ETV Bharat / state

ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್​

author img

By

Published : Aug 4, 2022, 3:53 PM IST

ಮೈಸೂರಿನಲ್ಲಿ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20ಗೆ ಆರು ತಂಡಗಳ ನಾಯಕರ ಹೆಸರನ್ನು ಪ್ರಕಟಿಸಿದ ನಟ ಕಿಚ್ಚ ಸುದೀಪ್​ ಟ್ರೋಫಿಯನ್ನು ಅನಾವರಣ ಮಾಡಿದರು.

actor-sudeep-unveiled-maharaja-trophy-in-mysuru
ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್​

ಮೈಸೂರು: ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಕ್ರಿಕೆಟ್​ ಸರಣಿ ಆಗಸ್ಟ್​ 7ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ಇದರ ಅಂಗವಾಗಿ ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ಮಹಾರಾಜ ಟ್ರೋಫಿಯ ಬ್ರಾಂಡ್ ರಾಯಭಾರಿಯಾಗಿರುವ ನಟ ಕಿಚ್ಚ ಸುದೀಪ್ ಆರು ತಂಡಗಳ ನಾಯಕರನ್ನು ಪ್ರಕಟಿಸಿ ಟ್ರೋಫಿಯನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಇಂತಹ ಪ್ರತಿಷ್ಠಿತ ಟೂರ್ನಿಗೆ ಬ್ರಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಈ ಹೊಸ ಆವೃತ್ತಿ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಈ ಹೊಸ ಆವೃತ್ತಿಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವುದು ಕ್ರಿಕೆಟ್ ಅಸ್ತಿತ್ವ ಮತ್ತು ಕ್ರೀಡೆಯ ಉಳಿವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್​

6 ತಂಡಗಳ ನಾಯಕರ ಘೋಷಣೆ: ಈ ಬಾರಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಟೂರ್ನಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕರಾಗಿ ಭಾರತ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಜವಾಬ್ದಾರಿ ವಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು.

ಗುಲಬರ್ಗಾ ಮೈಸ್ಟಿಕ್ ತಂಡದ ನಾಯಕನ ಜವಾಬ್ದಾರಿಯನ್ನು ಮನೀಶ್ ಪಾಂಡೆ ಅವರಿಗೆ ನೀಡಲಾಗಿದೆ. ಮೈಸೂರು ವಾರಿಯರ್ಸ್​ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಅನುಭವಿ ಸ್ಪಿನ್ ಬೌಲರ್ ಕೆ.ಗೌತಮ್ ಶಿವಮೊಗ್ಗ ಸೈಕರ್ಸ್​ ತಂಡದ ನಾಯಕರಾಗಿ ಹಾಗೂ ಸಮರ್ಥ್​​ ಆರ್. ಮಂಗಳೂರು ಯುನೈಟೆಡ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೇಗದ ಬೌಲರ್ ಅಭಿಮನ್ಯು ಮಿಥುನ್ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಗಸ್ಟ್​​ 7ರಿಂದ ಮೈಸೂರಿನಲ್ಲಿ ಆರಂಭವಾಗಲಿರುವ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಟೂರ್ನಿಯನ್ನು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: Commonwealth Games Women Cricket: ರೋಡ್ರಿಗಾಸ್ - ರೇಣುಕಾ ಸಿಂಗ್‌ ಮಿಂಚಿನ ಆಟ.. ಸೆಮಿಸ್​ಗೆ ಲಗ್ಗೆಯಿಟ್ಟ ಭಾರತ!

ಮೈಸೂರು: ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಕ್ರಿಕೆಟ್​ ಸರಣಿ ಆಗಸ್ಟ್​ 7ರಂದು ಮೈಸೂರಿನಲ್ಲಿ ಆರಂಭವಾಗಲಿದೆ. ಇದರ ಅಂಗವಾಗಿ ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ಮಹಾರಾಜ ಟ್ರೋಫಿಯ ಬ್ರಾಂಡ್ ರಾಯಭಾರಿಯಾಗಿರುವ ನಟ ಕಿಚ್ಚ ಸುದೀಪ್ ಆರು ತಂಡಗಳ ನಾಯಕರನ್ನು ಪ್ರಕಟಿಸಿ ಟ್ರೋಫಿಯನ್ನು ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಇಂತಹ ಪ್ರತಿಷ್ಠಿತ ಟೂರ್ನಿಗೆ ಬ್ರಾಂಡ್ ರಾಯಭಾರಿಯಾಗಿ ನೇಮಕಗೊಂಡಿರುವುದು ಸಂತಸ ತಂದಿದೆ. ಈ ಹೊಸ ಆವೃತ್ತಿ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ. ಈ ಹೊಸ ಆವೃತ್ತಿಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವುದು ಕ್ರಿಕೆಟ್ ಅಸ್ತಿತ್ವ ಮತ್ತು ಕ್ರೀಡೆಯ ಉಳಿವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಹಾರಾಜ ಟ್ರೋಫಿ: 6 ತಂಡಗಳ ನಾಯಕರ ಘೋಷಿಸಿ, ಟ್ರೋಫಿ ಅನಾವರಣಗೊಳಿಸಿದ ನಟ ಸುದೀಪ್​

6 ತಂಡಗಳ ನಾಯಕರ ಘೋಷಣೆ: ಈ ಬಾರಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಟೂರ್ನಿಯಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕರಾಗಿ ಭಾರತ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಜವಾಬ್ದಾರಿ ವಹಿಸಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು.

ಗುಲಬರ್ಗಾ ಮೈಸ್ಟಿಕ್ ತಂಡದ ನಾಯಕನ ಜವಾಬ್ದಾರಿಯನ್ನು ಮನೀಶ್ ಪಾಂಡೆ ಅವರಿಗೆ ನೀಡಲಾಗಿದೆ. ಮೈಸೂರು ವಾರಿಯರ್ಸ್​ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಅನುಭವಿ ಸ್ಪಿನ್ ಬೌಲರ್ ಕೆ.ಗೌತಮ್ ಶಿವಮೊಗ್ಗ ಸೈಕರ್ಸ್​ ತಂಡದ ನಾಯಕರಾಗಿ ಹಾಗೂ ಸಮರ್ಥ್​​ ಆರ್. ಮಂಗಳೂರು ಯುನೈಟೆಡ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೇಗದ ಬೌಲರ್ ಅಭಿಮನ್ಯು ಮಿಥುನ್ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಗಸ್ಟ್​​ 7ರಿಂದ ಮೈಸೂರಿನಲ್ಲಿ ಆರಂಭವಾಗಲಿರುವ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ-20 ಟೂರ್ನಿಯನ್ನು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: Commonwealth Games Women Cricket: ರೋಡ್ರಿಗಾಸ್ - ರೇಣುಕಾ ಸಿಂಗ್‌ ಮಿಂಚಿನ ಆಟ.. ಸೆಮಿಸ್​ಗೆ ಲಗ್ಗೆಯಿಟ್ಟ ಭಾರತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.