ETV Bharat / state

ಫಿಲ್ಮ್ ಸಿಟಿಗಾಗಿ ರಾಜಕಾರಣಿಗಳ ಹಗ್ಗಜಗ್ಗಾಟ: ಯಾವ ಜಿಲ್ಲೆಗಿದೆ ಈ ಭಾಗ್ಯ?

author img

By

Published : Dec 16, 2019, 7:25 PM IST

ರಾಜ್ಯದ ಯಾವ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡಿದರೆ ಸೂಕ್ತವೆಂದು ಗೊಂದಲಕ್ಕೆ ಬಿದ್ದಿರುವ ರಾಜಕಾರಣಿಗಳು‌ ಹಗ್ಗಜಗ್ಗಾಟದಲ್ಲೇ ದಿನ ದೂಡುತ್ತಿದ್ದಾರೆ.

acting-politician-on-paper-for-film-city
ಫಿಲ್ಮ್ ಸಿಟಿಗಾಗಿ ಕಾಗದದ ಮೇಲೆ ನಟನೆ ಮಾಡುತ್ತಿರುವ ರಾಜಕಾರಣಿಗಳು!

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು 5 ವರ್ಷಗಳ ಹಿಂದೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡ ಅನ್ನದಾತರರು ಸೂಕ್ತ ಪರಿಹಾರವೂ ಸಿಗದೇ, ಇತ್ತ ಉದ್ಯೋಗವೂ ಇಲ್ಲದೇ, ಖಾಲಿ ಮೈದಾನ ನೋಡಿಕೊಂಡು ತಿರುಗಾಡುವಂತಾಗಿದೆ. ಆದ್ರೆ ರಾಜಕಾರಣಿಗಳು ಮಾತ್ರ ಹಗ್ಗ ಜಗ್ಗಾಟದಲ್ಲೇ ದಿನಗಳನ್ನು ದೂಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಿಲಿಕಾನ್ ಸಿಟಿಯಷ್ಟೇ ವೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಫಿಲ್ಮ್ ಸಿಟಿ ಬರಲಿದೆ ಎಂದು ಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್ ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಈ ಸಂಬಂಧ ಸೆ.29ರ 2015ರಂದು ಒಪ್ಪಿಗೆ ಪಡೆದುಕೊಂಡರು.

ಅದರಂತೆ ಹಿಮ್ಮಾವು ಗ್ರಾಮಕ್ಕೆ ರಾಜೇಂದ್ರ ಬಾಬು ಸಿಂಗ್, ಅಂದಿನ ಜಿಲ್ಲಾಧಿಕಾರಿ ಶಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.

114 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದವು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡಬೇಕೆಂಬ ಹಂಬಲ ಹೊಂದಿದ್ದರು.

ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಅವರು ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೀಗ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಆಗಬೇಕು ಎನ್ನುವ ಕೂಗು ಎದ್ದಿದೆ. ಮುಂದೆ ಯಾವ ಜಿಲ್ಲೆಗೆ ಫಿಲ್ಮ್ ಸಿಟಿ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು 5 ವರ್ಷಗಳ ಹಿಂದೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡ ಅನ್ನದಾತರರು ಸೂಕ್ತ ಪರಿಹಾರವೂ ಸಿಗದೇ, ಇತ್ತ ಉದ್ಯೋಗವೂ ಇಲ್ಲದೇ, ಖಾಲಿ ಮೈದಾನ ನೋಡಿಕೊಂಡು ತಿರುಗಾಡುವಂತಾಗಿದೆ. ಆದ್ರೆ ರಾಜಕಾರಣಿಗಳು ಮಾತ್ರ ಹಗ್ಗ ಜಗ್ಗಾಟದಲ್ಲೇ ದಿನಗಳನ್ನು ದೂಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಸಿಲಿಕಾನ್ ಸಿಟಿಯಷ್ಟೇ ವೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಫಿಲ್ಮ್ ಸಿಟಿ ಬರಲಿದೆ ಎಂದು ಖ್ಯಾತ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್ ನಾಲ್ಕು ವರ್ಷದ ಹಿಂದೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮೈಸೂರಿನ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಈ ಸಂಬಂಧ ಸೆ.29ರ 2015ರಂದು ಒಪ್ಪಿಗೆ ಪಡೆದುಕೊಂಡರು.

ಅದರಂತೆ ಹಿಮ್ಮಾವು ಗ್ರಾಮಕ್ಕೆ ರಾಜೇಂದ್ರ ಬಾಬು ಸಿಂಗ್, ಅಂದಿನ ಜಿಲ್ಲಾಧಿಕಾರಿ ಶಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.

114 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವಂತೆ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದವು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡಬೇಕೆಂಬ ಹಂಬಲ ಹೊಂದಿದ್ದರು.

ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಅವರು ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೀಗ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಆಗಬೇಕು ಎನ್ನುವ ಕೂಗು ಎದ್ದಿದೆ. ಮುಂದೆ ಯಾವ ಜಿಲ್ಲೆಗೆ ಫಿಲ್ಮ್ ಸಿಟಿ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Intro:ಫಿಲ್ಮ್ ಸಿಟಿBody:ಫಿಲ್ಮ್ ಸಿಟಿಗಾಗಿ ಕಾಗದದ ಮೇಲೆ ನಟನೆ ಮಾಡುತ್ತಿರುವ ರಾಜಕಾರಣಿ!
ಮೈಸೂರು:

ವಾಯ್ಸ್: ರಾಜ್ಯದ ಯಾವ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಮಾಡಿದರೆ ಸೂಕ್ತವೆಂದು ಗೊಂದಲಕ್ಕೆ ಬಿದ್ದಿರುವ ರಾಜಕಾರಣಿಗಳು‌ ಕಾಗದದ ಮೇಲೆ ನಟನೆ ಮಾಡುತ್ತ ದಿನ ದೂಡುತ್ತಿದ್ದಾರೆ.

ವಿಡಿಯೋ 1: ನಮ್ಮ ಗ್ರಾಮದಲ್ಲಿ ಫೀಲ್ಮ್ ಸಿಟಿ ನಿರ್ಮಾಣವಾಗಲಿದೆ. ಜಮೀನು ಕೊಟ್ಟವರಿಗೆ ಪರಿಹಾರ ಜೊತೆ ಉದ್ಯೋಗ ಸಿಗಲಿದೆ ಎಂದು ನಂಬಿ ಭೂಮಿ ಕಳೆದುಕೊಂಡವರ ಸ್ಥಿತಿ ಅಯೋಮಯವಾಗಿದೆ.ಮೈಸೂರಿನ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ಫೀಲ್ಮ್ ಸಿಟಿ ನಿರ್ಮಾಣವಾಗಲಿದೆ ೫ ವರ್ಷದ ಹಿಂದೆ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡ ಅನ್ನದಾತರರು ಸೂಕ್ತ ಪರಿಹಾರವೂ ಸಿಗದೇ, ಇತ್ತ ಉದ್ಯೋಗವಿಲ್ಲದೇ, ಖಾಲಿ ಮೈದಾನ ನೋಡಿಕೊಂಡು ತಿರುಗಾಡುವಂತಾಗಿದೆ.

ವಿಡಿಯೋ2: ಸಿಲಿಕಾನ್ ಸಿಟಿಯಷ್ಟೆ ಬೇಗವಾಗಿ ತಾಂತ್ರಿಕತೆ ಹಾಗೂ ಉದ್ಯೋಗದಲ್ಲಿ ಬೆಳೆಯುತ್ತಿರುವ ಸಾಂಸ್ಕøತಿಕ ನಗರಿ ಮೈಸೂರಿಗೆ ಫೀಲ್ಮ್ಸಿಟಿ ಬರಲಿದೆ ಎಂದು ರಾಜೇಂದ್ರ ಬಾಬು ಸಿಂಗ್ ನಾಲ್ಕು  ವರ್ಷದಲ್ಲಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಂತರ  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಮೈಸೂರಿನ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ಸಿಟಿ ಸಂಬಂಧ  ಸೆ.29ರ 2015ರಂದು ಒಪ್ಪಿಗೆ ಪಡೆದುಕೊಂಡರು.
ಆದರಂತೆ ಹಿಮ್ಮಾವು  ಗ್ರಾಮಕ್ಕೆ  ರಾಜೇಂದ್ರ ಬಾಬು ಸಿಂಗ್, ಅಂದಿನ ಜಿಲ್ಲಾಧಿಕಾರಿ ಶಿ.ಶಿಖಾ ಸೇರಿದಂತೆ ಕನ್ನಡದ ಕೆಲ ನಟರು ಹಾಗೂ ಅಧಿಕಾರಿಗಳು ಅಲ್ಲಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು.

