ಮೈಸೂರು: ಕಳೆದ 8 ವರ್ಷದ ಹಿಂದೆ ಕ್ಷುಲಕ ಕಾರಣಕ್ಕಾಗಿ ಟಿಬೆಟಿಯನ್ ವ್ಯಕ್ತಿಯ ಮೇಲೆ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದ, ಮೂವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಾಜ ಠಾಣಾ ವ್ಯಾಪ್ತಿಯ ದುರ್ಗಮ್ಮನಗುಡಿ ಕ್ರಾಸ್ನಲ್ಲಿ ಆ. 8,2012 ರಂದು, ಟಿಬೆಟಿಯನ್ ವ್ಯಕ್ತಿ ತನ್ ಜಿನ್ ದರ್ ಗ್ಯಾಲ್ ಎಂಬ 23 ವರ್ಷದ ಹುಡುಗನ ಮೇಲೆ ಬೈಕ್ನಲ್ಲಿ ಬಂದ ಅಪರಿಚಿತರು ಡ್ರ್ಯಾಗರ್ನಿಂದ ಬೆನ್ನಿಗೆ ಚುಚ್ಚಿ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದರು. ಸೂಕ್ಷ್ಮ ಘಟನೆಯಾಗಿದ್ದರಿಂದ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಆದರೆ ಆರೋಪಿಗಳು ಸಿಕ್ಕದ ಕಾರಣ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು.
ಈ ಪ್ರಕರಣವನ್ನು ಪುನಃ ತನಿಖೆಗೆ ಕೈಗೆತ್ತಿಕೊಂಡ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ಈ ಪ್ರಕರಣದ ಪ್ರಮುಖ ಆರೋಪಿ ಸಲೀಂ ಪಾಷ ಮತ್ತಿಬ್ಬರು ಆರೋಪಿಗಳಾದ ಸಲ್ಮಾನ್ ಪಾಷ ಹಾಗೂ ಇಸ್ಮಾಯಿಲ್ ಖಾನ್ ಎಂಬುವವರನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಬಳಸಿದ ಒಂದು ಬೈಕ್ನನ್ನು ವಶಪಡಿಸಿಕೊಳ್ಳಲಾಗಿದೆ.
ಬರ್ಮಾ ಮತ್ತು ಟಿಬೆಟಿಯನ್ರ ನಡುವೆ ನಡೆಯುತ್ತಿದ್ದ ಗಲಾಟೆಗೆ ವೈಷಮ್ಯಕ್ಕಾಗಿ ಈ ರೀತಿ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಲೀಂ ಮೇಲೆ 5 ಪ್ರಕರಣಗಳು ಇದ್ದು, ಆತ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಎಂದು ಇದೆ ಸಂದರ್ಭದಲ್ಲಿ ಡಿಸಿಪಿ ಪ್ರಕಾಶ್ ಗೌಡ ಅವರು ತಿಳಿಸಿದರು.