ETV Bharat / state

ಆಟೋಗಳ ಡಿಕ್ಕಿ; ಚಾಲಕನ ಬಾಳಿಗೆ ಕತ್ತಲಾದ ಮಹಾಲಯ ಅಮಾವಾಸ್ಯೆ!

author img

By

Published : Sep 17, 2020, 6:44 PM IST

ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಯಮಸ್ವರೂಪಿಯಂತೆ ಬಂದ ಮತ್ತೊಂದು ಗೂಡ್ಸ್ ಆಟೋ ಡಿಕ್ಕಿ ಹೊಡೆದ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಕರಿಗಾಳ ಗ್ರಾಮದಲ್ಲಿ ನಡೆದಿದೆ.

A person killed in auto accident
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು

ಮೈಸೂರು: ಮಹಾಲಯ ಅಮಾವಾಸ್ಯೆ ನಿಮಿತ್ತ ನಾಲೆಯೊಂದರಲ್ಲಿ ತನ್ನ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಏಕಾಏಕಿ ಬಂದ ಮತ್ತೊಂದು ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಕರಿಗಾಳ ಗ್ರಾಮದಲ್ಲಿ ನಡೆದಿದೆ.

A person killed in auto accident
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು

ಪುಟ್ಟರಾಜು (40) ಮೃತ ವ್ಯಕ್ತಿ. ಅಮಾವಾಸ್ಯೆ ನಿಮಿತ್ತ ನಾಲೆಯಲ್ಲಿ ಆಟೋ ನಿಲ್ಲಿಸಿ ಅದನ್ನು ಸ್ವಚ್ಛಗೊಳಿಸುತ್ತಿದ್ದ. ಈ ವೇಳೆ ಇದ್ದಕ್ಕಿಂದ್ದಂತೆ ಯಮಸ್ವರೂಪಿಯಂತೆ ಬಂದ ಮತ್ತೊಂದು ಗೂಡ್ಸ್ ಆಟೋ ಈತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ‌ ರಭಸಕ್ಕೆ ಎರಡು ಆಟೋಗಳು ಪಲ್ಟಿಯಾಗಿವೆ. ಘಟನೆಯಲ್ಲಿ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿ ಪುಟ್ಟರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

A person killed in auto accident
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು

ಗೂಡ್ಸ್ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಈ ಸಂಬಂಧ ಹೆಚ್​.ಡಿ.ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಮಹಾಲಯ ಅಮಾವಾಸ್ಯೆ ನಿಮಿತ್ತ ನಾಲೆಯೊಂದರಲ್ಲಿ ತನ್ನ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಏಕಾಏಕಿ ಬಂದ ಮತ್ತೊಂದು ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಕರಿಗಾಳ ಗ್ರಾಮದಲ್ಲಿ ನಡೆದಿದೆ.

A person killed in auto accident
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು

ಪುಟ್ಟರಾಜು (40) ಮೃತ ವ್ಯಕ್ತಿ. ಅಮಾವಾಸ್ಯೆ ನಿಮಿತ್ತ ನಾಲೆಯಲ್ಲಿ ಆಟೋ ನಿಲ್ಲಿಸಿ ಅದನ್ನು ಸ್ವಚ್ಛಗೊಳಿಸುತ್ತಿದ್ದ. ಈ ವೇಳೆ ಇದ್ದಕ್ಕಿಂದ್ದಂತೆ ಯಮಸ್ವರೂಪಿಯಂತೆ ಬಂದ ಮತ್ತೊಂದು ಗೂಡ್ಸ್ ಆಟೋ ಈತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ‌ ರಭಸಕ್ಕೆ ಎರಡು ಆಟೋಗಳು ಪಲ್ಟಿಯಾಗಿವೆ. ಘಟನೆಯಲ್ಲಿ ಆಟೋ ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿ ಪುಟ್ಟರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

A person killed in auto accident
ಡಿಕ್ಕಿ ರಭಸಕ್ಕೆ ಪಲ್ಟಿಯಾಗಿ ಬಿದ್ದ ಆಟೋಗಳು

ಗೂಡ್ಸ್ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಈ ಸಂಬಂಧ ಹೆಚ್​.ಡಿ.ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.