ವಿಡಿಯೋ 3: 114 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನೋಯ್ಡಾದಲ್ಲಿರುವ ಚಿತ್ರನಗರಿ ಮಾಡುವುದಾಗಿ ಮಾತುಕತೆಗಳು ಹರಿದಾಡಿದವು.ಆದರೆ ಒಂದು ವರ್ಷ ಕಳೆದು ಹೋಗುತ್ತಿದ್ದರು ಕನ್ನಡ ಚಿತ್ರರಂಗವಾಗಲಿ ಅಧಿಕಾರಿಗಳಾಗಲಿ ಅತ್ತ  ಮತ್ತೆ ಸುಳಿಯಲಿಲ್ಲ.
ಹಿಮ್ಮಾವು  ಹಾಗೂ ಅಡಕನಹಳ್ಳಿ ಹುಂಡಿ ಸಂಪರ್ಕ ಬೆಸೆಯುವ ಮಾರ್ಗ ಮಧ್ಯದಲ್ಲಿ ಫಿಲ್ಮ್ಸಿಟಿಗಾಗಿ ಸ್ಥಳ ನಿಗಧಿ ಮಾಡಲಾಯಿತು.ಇದರಿಂದ ಹಿಮ್ಮಾವು, ಅಡಕನಹಳ್ಳಿ ಹುಂಡಿ, ಬಿಂಚನಹಳ್ಳಿ, ತಾಂಡವಪುರ, ತಾಂಡ್ಯ, ಕಡಕೊಳ ಸೇರಿದಂತೆ ಅನೇಕ ಹಳ್ಳಿಗಳು ಅಭಿವೃದ್ಧಿಯಾಗಲಿದೆ ,ಸುತ್ತಮುತ್ತಲ್ಲ ಗ್ರಾಮಸ್ಥರಿಗೆ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯನ್ನು ಒಡಲಿಟ್ಟುಕೊಂಡು ಖುಷಿಯಲ್ಲಿದ್ದರು.ಆದರೆ 5 ನಾಲ್ಕು ವರ್ಷದಿಂದ ಯಾವುದೇ ಚಟುವಟಿಕೆಗಳು ನಡೆಯದೆ ಇರುವುದಿರಂದ ಅಲ್ಲಿಯ ಗ್ರಾಮಸ್ಥರು ಬೇಸರ ಗೊಂಡಿದ್ದಾರೆ.

ವಿಡಿಯೋ೪: ಪ್ರವಾಸೋದ್ಯಮಕ್ಕೂ ಅನುಕೂಲಕರವಾಗುತಿತ್ತು: ಮೈಸೂರು ಜಿಲ್ಲೆಯ ಅನತಿ ದೂರದಲ್ಲಿ ಹಿಮ್ಮಾವುನಲ್ಲಿ ಚಿತ್ರನಗರಿ ನಿರ್ಮಾಣ ಮಾಡಬೇಕೆಂದು ಕನ್ನಡ ಚಿತ್ರರಂಗದಲ್ಲಿರುವ ಅನೇಕರ ಆಸೆ. ನಗರ ಪ್ರದೇಶ ಹತ್ತಿರ ಹಾಗೂ ಸುಂದರ ವಾತಾವರಣವಿರುವುದರಿಂದ ಇಲ್ಲಿಗೆ ಬರಲು ಇಚ್ಛೆ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ಕೈಗಾರಿಕೆ ಪ್ರದೇಶವಿರುವುದರಿಂದ ಕೈಗಾರಿಕೆಗಳಿಗೆ ಒಂದು ರೀತಿಯಲ್ಲಿ ಸಹಾಯವಾಗುತ್ತಿತ್ತು.
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಒಳ್ಳೆಯ ವಾತಾವರಣವಿರುವುದರಿಂದ  ಚಿತ್ರನಗರಿ ನಿರ್ಮಾಣಕ್ಕೆ ಉತ್ತಮ ವೇದಿಕೆ ಸಿಕ್ಕಿತ್ತು. ಐದು ವರ್ಷಗಳ ಹಿಂದೆ ಸ್ಥಳಪರಿಶೀಲನೆ ಮಾಡಿ ಸುಮ್ಮನಿರುವುದರಿಂದ ಫೀಲ್ಮ್ ಸಿಟಿಗಾಗಿ ಭೂಮಿ ನೀಡಿದ ಅನ್ನದಾತರು ಬೇಸರ ಹಾಕಿದ್ದಾರೆ.

ಬೈಟ್
1)ಶ್ರೀನಿವಾಸ್,ಗ್ರಾಮಸ್ಥ( ಬಿಳಿ ಮೀಸೆ ಇರುವವವರು)
2) ಮಹದೇವ್

ವಿಡಿಯೋ5:
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಫೀಲ್ಮ್ ಸಿಟಿ ಮಾಡಬೇಕೆಂಬ ಹಂಬಲ ಹೊರತೋರಿದ್ದರು‌.
ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಅವರು ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಅಭಿಲಾಷೆ ಪಟ್ಟರು.
ಆದರೀಗ ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಫಿಲ್ಮ್ ಸಿಟಿ ಆಗಬೇಕು ಎನ್ನುವ ಕೂಗು ಎದ್ದಿದೆ.ಮುಂದಿನ ಯಾವ ಜಿಲ್ಲೆಗೆ ಫಿಲ್ಮ್ ಸಿಟಿ ಹೋಗುತ್ತೇ? ಸಾಂಸ್ಕೃತಿಕ ನಗರಿಯಲ್ಲಿಯೇ ಫಿಲ್ಮ್ ಸಿಟಿ ಆಗಲಿದ್ಯಾ ಕಾದು ನೋಡೋಣ.

ಈಟಿವಿ ಭಾರತ
ಮೈಸೂರು.Conclusion:ಫಿಲ್ಮ್ ಸಿಟಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.