ETV Bharat / state

ಮಗಳಿಗಾಗಿ ಮಗು ಕದ್ದ ತಂದೆ.. ಇನ್ನೂ ಸಿಗ್ತಿಲ್ಲ ಭಿಕ್ಷುಕಿಯ ಮೊದಲನೇ ಕಂದ! - ಮೈಸೂರು ಮಗು ಕಳ್ಳತನ,

ವ್ಯಕ್ತಿವೋರ್ವ ಭಿಕ್ಷುಕಿಯ ಮಗುವನ್ನು ಕದ್ದಿದ್ದ ಪ್ರಕರಣ ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ನಡೆದಿತ್ತು. ತನ್ನ ಮಗಳಿಗೆ ಮಕ್ಕಳಿಲ್ಲದ ಕೊರಗನ್ನು ನೋಡಲಾರದ ತಂದೆ ಈ ಕೃತ್ಯವೆಸಗಿದ್ದ ಎಂಬುದು ಈಗ ಬೆಳಕಿಗೆ ಬಂದಿದೆ.

man theft of child,  man theft of child for his daughter, Mysore child theft, Mysore child theft news, ಮಗು ಕದ್ದ ವ್ಯಕ್ತಿ, ಮಗಳಿಗಾಗಿ ಮಗು ಕದ್ದ ವ್ಯಕ್ತಿ, ಮೈಸೂರಿನಲ್ಲಿ ಮಗಳಿಗಾಗಿ ಮಗು ಕದ್ದ ವ್ಯಕ್ತಿ, ಮೈಸೂರು ಮಗು ಕಳ್ಳತನ, ಮೈಸೂರು ಮಗು ಕಳ್ಳತನ ಸುದ್ದಿ,
ಮಗಳಿಗಾಗಿ ಭಿಕ್ಷುಕಿಯ ಮಗುವನ್ನು ಕಂದ ತಂದೆ
author img

By

Published : Oct 6, 2020, 6:17 PM IST

ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಬಳಿ ಭಿಕ್ಷುಕಿಯ ಮಗು ಕದ್ದೊಯ್ದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡಿನಲ್ಲಿ ಮಗು ಅಪಹರಣ ಕೇಸ್ ಸುಖಾಂತ್ಯ ಕಂಡಿದ್ದು, ಘಟನೆ ನಡೆದ 3 ದಿನಗಳಲ್ಲೇ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಘಟನೆ ಹಿನ್ನೆಲೆ...

ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದ ಗಂಗರಾಜು (47) ಎಂಬಾತ ನಂಜನಗೂಡು ದೇವಸ್ಥಾನದ ಬಳಿ ಭಿಕ್ಷುಕಿ ಪಾರ್ವತಿ ಎಂಬಾಕೆಯ 3 ವರ್ಷದ ವರ್ಷದ ಮಗುವನ್ನ ಅಪಹರಿಸಿದ್ದ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ನಡೆದ 3 ದಿನಗಳಲ್ಲೇ ಅಪಹರಣ ಪ್ರಕರಣದಲ್ಲಿ ಪೊಲೀಸರು ಆರೋಪಿ ಗಂಗರಾಜುನನ್ನು ಬಂಧಿಸಿದ್ದರು.

ಮಗಳಿಗಾಗಿ ಕಳ್ಳತನ...

ನನ್ನ ಮಗಳಿಗೆ ನಾಲ್ಕು ವರ್ಷಗಳಿಂದ ಮಕ್ಕಳಾಗಿಲ್ಲ. ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ. ಹೀಗಾಗಿ ನಂಜನಗೂಡು ದೇವಾಲಯದ ಬಳಿ ಆಟವಾಡುತ್ತಿದ್ದ ಮಗುವನ್ನ ಅಪಹರಿಸಿ ನನ್ನ ಮನೆಗೆ ಕರೆ ತಂದಿದ್ದೆ ಎಂದು ಗಂಗರಾಜು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಅಪಹರಿಸಿ ಸಿಕ್ಕಿಬಿದ್ದ ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಸಿಗ್ತಿಲ್ಲ ಭಿಕ್ಷುಕಿಯ ಮೊದಲನೇ ಮಗು!

ನಾಲ್ಕು ವರ್ಷಗಳ ಹಿಂದೆ ಇದೇ ಭಿಕ್ಷುಕಿಯ ಗಂಡು ಮಗುವನ್ನ ಕೆಲವರು ಅಪಹರಿಸಿದ್ದರು. ಆದ್ರೆ ಆ ಮಗು ಈವರೆಗೆ ಪತ್ತೆಯಾಗದ ಹಿನ್ನೆಲೆ ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.

ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಬಳಿ ಭಿಕ್ಷುಕಿಯ ಮಗು ಕದ್ದೊಯ್ದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡಿನಲ್ಲಿ ಮಗು ಅಪಹರಣ ಕೇಸ್ ಸುಖಾಂತ್ಯ ಕಂಡಿದ್ದು, ಘಟನೆ ನಡೆದ 3 ದಿನಗಳಲ್ಲೇ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಘಟನೆ ಹಿನ್ನೆಲೆ...

ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದ ಗಂಗರಾಜು (47) ಎಂಬಾತ ನಂಜನಗೂಡು ದೇವಸ್ಥಾನದ ಬಳಿ ಭಿಕ್ಷುಕಿ ಪಾರ್ವತಿ ಎಂಬಾಕೆಯ 3 ವರ್ಷದ ವರ್ಷದ ಮಗುವನ್ನ ಅಪಹರಿಸಿದ್ದ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ನಡೆದ 3 ದಿನಗಳಲ್ಲೇ ಅಪಹರಣ ಪ್ರಕರಣದಲ್ಲಿ ಪೊಲೀಸರು ಆರೋಪಿ ಗಂಗರಾಜುನನ್ನು ಬಂಧಿಸಿದ್ದರು.

ಮಗಳಿಗಾಗಿ ಕಳ್ಳತನ...

ನನ್ನ ಮಗಳಿಗೆ ನಾಲ್ಕು ವರ್ಷಗಳಿಂದ ಮಕ್ಕಳಾಗಿಲ್ಲ. ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ. ಹೀಗಾಗಿ ನಂಜನಗೂಡು ದೇವಾಲಯದ ಬಳಿ ಆಟವಾಡುತ್ತಿದ್ದ ಮಗುವನ್ನ ಅಪಹರಿಸಿ ನನ್ನ ಮನೆಗೆ ಕರೆ ತಂದಿದ್ದೆ ಎಂದು ಗಂಗರಾಜು ತನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮಗಳ ಸಂತಾನ ಭಾಗ್ಯಕ್ಕಾಗಿ ಮಗು ಅಪಹರಿಸಿ ಸಿಕ್ಕಿಬಿದ್ದ ಗಂಗರಾಜುನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಸಿಗ್ತಿಲ್ಲ ಭಿಕ್ಷುಕಿಯ ಮೊದಲನೇ ಮಗು!

ನಾಲ್ಕು ವರ್ಷಗಳ ಹಿಂದೆ ಇದೇ ಭಿಕ್ಷುಕಿಯ ಗಂಡು ಮಗುವನ್ನ ಕೆಲವರು ಅಪಹರಿಸಿದ್ದರು. ಆದ್ರೆ ಆ ಮಗು ಈವರೆಗೆ ಪತ್ತೆಯಾಗದ ಹಿನ್ನೆಲೆ ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.

ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.