ಮೈಸೂರು: ಮಾರುಕಟ್ಟೆಯಲ್ಲಿ ಎಲೆ ಕೋಸಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆ ಎಲ್ಲವನ್ನು ವಾಪಸ್ ತಂದ ರೈತ, ತಮ್ಮ ಜಮೀನಿಗೆ ಸುರಿದು ಹಾಗೂ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬೆಳಯನ್ನೂ ನಾಶ ಮಾಡಿದ್ದಾರೆ.
ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿಯ ರೈತ ಮಹದೇವಣ್ಣ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಇದನ್ನು ಖರೀದಿಮಾಡಲು ಯಾರೊಬ್ಬರೂ ಬಾರದ ಕಾರಣ ಹಾಗೂ ಸರಿಯಾದ ಬೆಲೆ ಸಿಗದ ಕಾರಣ ಎಲ್ಲವನ್ನು ಮತ್ತೆ ಟ್ರ್ಯಾಕ್ಟರ್ಗೆ ತುಂಬಿಕೊಂಡು ಬಂದು ತಮ್ಮ ಜಮೀನಿನಲ್ಲಿ ಸುರಿದು ನಾಶ ಮಾಡಿದ್ದಾರೆ.
ಇನ್ನು ಕೆಲ ಜನರಿಗೆ ಉಚಿತವಾಗಿ ಎಲೆಕೋಸು ವಿತರಣೆ ಮಾಡಿದ್ದಾರೆ. ನಾಶ ಮಾಡಿದ ಎಲೆಕೋಸಿನ ಮೌಲ್ಯ ಐದು ಲಕ್ಷವಾಗಿದ್ದು, ರೈತ ಬೇಸರ ವ್ಯಕ್ತಪಡಿಸಿದ್ದಾರೆ.