊಂದು ರೀತಿ ದರೋಡೆ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮತ್ತೊಮ್ಮೆ ಮರು ಪರಿಶೀಲನೆ ಅರ್ಜಿ ಹಾಕಬೇಕು. ಕರ್ನಾಟಕದಲ್ಲಿ ಪಕ್ಷಾಂತರಿಗಳು ಪಾಪದ ಕೆಲಸ ಮಾಡಿದ್ದು ಸಂಸದೀಯ ವ್ಯವಸ್ಥೆಗೆ ಕಳಂಕ ತಂದಿದ್ದಾರೆ ಎಂದರು.

ಇನ್ನು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ. ಶಾಸನ ಸಭೆ ಬೇಕಾಗಿಲ್ಲ. ಭ್ರಷ್ಟಾಚಾರ ಅವರ ಚಿಂತನೆಯಾಗಿದೆ. ಬಸ್ಮಾಸುರ ವರ ಪಡೆದು ಎಲ್ಲರ ತಲೆ‌ಮೇಲೆ ಕೈ ಇಟ್ಟಂತೆ, ಯಡಿಯೂರಪ್ಪ ಪ್ರಜಾಪ್ರಭುತ್ವದ ಮೇಲೆ ಕೈ ಇಟ್ಟಿದ್ದಾರೆ. ಹೀಗಾಗಿ ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ‌ ನಂಬಿಕೆ ಇಲ್ಲದಂತಾಗಿದೆ.

ಇದೇ ರೀತಿ ಮುಂದುವರೆದರೆ ಶಾಸನ ಸಭೆಯಲ್ಲಿ ರಾಜಕೀಯ ರೌಡಿಗಳು,ಜಾತಿವಾದಿಗಳು ಬರುತ್ತಾರೆ. ನಾನು ಭ್ರಷ್ಟಾಚಾರ,ಜಾತಿವ್ಯವಸ್ಥೆ ಮತ್ತು ಪಕ್ಷಾಂತರಿಗಳ ‌ವಿರುದ್ಧ ಅಜೆಂಡಾ ಇಟ್ಟುಕೊಂಡು ಶಿವಾಜಿನಗರ ಮತ್ತು ಮಹಾಲಕ್ಷ್ಮಿ ಬಡಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕ ಪ್ರಾಮಾಣಿಕತೆಯಿಂದ ಇರುವುದು ಕಾಣಲಿಲ್ಲ ಹಾಗಾಗಿ ಜಾತಿ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಶಾಸನ ಸಭೆಗೆ ಹೋಗಬೇಕಾದ ಅವಶ್ಯಕತೆ ಇದೆ. ಯಡಿಯೂರಪ್ಪ ಎಂದರೇ ಎಡವಟ್ಟು, ಎಡವಟ್ಟು ಎಂದರೆ ಯಡಿಯೂರಪ್ಪ ಎಂದು ಕಿಡಿಕಾರಿದ್ರು.

ಹೆಚ್‌. ವಿಶ್ವನಾಥ್ ‌ಅವರ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್​, ಮೈಸೂರು ಜಿಲ್ಲೆಯನ್ನು ಒಡೆಯುವ ಕೆಲಸ ಮಾಡಬೇಡಿ. ನಿಮ್ಮ ಕೆಟ್ಟ ಆಲೋಚನೆಯಿಂದಾಗಿ ಈ ರೀತಿ ಮಾಡಬೇಡಿ ಎಂದರು.

ಮೈಸೂರು: ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡಿ ಇಂತಹ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ಮತದಾರರಿಗೆ ಹೇಳ್ತೀನಿ ಅಂತಾ ಕನ್ನಡ ಚಳವಳಿ ವಾಟಾಳ್​​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ತಿಳಿಸಿದ್ದಾರೆ.

ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ಪ್ರಚಾರ ಮಾಡ್ತೀನಿ.. ವಾಟಾಳ್​ ನಾಗರಾಜ್

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರಿಗಳು ಪ್ರಜಾಪ್ರಭುತ್ವವನ್ನು ಹಾಳು ಮಾಡಿದಲ್ಲದೇ,ಸರ್ಕಾರವನ್ನ ಪದಚ್ಯುತಿಗೊಳಿಸಿ ಬೇರೆ ಪಕ್ಷವನ್ನು ಸೇರಿ ಅಕ್ರಮ ಮಾಡಿದ್ದಾರೆ. ಇದೊಂದು ರೀತಿ ದರೋಡೆ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮತ್ತೊಮ್ಮೆ ಮರು ಪರಿಶೀಲನೆ ಅರ್ಜಿ ಹಾಕಬೇಕು. ಕರ್ನಾಟಕದಲ್ಲಿ ಪಕ್ಷಾಂತರಿಗಳು ಪಾಪದ ಕೆಲಸ ಮಾಡಿದ್ದು ಸಂಸದೀಯ ವ್ಯವಸ್ಥೆಗೆ ಕಳಂಕ ತಂದಿದ್ದಾರೆ ಎಂದರು.

ಇನ್ನು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ. ಶಾಸನ ಸಭೆ ಬೇಕಾಗಿಲ್ಲ. ಭ್ರಷ್ಟಾಚಾರ ಅವರ ಚಿಂತನೆಯಾಗಿದೆ. ಬಸ್ಮಾಸುರ ವರ ಪಡೆದು ಎಲ್ಲರ ತಲೆ‌ಮೇಲೆ ಕೈ ಇಟ್ಟಂತೆ, ಯಡಿಯೂರಪ್ಪ ಪ್ರಜಾಪ್ರಭುತ್ವದ ಮೇಲೆ ಕೈ ಇಟ್ಟಿದ್ದಾರೆ. ಹೀಗಾಗಿ ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವದ ಮೇಲೆ‌ ನಂಬಿಕೆ ಇಲ್ಲದಂತಾಗಿದೆ.

ಇದೇ ರೀತಿ ಮುಂದುವರೆದರೆ ಶಾಸನ ಸಭೆಯಲ್ಲಿ ರಾಜಕೀಯ ರೌಡಿಗಳು,ಜಾತಿವಾದಿಗಳು ಬರುತ್ತಾರೆ. ನಾನು ಭ್ರಷ್ಟಾಚಾರ,ಜಾತಿವ್ಯವಸ್ಥೆ ಮತ್ತು ಪಕ್ಷಾಂತರಿಗಳ ‌ವಿರುದ್ಧ ಅಜೆಂಡಾ ಇಟ್ಟುಕೊಂಡು ಶಿವಾಜಿನಗರ ಮತ್ತು ಮಹಾಲಕ್ಷ್ಮಿ ಬಡಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕ ಪ್ರಾಮಾಣಿಕತೆಯಿಂದ ಇರುವುದು ಕಾಣಲಿಲ್ಲ ಹಾಗಾಗಿ ಜಾತಿ, ಭ್ರಷ್ಟಾಚಾರ ವಿರುದ್ಧ ಹೋರಾಡಲು ಶಾಸನ ಸಭೆಗೆ ಹೋಗಬೇಕಾದ ಅವಶ್ಯಕತೆ ಇದೆ. ಯಡಿಯೂರಪ್ಪ ಎಂದರೇ ಎಡವಟ್ಟು, ಎಡವಟ್ಟು ಎಂದರೆ ಯಡಿಯೂರಪ್ಪ ಎಂದು ಕಿಡಿಕಾರಿದ್ರು.

ಹೆಚ್‌. ವಿಶ್ವನಾಥ್ ‌ಅವರ ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ವಾಟಾಳ್​, ಮೈಸೂರು ಜಿಲ್ಲೆಯನ್ನು ಒಡೆಯುವ ಕೆಲಸ ಮಾಡಬೇಡಿ. ನಿಮ್ಮ ಕೆಟ್ಟ ಆಲೋಚನೆಯಿಂದಾಗಿ ಈ ರೀತಿ ಮಾಡಬೇಡಿ ಎಂದರು.

