ETV Bharat / state

ಶ್ರೀನಿವಾಸ್ ಪ್ರಸಾದ್ ಮುಂದೆ ಕೈಕಟ್ಟಿ ನಿಂತ ಪ್ರೊ. ಮಹೇಶ್ ಚಂದ್ರಗುರು: ಫೋಟೋ ವೈರಲ್​

author img

By

Published : Mar 31, 2019, 4:55 PM IST

ಚಾಮರಾಜನಗರದಲ್ಲಿ ಆರ್.ಧ್ರುವನಾರಾಯಣ ಅವರನ್ನು ಗೆಲ್ಲಿಸಿ ಎಂದು ಹೇಳಿಕೆ ನೀಡಿದ್ದ ಪ್ರೊ.ಮಹೇಶ್ ಚಂದ್ರಗುರು ಈಗ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ಪ್ರಸಾದ್​ ಮುಂದೆ ಕೈಕಟ್ಟಿ ನಿಂತಿರುವ ಫೋಟೊವೊಂದು ವೈರಲ್​ ಆಗಿದೆ.

ಫೋಟೋ ವೈರಲ್​

ಮೈಸೂರು: ವಿ.ಶ್ರೀನಿವಾಸ್ ಪ್ರಸಾದ್ ಮುಂದೆ ಪ್ರೊ.ಮಹೇಶ್ ಚಂದ್ರಗುರು ಕೈ ಕಟ್ಟಿಕೊಂಡು ನಿಂತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಪ್ರೊ.ಮಹೇಶ್ ಚಂದ್ರಗುರು, ಚಾಮರಾಜನಗರ ಕಾಂಗ್ರೆಸ್​ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರನ್ನು ಗೆಲ್ಲಿಸಿ ಎಂದು ಹೇಳಿಕೆ ನೀಡಿದ್ದರು.

ಇದರಿಂದ ಕೆರಳಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ತಮ್ಮ ಫೇಸ್​ಬುಕ್ ಖಾತೆಯಲ್ಲಿ`ಮಹೇಶ್ ಚಂದ್ರಗುರು ಕೈಕಟ್ಟಿಕೊಂಡು ಶ್ರೀನಿವಾಸ್ ಪ್ರಸಾದ್ ಮುಂದೆ ನಿಂತಿರುವ ಫೋಟೋ ವೈರಲ್​ ಮಾಡಿ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಂದು ಕೈಕಟ್ಟಿಕೊಂಡು ನಿಂತು ಕೆಲಸ ಮಾಡಿಸಿಕೊಂಡಿದ್ದಿರಿ. ಇಂದು ಪ್ರಸಾದ್ ಅವರು ಬೇಡವಾಯಿತೇ. ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ ಎಂದು ಗುರುಗೆ ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಮೈಸೂರು: ವಿ.ಶ್ರೀನಿವಾಸ್ ಪ್ರಸಾದ್ ಮುಂದೆ ಪ್ರೊ.ಮಹೇಶ್ ಚಂದ್ರಗುರು ಕೈ ಕಟ್ಟಿಕೊಂಡು ನಿಂತಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಪ್ರೊ.ಮಹೇಶ್ ಚಂದ್ರಗುರು, ಚಾಮರಾಜನಗರ ಕಾಂಗ್ರೆಸ್​ ಅಭ್ಯರ್ಥಿ ಆರ್.ಧ್ರುವನಾರಾಯಣ ಅವರನ್ನು ಗೆಲ್ಲಿಸಿ ಎಂದು ಹೇಳಿಕೆ ನೀಡಿದ್ದರು.

ಇದರಿಂದ ಕೆರಳಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು, ತಮ್ಮ ಫೇಸ್​ಬುಕ್ ಖಾತೆಯಲ್ಲಿ`ಮಹೇಶ್ ಚಂದ್ರಗುರು ಕೈಕಟ್ಟಿಕೊಂಡು ಶ್ರೀನಿವಾಸ್ ಪ್ರಸಾದ್ ಮುಂದೆ ನಿಂತಿರುವ ಫೋಟೋ ವೈರಲ್​ ಮಾಡಿ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅಂದು ಕೈಕಟ್ಟಿಕೊಂಡು ನಿಂತು ಕೆಲಸ ಮಾಡಿಸಿಕೊಂಡಿದ್ದಿರಿ. ಇಂದು ಪ್ರಸಾದ್ ಅವರು ಬೇಡವಾಯಿತೇ. ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬೇಡಿ ಎಂದು ಗುರುಗೆ ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.