ETV Bharat / state

ಕುಂಚ ಕಲಾವಿದರ ಸಂಘದಿಂದ ಚಿತ್ರ ಬಿಡಿಸುವ ಮೂಲಕ ಕೊರೊನಾ ಬಗ್ಗೆ ಜಾಗೃತಿ..

author img

By

Published : Apr 8, 2020, 1:14 PM IST

ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೊನಾ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಅನ್ನೋದು ಸೇರಿದಂತೆ ಮುಂತಾದ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಾರಲಾಗುತ್ತಿದೆ.

Awareness of Corona
ಕುಂಚ ಕಲಾವಿದರ ಸಂಘದಿಂದ ಚಿತ್ರ

ಮೈಸೂರು : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ‌ ಚಿತ್ರಕಲೆಯ ಮೂಲಕ ಕುಂಚ ಕಲಾವಿದರ ಸಂಘದಿಂದ ವಿಶಿಷ್ಟ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

ತಿ.ನರಸೀಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸುವ ಮೂಲಕ‌ ಕಲಾವಿದರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕುಂಚ ಕಲಾವಿದರ ವಿಶಿಷ್ಟ ಜಾಗೃತಿ ಅಭಿಯಾನಕ್ಕೆ ಪೊಲೀಸ್ ಇಲಾಖೆ ಮತ್ತು ಪುರಸಭೆ ಕೈ ಜೋಡಿಸಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೊನಾ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಅನ್ನೋದು ಸೇರಿದಂತೆ ಮುಂತಾದ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಾರಲಾಗುತ್ತಿದೆ.

ಚಿತ್ರ ಕಲಾವಿದ ಸಿದ್ದಾಥ್೯..

ಈ ಬಗ್ಗೆ ಚಿತ್ರ ಕಲಾವಿದ ಸಿದ್ದಾಥ್೯ ಮಾತನಾಡಿ, ಇಂತಹ ಪರಿಸ್ಥಿತಿಯಲ್ಲಿ ಸಮಾಜದ ನಾಗರಿಕನಾಗಿ ನಮ್ಮ ಮೇಲೂ ಜವಾಬ್ದಾರಿ ಇದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸಬೇಕು ಎಂದರು.

ಮೈಸೂರು : ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ‌ ಚಿತ್ರಕಲೆಯ ಮೂಲಕ ಕುಂಚ ಕಲಾವಿದರ ಸಂಘದಿಂದ ವಿಶಿಷ್ಟ ಜಾಗೃತಿ ಅಭಿಯಾನ ಆರಂಭಿಸಲಾಗಿದೆ.

ತಿ.ನರಸೀಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೊರೊನಾ ವೈರಸ್ ಚಿತ್ರ ಬಿಡಿಸುವ ಮೂಲಕ‌ ಕಲಾವಿದರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕುಂಚ ಕಲಾವಿದರ ವಿಶಿಷ್ಟ ಜಾಗೃತಿ ಅಭಿಯಾನಕ್ಕೆ ಪೊಲೀಸ್ ಇಲಾಖೆ ಮತ್ತು ಪುರಸಭೆ ಕೈ ಜೋಡಿಸಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ, ಕೊರೊನಾ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಲಿ ಅನ್ನೋದು ಸೇರಿದಂತೆ ಮುಂತಾದ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಾರಲಾಗುತ್ತಿದೆ.

ಚಿತ್ರ ಕಲಾವಿದ ಸಿದ್ದಾಥ್೯..

ಈ ಬಗ್ಗೆ ಚಿತ್ರ ಕಲಾವಿದ ಸಿದ್ದಾಥ್೯ ಮಾತನಾಡಿ, ಇಂತಹ ಪರಿಸ್ಥಿತಿಯಲ್ಲಿ ಸಮಾಜದ ನಾಗರಿಕನಾಗಿ ನಮ್ಮ ಮೇಲೂ ಜವಾಬ್ದಾರಿ ಇದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ. ಸಾರ್ವಜನಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.