Intro:ವಾಟಲ್ ನಾಗರಾಜ್Body:ಚುನಾವಣೆಗೆ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ಪ್ರಚಾರ: ವಾಟಲ್ ನಾಗರಾಜ್
ಮೈಸೂರು: ರಾಜ್ಯ ನಡೆಯುತ್ತಿರುವ ಉಪಚುನಾವಣೆಯಲ್ಲಿ‌ ಸ್ಪರ್ಧಿಸಿರುವ ಪಕ್ಷಾಂತರಿಗಳ ವಿರುದ್ಧ ನಾನೇ ಪ್ರಚಾರ ಮಾಡಿ,ಇಂತಹ ರಾಜಕಾರಣಿಗಳಿಗೆ ಓಟು ಹಾಕಬೇಡಿ ಮತದಾರರಿಗೆ ಹೇಳುತ್ತೀನಿ ಎಂದು ವಾಟಲ್ ಪಕ್ಷದ ಅಧ್ಯಕ್ಷ ವಾಟಲ್ ನಾಗರಾಜ್ ಹೇಳಿದರು.
ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಜನರು ಪಕ್ಷಾಂತರಿಗಳು ಪ್ರಜಾಪ್ರಭುತ್ವವನ್ನು ಹಾಳುಮಾಡಿ ಸರ್ಕಾರವನ್ನು ಪದಚ್ಯತಿ ಮಾಡಿ ಬೇರೆ ಪಕ್ಷವನ್ನು ಸೇರಿ ಅಕ್ರಮ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ದರೋಡೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೊಮ್ಮೆ ಮರುಪರಿಶೀಲನೆ ಅರ್ಜಿ ಹಾಕಬೇಕು. ಇವರಿಗೆ ಸಂಪೂರ್ಣವಾಗಿ ಪಕ್ಷಬೇದ ಮರೆತು ಚುನಾವಣೆ ಯಲ್ಲಿ ಸೋಲಿಸಬೇಕಿದೆ ಎಂದರು.
ಕರ್ನಾಟಕದಲ್ಲಿ ಪಕ್ಷಾಂತರಿಗಳು ಪಾಪದ ಕೆಲಸ ಮಾಡಿದ್ದಾರೆ, ಸಂಸದೀಯ ವ್ಯವಸ್ಥೆಗೆ ಕಳಂಕ ತಂದಿದ್ದಾರೆ.ಉತ್ತರದಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ, ಇಲ್ಲೂ ಜನರು ತಿರಸ್ಕರಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ,ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ, ಶಾಸನ ಸಭೆ, ಬೇಕಾಗಿಲ್ಲ, ಭ್ರಷ್ಟಾಚಾರ ಅವರ ಚಿಂತನೆಯಾಗಿದೆ.ಬಸ್ಮಾಸುರ ವರ ಪಡೆದು ಎಲ್ಲರ ತಲೆ‌ಮೇಲೆ ಕೈ ಹಿಡಿದಂತೆ, ಯಡಿಯೂರಪ್ಪ ರವರು ಪ್ರಜಾಪ್ರಭುತ್ವದ ಮೇಲೆ ಕೈ ಹಿಟ್ಟಿದ್ದಾರೆ, ಪ್ರಾಮಾಣಿಕತೆ ಮತ್ತು ಪ್ರಜಾಪ್ರಭುತ್ವ ಮೇಲೆ‌ ನಂಬಿಕೆ ಇಲ್ಲ ಎಂದು‌ ಕಿಡಿಕಾರಿದರು.
ಈ‌ ಅನರ್ಹ ಶಾಸಕರು ಕರ್ನಾಟಕದ ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ, ಅನೇಕ ಮಹನೀಯರು ತಂದ್ದುಕೊಟ್ಟಿದ್ದ ಗೌರವವನ್ನು‌ ಹಾಳು ಮಾಡಿದ್ದಾರೆ.ಪಕ್ಷಾಂತರಿಗಳನ್ನು ಗೆಲ್ಲಿಸಬೇಡಿ ಎಂದು ಇಡೀ ರಾಜ್ಯದಲ್ಲಿ ಇವರ ವಿರುದ್ದ ಪ್ರಚಾರ ಮಾಡುತ್ತೇನೆ. ಎರಡು ಕಡೆ ನಾನೇ ನಿಲ್ಲುತ್ತೇನೆ ಎಂದು ಹೇಳಿದರು.

ಇದೇ ರೀತಿ ಮುಂದುವರೆದರೆ ಶಾಸನ ಸಭೆಯಲ್ಲಿ ರಾಜಕೀಯ ರೌಡಿಗಳು, ಜಾತಿವಾದಿಗಳು ಬರುತ್ತಾರೆ.ನಾನು ಭ್ರಷ್ಟಾಚಾರ, ಜಾತಿಯ ವಿರುದ್ದ, ಪಕ್ಷಾಂತರಿಗಳ ‌ವಿರುದ್ದ ಅಜೆಂಡಾ ಇಟ್ಟುಕೊಂಡು ೦೨ ಕ್ಷೇತ್ರದ ಶಿವಾಜಿನಗರ , ಮತ್ತು ಮಹಾಲಕ್ಷ್ಮಿ ಬಡಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದೇನೆ.ಶಾಸನ ಸಭೆಯಲ್ಲಿ ಒಬ್ಬ ಶಾಸಕ ಪ್ರಾಮಾಣಿಕತೆಯಿಂದ ಇರುವುದು ಕಾಣಲಿಲ್ಲ‌ ಎಂದರು.
ಜಾತಿ, ಭ್ರಷ್ಟಾಚಾರ ವಿರುದ್ದ ಹೋರಾಡಲು ಶಾಸನ ಸಬೆಗೆ ಹೋಗಬೇಕಾದ ಅವಶ್ಯಕತೆ ಇದೆ.ಯಡಿಯೂರಪ್ಪ ಎಂದರೇ ಎಡವಟ್ಟು, ಎಡವಟ್ಟು ಎಂದರೆ ಯಡಿಯೂರಪ್ಪ‌ ಎಂದು ಕುಟುಕಿದರು.
ವಿಶ್ವನಾಥ್ ‌ರವರು ಹುಣಸೂರು ಪ್ರತ್ಯೇಕ ಜಿಲ್ಲೆಯ ಬೇಡಿಕೆ ವಿಚಾರವಾಗಿ ಉತ್ತರಿಸಿ.ಇವರ ಸ್ವಂತ ರಾಜಕಾರಣಕ್ಕೆ ಈ ರೀತಿ ಮಾತ ಮಾಡುತ್ತಾರೆ.ಮೈಸೂರು ಜಿಲ್ಲೆಯನ್ನು ಒಡೆಯುವ ಕೆಲಸ ಮಾಡಬೇಡಿ, ನಿಮ್ಮ ಕೆಟ್ಟ ಆಲೋಚನೆಯಿಂದಾಗಿ ಈ ರೀತಿ ಮಾಡಬೇಡಿ ಎಂದರು.
ರಾಷ್ಟ್ರೀಯ ಹೆದ್ದಾರಿ ೮೯ ‌ಮಡಿಕೇರಿ, ಗೋಣಿಕೊಪ್ಪ, ಕುಟ್ಟ ಮೂಲಕ ರಸ್ತೆ ಮಾಡಲು ಕೇಂದ್ರ ಸರ್ಕಾರ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ, ಇದರಿಂದ ನಾಗರಹೊಳೆ, ಮತ್ತು ಕರ್ನಾಟಕ ಅಪಾಯವಿದೆ.ಕೇರಳ ಸರ್ಕಾರವು ಮರದ‌ ಮಾಫಿಯಾ ನಡೆಸಲು ಹುನ್ನಾರ ನಡೆಸುತ್ತಿದೆ ಎಂದರು.

Conclusion:ವಾಟಲ್ ನಾಗರಾಜ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.